ಚಿಕ್ಕಬಳ್ಳಾಪುರ: ಬರೀ ಐದೇ ನಿಮಿಷದಲ್ಲಿ ಇಡೀ ಚಿಕ್ಕಬಳ್ಳಾಪುರ ಜಿಲ್ಲೆಯ ಬರ ಪರಿಶೀಲನೆಯನ್ನ ಮಾಜಿ ಸಿಎಂ ಯಡಿಯೂರಪ್ಪ ಮುಗಿಸಿದ್ದಾರೆ.
ಕೋಲಾರ ಜಿಲ್ಲೆಯ ಬರ ಪ್ರವಾಸ ಮುಗಿಸಿ ಸಂಜೆ 5 ಗಂಟೆ 10 ನಿಮಿಷ ಸುಮಾರಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಬರ ಪ್ರವಾಸಕ್ಕೆ ಆಗಮಿಸಿದ ಯಡಿಯೂರಪ್ಪ ಮತ್ತು ತಂಡ ಚಿಕ್ಕಬಳ್ಳಾಪುರ ತಾಲ್ಲೂಕಿನ ಗಿಡ್ನಹಳ್ಳಿ ಬಳಿ ರಸ್ತೆ ಬದಿಯೇ ಇರುವ ರೈತ ಜಯರಾಮ್ ರವರ ಹಿಪ್ಪುನೇರಳೆ ತೋಟಕ್ಕೆ ಭೇಟಿ ನೀಡಿ ಬರ ಪರಿಶೀಲನೆ ನಡೆಸಿದರು. ವಿಫಲ ಕೊಳವೆಬಾವಿಯ ಬಗ್ಗೆ ರೈತನ ಬಳಿ ಮಾಹಿತಿ ಪಡೆದ ಯಡಿಯೂರಪ್ಪ ವಿದ್ಯುತ್ ಸಮಸ್ಯೆ ಬಗ್ಗೆ ಮಾಹಿತಿ ಪಡೆದು ಓಣಗಿದ ರಾಗಿ ಬೆಳೆ ವೀಕ್ಷಣೆ ಮಾಡಿದರು. ಇದೆಲ್ಲವೂ ಕೇವಲ 5 ನಿಮಿಷದಲ್ಲಿ ನೋಡಿದ್ದಾರೆ ಅನ್ನೋದು ವಿಶೇಷ.
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ನೇರವಾಗಿ ಚಿಕ್ಕಬಳ್ಳಾಪುರ ಜಿಲ್ಲಾಢಳಿತ ಭವನಕ್ಕೆ ಅಗಮಿಸಿದ ಯಡಿಯೂರಪ್ಪ ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್ ಜೊತೆ ಜಿಲ್ಲೆಯ ಬರದ ಬಗ್ಗೆ ಚರ್ಚಿಸಿ ಅಂಕಿ ಸಂಖ್ಯೆಗಳ ಮಾಹಿತಿ ಪಡೆದುಕೊಂಡರು. ಹೀಗಾಗಿ ಬರೀ ಕೇವಲ ಜಿಲ್ಲೆಯ ಒಂದು ಕಡೆ ಮಾತ್ರ ಬರ ಪರಿಶೀಲನೆ ನಡೆಸಿ, ಅದು 5 ನಿಮಿಷದಲ್ಲಿಯೇ ಇಡೀ ಜಿಲ್ಲೆಯ ಬರ ಅಧ್ಯಯನ ಮಾಡಿದ ಯಡಿಯೂರಪ್ಪ ನವರ ನಡೆ ಇದೆಂಥಾ ಬರ ಅಧ್ಯಯನ ಅಂತ ಹಲವರಲ್ಲಿ ಪ್ರಶ್ನೆ ಮೂಡುವಂತೆ ಮಾಡಿತ್ತು.
ಜಿಲ್ಲೆಯ ಗಡಿ ತಾಲೂಕುಗಳಾದ ಬಾಗೇಪಲ್ಲಿ, ಚಿಂತಾಮಣಿ, ಗುಡಿಬಂಡೆ ಭಾಗದಲ್ಲಿ ತೀವ್ರತರವಾದ ಬರದಿಂದ ಜನ ಕಂಗೆಟ್ಟಿದ್ದರು. ಆ ಕಡೆಗೆ ರಾಜ್ಯ ಸರ್ಕಾರದ ಬರ ಸಂಪುಟದ ಉಪಸಮಿತಿ ಸಹ ಭೇಟಿ ನೀಡಿರಲಿಲ್ಲ. ಈಗ ವಿರೋಧ ಪಕ್ಷದ ನಾಯಕರಾದ ಯಡಿಯೂರಪ್ಪ ನವರು ಭೇಟಿ ಮಾಡಲಿಲ್ಲ. ಹೀಗಾಗಿ ಬರ ಅಧ್ಯಯನ ಅನ್ನೋದು ಕಾಟಚಾರಕ್ಕೆ ಮಾಡಿದ್ರಾ ಅನ್ನೋ ಪ್ರಶ್ನೆ ಎದುರಾಗುವಂತೆ ಮಾಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv