Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಅಧಿಕಾರವಿಲ್ಲದಿದ್ರೆ ಬಿಎಸ್‍ವೈ ಸತ್ತು ಹೋಗ್ತಿದ್ರು- ಎಸ್.ಆರ್.ಶ್ರೀನಿವಾಸ್ ವಿವಾದಾತ್ಮಕ ಹೇಳಿಕೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಅಧಿಕಾರವಿಲ್ಲದಿದ್ರೆ ಬಿಎಸ್‍ವೈ ಸತ್ತು ಹೋಗ್ತಿದ್ರು- ಎಸ್.ಆರ್.ಶ್ರೀನಿವಾಸ್ ವಿವಾದಾತ್ಮಕ ಹೇಳಿಕೆ

Districts

ಅಧಿಕಾರವಿಲ್ಲದಿದ್ರೆ ಬಿಎಸ್‍ವೈ ಸತ್ತು ಹೋಗ್ತಿದ್ರು- ಎಸ್.ಆರ್.ಶ್ರೀನಿವಾಸ್ ವಿವಾದಾತ್ಮಕ ಹೇಳಿಕೆ

Public TV
Last updated: October 3, 2019 6:20 pm
Public TV
Share
2 Min Read
TMK S R SRINIVAS a
SHARE

– ಮೋದಿ ಎದುರು ನಿಂತು ಮಾತಾಡೋ ಸಂಸದರಿಲ್ಲ

ತುಮಕೂರು: ಬಿಜೆಪಿ ನಾಯಕರಾದ ಬಿಎಸ್ ಯಡಿಯೂರಪ್ಪ ಅವರಿಗೆ ಅಧಿಕಾರವಿಲ್ಲದಿದ್ದರೆ ಅವರು ಸತ್ತು ಹೋಗುತ್ತಿದ್ದರು ಎಂದು ಮಾಜಿ ಸಚಿವ ಎಸ್.ಆರ್ ಶ್ರೀನಿವಾಸ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯ ನಾಯಕರು 100 ಬಾರಿ ಒಂದೇ ಸುಳ್ಳು ಹೇಳಿ ಅದನ್ನು ಸತ್ಯ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಬಹುಮತವಿಲ್ಲದಿದ್ದರು ಕೂಡ ನನಗೆ ಬಹುಮತವಿದೆ ಎಂದು ಹೇಳಿ ವಿಧಾನಸೌಧದಲ್ಲಿ ಬಿಎಸ್‍ವೈ ಭಾಷಣ ಮಾಡಿದ್ದರು. ಆದರೆ ಅಧಿಕಾರ ಪಡೆಯಲು ವಿಧಾನಸೌಧದಲ್ಲಿ 214 ಶಾಸಕರಲ್ಲಿ 213 ಶಾಸಕರು ಇರಬೇಕು ಎಂಬ ಕನಿಷ್ಠ ಜ್ಞಾನ ಅವರಿಗೆ ಇರಲಿಲ್ಲ. ವಾಮಮಾರ್ಗದ ಮೂಲಕ ಬಿಜೆಪಿಯವರು ಅಧಿಕಾರ ಪಡೆದುಕೊಂಡು ತಮಗೇನು ಗೊತ್ತಿಲ್ಲ ಎಂದು ಹೇಳುತ್ತಾರೆ. ಎಂತಹ ನಾಟಕ ಆಡುತ್ತಾರೆ ಎಂದು ಬಿಎಸ್‍ವೈ ಅವರ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.

BSY A

ಮೊದಲು ಬಿಎಸ್‍ವೈ ಗುಡುಗಿದರೆ ವಿಧಾನಸೌಧದಲ್ಲಿ ನಡುಗುತ್ತಾರೆ ಎಂಬ ಮಾತು ಇತ್ತು. ಆದರೆ ಇಂದು ಬಿಎಸ್‍ವೈ ದೆಹಲಿಗೆ ತೆರಳಿದರೆ ಅವರೇ ನಡುಗುತ್ತಾರೆ. ರಾಜ್ಯದ ಸ್ಥಿತಿ ನೋಡಿದರೆ ಸಮರ್ಥರಿಗೆ ಆಡಳಿತ ನೀಡಬೇಕಾಗಿತ್ತು ಎಂಬ ಅಂಶ ತಿಳಿಯುತ್ತದೆ. 25 ಸಂಸದರಲ್ಲಿ ಒಬ್ಬರು ಗಂ…. ಇಲ್ಲ. ಮೋದಿ ಎದುರು ನಿಂತು ಮಾತನಾಡುವ ಧೈರ್ಯ ಯಾರಿಗೂ ಇಲ್ಲ ಎಂದು ಆಕ್ಷೇಪಾರ್ಹ ಪದಗಳನ್ನು ಎಸ್.ಆರ್.ಶ್ರೀನಿವಾಸ್ ಉಪಯೋಗಿಸಿದರು. ಅಲ್ಲದೇ ಪ್ರವಾಹ ಸಂತ್ರಸ್ತರಿಗೆ ಪರಿಹಾರ ತರುವ ಯೋಗ್ಯತೆ ಸಂಸದರಿಗೆ ಇಲ್ಲ ಎಂದು ಆರೋಪಿಸಿದರು.

