ತುಮಕೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರ ಗರಡಿಯಲ್ಲಿ ನಾನು 30 ವರ್ಷ ಬೆಳೆದಿದ್ದೇನೆ. ನೀವು ಅವರ ಒಂದು ಮುಖ ಮಾತ್ರ ನೋಡಿದ್ದೀರಿ. ನಾನು ಅವರ ನಾಲ್ಕಾರು ಮುಖಗಳನ್ನು ನೋಡಿದ್ದೇನೆ ಎಂದು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ದೇವೇಗೌಡರ ಸ್ಪರ್ಧೆ ಕುರಿತು ಮಾತನಾಡಿದ ಅವರು, ಯಾರು ಯಾರನ್ನು ಗೆಲ್ಲಿಸುತ್ತಾರೆ, ಯಾರನ್ನು ಸೋಲಿಸುತ್ತಾರೆ. ಈ ಸುನಾಮಿಯನ್ನು ಯಾರು ಕಟ್ಟಿ ಹಾಕುತ್ತಾರೆ. ರಾಷ್ಟ್ರದಲ್ಲಿ ಸುಭದ್ರವಾದ ಸರ್ಕಾರ ಯಾರಿಂದ ಆಗುತ್ತದೆ ಎನ್ನುವುದನ್ನು ಈಗಾಗಲೇ ದೇವೇಗೌಡರು ತಿಳಿದುಕೊಂಡಿದ್ದಾರೆ. ಹೀಗಾಗಿ ಪರೋಕ್ಷವಾಗಿ ಮೋದಿ ಅಲೆ ತಡಯೋಕೆ ಆಗಲ್ಲ ಎಂದ್ರು.
ಕುಮಾರಸ್ವಾಮಿ ಸಿಎಂ ಆಗಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ರೀತಿ ನಡೆದುಕೊಳ್ತಿದ್ದಾರೆ. ಎಲ್ಲದಕ್ಕಿಂತ ಮಿಗಿಲಾಗಿದದ್ದು ರಾಷ್ಟ್ರದ ಜನ. ಜನರ ತೀರ್ಮಾನ ಏನೆಂದು ತಾವೇ ನೋಡ್ತಿರಾ ಎಂದು ಹೇಳಿದ್ರು.
ಅಪವಿತ್ರ ಮೈತ್ರಿ ಯಾವ ಮಟ್ಟಕ್ಕೆ ಬರುತ್ತದೆ ಎನ್ನುವುದನ್ನು ಏಪ್ರಿಲ್ 18 ರೊಳಗೆ ಕಾದು ನೋಡಿ. ದೇವೇಗೌಡರು 86 ಕಳೆದು 87ಕ್ಕೆ ಹೋಗುತ್ತಿದ್ದೇನೆ ನಮ್ಮ ಅವಶ್ಯಕತೆ ಎಷ್ಟರ ಮಟ್ಟಿಗೆ ಇದೆ ಎಂದು ಅವರೇ ಹೇಳಿದ್ದಾರೆ. ರಾಜ್ಯದಲ್ಲಿ ಎಚ್ಡಿಡಿಯನ್ನು ಬಿಟ್ಟು ಬೇರೆ ಮಾಜಿ ಪ್ರಧಾನಿಗಳನ್ನು ನೋಡೋಕ್ಕೆ ಆಗಲ್ಲ. ಅವರು ಆಶೀರ್ವಾದ ಮಾಡಿಕೊಂಡು ಇರಬಹುದು. ಮೊಮ್ಮಕ್ಕಳನ್ನು ಗೆಲ್ಲಿಸಿಕೊಂಡು, ರಾಷ್ಟ್ರ ರಾಜಕಾರಣದಲ್ಲಿ ರಾಜ್ಯಕ್ಕೆ ಏನೆಲ್ಲಾ ಕೊಡಬಹುದು ಎನ್ನುವ ಸಲಹೆ ನೀಡಬಹುದು. ವಯಸ್ಸಿನ ಬಗ್ಗೆ ಮಾತನಾಡಿರುವುದರಿಂದ ಅವರ ಸ್ಪರ್ಧೆ ಬಗ್ಗೆ ನನಗೆ ನಂಬಿಕೆಯಿಲ್ಲ ಅಂದ್ರು.