ಚಿತ್ರದುರ್ಗ: ಪೂಜೆಗಾಗಿ ಹೆತ್ತ ತಾಯಿಯ ರುಂಡವನ್ನೇ ಕಡಿದು ಭೀಕರವಾಗಿ ಕೊಲೆಗೈದ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ದುಮ್ಮಿಗೊಲ್ಲರ ಹಟ್ಟಿಯಲ್ಲಿ ಮಂಗಳವಾರ ರಾತ್ರಿ ಸುಮಾರು 9 ಗಂಟೆಗೆ ನಡೆದಿದೆ.
ಸಾವಿತ್ರಮ್ಮ (60) ಮಗನಿಂದ ಹತಳಾದ ತಾಯಿ. ತಿಮ್ಮರಾಜು ಎಂಬುವನೇ ತಾಯಿಯ ರುಂಡವನ್ನು ಕಡಿದು ಕೊಲೆ ಮಾಡಿದ ವ್ಯಕ್ತಿ. ಎರಡು ವರ್ಷಗಳ ಹಿಂದೆ ತಿಮ್ಮರಾಜುನ ಹೆಂಡತಿ ಮನೆ ಬಿಟ್ಟು ಹೋಗಿದ್ದಳು. ಇದರಿಂದ ಮಾನಸಿಕ ಅಸ್ವಸ್ಥನಾದ ತಿಮ್ಮರಾಜು ಪ್ರತಿದಿನ ತಾಯಿಯ ಜೊತೆ ಜಗಳ ಮಾಡುತ್ತಿದ್ದನು ಎನ್ನಲಾಗಿದೆ.
ಮೈಮೇಲೆ ದೇವರು ಬಂದು ತಾಯಿಯನ್ನು ಕೊಲೆ ಮಾಡಲು ಹೇಳಿತು. ಹಾಗಾಗಿ ಕೊಲೆ ಮಾಡಿದ್ದೇನೆ ಎಂದು ಇದೀಗ ತಿಮ್ಮರಾಜು ಪೊಲೀಸ್ ವಿಚಾರಣೆ ವೇಳೆಯಲ್ಲಿ ತಿಳಿಸಿದ್ದಾನೆ. ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.