ಯಾರು ಶಕ್ತಿವಂತರು, ಹೋರಾಟಗಾರರು ಇದ್ದಾರೆ ಎಂಬುವುದು ನಮ್ಮ ರಾಜ್ಯ ಸರ್ಕಾರವನ್ನು ನೋಡಿದರೆ ತಿಳಿಯುತ್ತದೆ. ಸಮರ್ಥರಿಗೆ ಆಡಳಿತ ನೀಡದಿದ್ದರೆ ಏನಾಗುತ್ತದೆ ಎಂಬುವುದು ಜನರಿಗೆ ಈಗ ಅರ್ಥವಾಗುತ್ತಿದೆ. ಆದರೆ ಇಂದಿಗೂ ದೇವೇಗೌಡ ಅವರು ಹೋರಾಟ ಮಾಡಿ ಪಕ್ಷ ಕಟ್ಟುವ ಕಾರ್ಯದಲ್ಲಿ ನಡೆಸುತ್ತಿದ್ದಾರೆ. ದೇವೇಗೌಡರಿಗೆ ಮತ ನೀಡುವ ಬದಲು ಕ್ಷೇತ್ರದಲ್ಲಿ ಭ್ರಷ್ಟಾಚಾರ ನಡೆಸುವವರಿಗೆ ಅಧಿಕಾರ ನೀಡಿದ್ದೀರಿ. ಕ್ಷೇತ್ರದಲ್ಲಿ ಗೆಲುವು ಪಡೆದಿರುವವರು ನನ್ನ ಮುಂದೆ ಬಂದು ನಿಂತು ಮಾತನಾಡಲಿ. ಅಪ್ಪ-ಮಕ್ಕಳು ಇಬ್ಬರು ಕಳ್ಳರು ಎಂದು ಹೇಳಿ ಸಂಸದ ಜಿ.ಎಸ್.ಬಸವರಾಜ್ ವಿರುದ್ಧವೂ ಏಕವಚನದಲ್ಲಿ ಆರೋಪ ಮಾಡಿದರು.

TMK S R SRINIVAS COPY

ಎಚ್‍ಡಿಡಿಯಿಂದ ಅಂತರ: ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ಸೋತ ಬಳಿಕ ಮಾಜಿ ಸಚಿವ ಎಸ್.ಆರ್.ಶ್ರೀನಿವಾಸ್, ಎಚ್‍ಡಿಡಿ ಅವರಿಂದ ಅಂತರ ಕಾಯ್ದುಕೊಂಡರಾ? ಎಂಬ ಪ್ರಶ್ನೆ ಇಂದಿನ ಸಭೆಯಲ್ಲಿ ಕಾರ್ಯಕರ್ತರನ್ನು ಕಾಡಿತ್ತು. ಸದಾ ಕ್ಷೇತ್ರದಲ್ಲಿ ನಡೆಯುವ ಸಭೆಗಳಲ್ಲಿ ಎಚ್‍ಡಿಡಿ ಪಕ್ಕದಲ್ಲೇ ಇರುತ್ತಿದ್ದ ಎಸ್.ಆರ್.ಶ್ರೀನಿವಾಸ್ ಅವರು ಇಂದು ದೂರ ದೂರ ಕಂಡು ಬಂದರು. ವೇದಿಕೆ ಮೇಲೂ ಎಚ್‍ಡಿಡಿ ಅವರಿಂದ ಅಂತರ ಕಾಯ್ದುಕೊಂಡರು. ಇದಕ್ಕೂ ಮುನ್ನ ಭೈರವಿ ಮಹಿಳಾ ಸಂಘದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲೂ ಎಚ್‍ಡಿಡಿ ಅವರಿಂದ ದೂರ ಉಳಿದ ಎಸ್.ಆರ್.ಶ್ರೀನಿವಾಸ್, ಶಂಕು ಸ್ಥಾಪನೆ ನಡೆಯುತ್ತಿದ್ದರೂ ತಮ್ಮ ಪಾಡಿಗೆ ತಾವು ಉಪಾಹಾರ ಸೇವಿಸುತ್ತಿದ್ದರು. ಇತ್ತೀಚೆಗಷ್ಟೇ ಶ್ರೀನಿವಾಸ್ ಅವರು, ಎಚ್‍ಡಿ ಕುಮಾರಸ್ವಾಮಿ ಅವರ ವಿರುದ್ಧ ಅಸಮಾಧಾನ ಹೊರಹಾಕಿದ್ದರು.

