ನವದೆಹಲಿ: ಕರ್ನಾಟಕದ (Karnataka) ಐದು ಜಿಲ್ಲೆಗಳಲ್ಲಿ ಅಂತರ್ಜಲದ (Ground Water) ವಿಪರೀತ ಬಳಕೆ ಆಗಿದೆ ಎಂದು ಕೇಂದ್ರ ಅಂತರ್ಜಲ ಮಂಡಳಿ (CGWB) ವರದಿ ತಿಳಿಸಿದೆ.
ಮಂಡಳಿಯು 2025ನೇ ಸಾಲಿನ ವರದಿಯನ್ನು ಬಿಡುಗಡೆ ಮಾಡಿದ್ದು, ಕೋಲಾರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ ಜಿಲ್ಲೆಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಅಂತರ್ಜಲ ಬಳಕೆ ಆಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಚಿಕ್ಕಮಗಳೂರು | ಅನುಸೂಯ ಜಯಂತಿ, ದತ್ತ ಮಾಲಾಧಾರಿಗಳಿಂದ ಶೋಭಾಯಾತ್ರೆ – 6000ಕ್ಕೂ ಅಧಿಕ ಪೊಲೀಸರಿಂದ ಸರ್ಪಗಾವಲು
ಬೆಂಗಳೂರು ದಕ್ಷಿಣ (ರಾಮನಗರ) ಹಾಗೂ ತುಮಕೂರು ಜಿಲ್ಲೆಗಳಲ್ಲಿ ಅಂತರ್ಜಲ ಸ್ಥಿತಿ ಗಂಭೀರವಾಗಿದೆ. ವಿಜಯನಗರ, ಬಾಗಲಕೋಟೆ, ಗದಗ, ಬೆಳಗಾವಿ, ಚಾಮರಾಜನಗರ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಅಂತರ್ಜಲದ ಅತಿ ಬಳಕೆ ಆಗಿದೆ ಎಂದು ವರದಿ ಉಲ್ಲೇಖಿಸಿದೆ. ಇದನ್ನೂ ಓದಿ: ನಾಳೆ ಡಿಕೆಶಿ ಮನೆಯಲ್ಲಿ ಸಿಎಂಗೆ ಬ್ರೇಕ್ಫಾಸ್ಟ್ – ನಾಟಿ ಕೋಳಿ ಸಾರು ಸ್ಪೆಷಲ್
ಅಂತರ್ಜಲ ಮರುಪೂರಣಕ್ಕಾಗಿ ಜಲಶಕ್ತಿ ಅಭಿಯಾನದಡಿ ರಾಜ್ಯದಲ್ಲಿ 17 ಲಕ್ಷ ಜಲ ಸಂರಕ್ಷಣೆ ಘಟಕಗಳನ್ನು ನಿರ್ಮಿಸಲಾಗಿದೆ. ಇದರಿಂದಾಗಿ, ಅಂತರ್ಜಲ ಮಟ್ಟ ಸ್ವಲ್ಪ ಹೆಚ್ಚಳ ಆಗಿದೆ. ರಾಜ್ಯದಲ್ಲಿ ಒಟ್ಟಾರೆ ಅಂತರ್ಜಲ ಬಳಕೆ ಪ್ರಮಾಣ 2024ರಲ್ಲಿ 68.44% ಇತ್ತು. 2025ರಲ್ಲಿ 66.49%ಗೆ ಇಳಿದಿದೆ ಎಂದು ವರದಿ ತಿಳಿಸಿದೆ. ಇದನ್ನೂ ಓದಿ: ಡಿಸಿಎಂ ಪರ ಒಕ್ಕಲಿಗ ಶ್ರೀಗಳ ಹೇಳಿಕೆ ವಿಚಾರ; ಪರ ವಿರೋಧಕ್ಕೆ ವೇದಿಕೆ – ಹೆಚ್ಡಿಕೆ ಆಕ್ಷೇಪಕ್ಕೆ ಶಾಸಕ ಬಾಲಕೃಷ್ಣ ತಕರಾರು