TAGGED:bs yeddyurappajdsPublic TVSR Srinivastumkuruಎಸ್.ಆರ್.ಶ್ರೀನಿವಾಸ್ಜೆಡಿಎಸ್ತುಮಕೂರುಪಬ್ಲಿಕ್ ಟಿವಿಬಿಎಸ್ ಯಡಿಯೂರಪ್ಪ
Share This Article
Facebook Whatsapp Whatsapp Telegram

Cinema news

Anushka Shetty
ಸ್ವೀಟಿ ಅನುಷ್ಕಾಗೆ ಕಂಕಣ ಭಾಗ್ಯ – ಬೆಂಗಳೂರು ಮೂಲದ ಉದ್ಯಮಿ ಜೊತೆ ಮದ್ವೆ?
Cinema Latest South cinema
Hansika Motwani Sohael Khaturiya
ಉದ್ಯಮಿ‌ ಸೊಹೇಲ್‌ ಜೊತೆಗಿನ 4 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯಹಾಡಿದ ‘ಬಿಂದಾಸ್‌’ ನಟಿ
Cinema Latest South cinema Top Stories
d53acfe5 1562 41db 9d81 d5b390041c73
ಪ್ರಿಯಕರ ಫರ್ಮಾನ್‌ ಖಾನ್‌ ಜೊತೆ ಕುಂಭಮೇಳದ ವೈರಲ್‌ ತಾರೆ ಮೊನಾಲಿಸಾ ಮದುವೆ
Cinema Latest Main Post
Monalisa Viral Video
ಮದುವೆಗೆ ಬಲವಂತ ಆರೋಪ; ಪೊಲೀಸ್‌ ಠಾಣೆ ಮೆಟ್ಟಿಲೇರಿದ ‘ಕುಂಭಮೇಳ ಚೆಲುವೆ’ ಮೊನಾಲಿಸಾ
Cinema Latest Main Post

You Might Also Like

Donald Trump Kharg Island
Latest

ಇಲ್ಲಿವರೆಗೆ ಹೊಡೆದಿದ್ದು ಮೋಜಿಗಾಗಿ ಅಷ್ಟೇ.. ಇನ್ಮುಂದೆ ದಾಳಿ ಮತ್ತಷ್ಟು ತೀವ್ರ: ಇರಾನ್‌ಗೆ ಟ್ರಂಪ್‌ ವಾರ್ನಿಂಗ್

Public TV
By Public TV
15 minutes ago
Gas Emergency In ashrams In Bengaluru
Bengaluru City

ದೃಷ್ಟಿಹೀನ, ಬುದ್ಧಿಮಾಂದ್ಯ ಮಕ್ಕಳಿರುವ ಆಶ್ರಮದಲ್ಲೂ ಸಿಲಿಂಡರ್ ಸಮಸ್ಯೆ – ಊಟಕ್ಕೂ ಪರದಾಟ, ಗ್ಯಾಸ್‌ಗಾಗಿ ಪತ್ರ

Public TV
By Public TV
24 minutes ago
Pinarayi Vijayan
Latest

ಶಬರಿಮಲೆ ವಿಚಾರದಲ್ಲಿ ಪಿಣರಾಯಿ ಯೂಟರ್ನ್ – ಮಹಿಳೆಯರ ಪ್ರವೇಶ ಹಿಂದಿನ ನಿಲುವು ಬದಲಾಯಿಸಿದ ಸರ್ಕಾರ

Public TV
By Public TV
8 hours ago
Iran warned UAE residents
Latest

ಯುಎಇ ಬಂದರು ಪ್ರದೇಶಗಳಿಂದ ಹೊರಗೆ ಹೋಗಿ: ಜನರಿಗೆ ಇರಾನ್‌ ಎಚ್ಚರಿಕೆ

Public TV
By Public TV
8 hours ago
Crime 3
Latest

ಮಂಗ ಓಡಿಸಲು ಹೋದವನ ದುರಂತ ಅಂತ್ಯ – ಕೈಯಲ್ಲಿದ್ದ ಎರ್‌ಗನ್‌ನಿಂದ ಹಾರಿದ ಗುಂಡಿಗೆ ಯುವಕ ಬಲಿ

Public TV
By Public TV
9 hours ago
01 8
Big Bulletin

ಬಿಗ್‌ ಬುಲೆಟಿನ್‌ 14 March 2026 ಭಾಗ-1

Public TV
By Public TV
9 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?