ದೇವಾಲಯ ಒಡೆದು ಮಸೀದಿ ನಿರ್ಮಾಣ ಮಾಡಿದ್ದಕ್ಕೆ ಸಾಕ್ಷ್ಯ ಮಂಗಳೂರಿನಲ್ಲಿ ಸಿಕ್ಕಿದೆ: ಸಿ.ಟಿ ರವಿ

Public TV
1 Min Read
CT RAVI 1

ಚಿಕ್ಕಮಗಳೂರು: ದೇವಾಲಯ ಒಡೆದು ಮಸೀದಿ ನಿರ್ಮಾಣ ಮಾಡಿದ್ದಕ್ಕೆ ಮಂಗಳೂರಿನಲ್ಲಿ ಸಾಕ್ಷ್ಯ ಸಿಕ್ಕಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.

Mng 21 4 22 Temple Darga Photos 4

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 32 ಸಾವಿರಕ್ಕೂ ಅಧಿಕ ದೇವಾಲಯಗಳ ನಾಶ ಮಾಡಿ ಮಸೀದಿ, ದರ್ಗಾ ನಿರ್ಮಿಸಿದ್ದಾರೆ ಎಂದು ಹೇಳುತ್ತಿದ್ವಿ. ಅಂಗೈ ಹುಣ್ಣಿಗೆ ದಾಖಲೆ ಬೇಕಿಲ್ಲ, ಮುಸಲ್ಮಾನರೇ ದಾಖಲೆಗಳಲ್ಲಿ ವೈಭವೀಕರಿಸಿ ಹೇಳಿಕೊಂಡಿದ್ದಾರೆ. ಶಿವ, ವಿಷ್ಣು, ರಾಮ ಮಂದಿರ ನಾಶ ಮಾಡಿದೆವು ಎಂದು ಅವರೇ ಹೇಳಿಕೊಂಡಿದ್ದಾರೆ. ಸಾಕ್ಷಿ ಕೇಳುವ ಜಾತ್ಯಾತೀತ ಸೋಗಲಾಡಿ ಮೂರ್ಖರಿಗೆ ಮಂಗಳೂರಲ್ಲಿ ಸಾಕ್ಷಿ ಸಿಕ್ಕಿದೆ ಎಂದು ತಿಳಿಸಿದರು.  ಇದನ್ನೂ ಓದಿ: ನವೀಕರಣಕ್ಕಾಗಿ ದರ್ಗಾ ಕೆಡವಿದಾಗ ಪ್ರಾಚೀನ ಕಾಲದ ದೇವಸ್ಥಾನ ಪತ್ತೆ

CT RAVI

ಈಗಲೂ ಇಸ್ಲಾಂ ಶಾಂತಿಗಾಗಿ ಎಂದು ಯಾರಾದರೂ ಹೇಳಿದರೆ ಅವರಿಂದ ರಾಷ್ಟ್ರ ಉಳಿಯಲು ಸಾಧ್ಯವಿಲ್ಲ. ನಾಶ ಮಾಡಿಯೇ ಅದು ಬೆಳೆದಿರೋದು, ಮತ್ತೆ ಹೇಳ್ತೀನಿ ನಾಶ ಮಾಡಿಯೇ ಅದು ಬೆಳೆದಿರೋದು. 28 ದೇಶದ ನಾಗರೀಕತೆ ನಾಶ ಮಾಡಿ ಅದು ಬೆಳೆದಿದೆ. ಭಾರತದ ಬಹುಭಾಗವನ್ನ ನಾವು ಕಳೆದುಕೊಂಡಿದ್ದೇವೆ. ಸಿಂಧೂ ನದಿ ನಾಗರೀಕತೆಯನ್ನ ಯಾರು ನಾಶ ಮಾಡಿದ್ದು, ಇಸ್ಲಾಂ ನಾಶ ಮಾಡಿದ್ದು. ಅದನ್ನ ಹೇಳಲು ಕೆಲವರಿಗೆ ಗೊತ್ತು ಹೇಳಲ್ಲ ಎಂದರು. ಇದನ್ನೂ ಓದಿ: ಲಂಡನ್‌ನಲ್ಲಿ ತಲೆಮರೆಸಿಕೊಂಡಿರುವ ವಿಜಯ್‌ ಮಲ್ಯ, ನೀರವ್‌ ಮೋದಿ ಬಗ್ಗೆ ಬೋರಿಸ್‌ ಹೇಳಿದ್ದೇನು?

 MNG TEMPLE DARGA

ನಮಗೆ ಗೊತ್ತು ಆ ಸತ್ಯವನ್ನ ಹೇಳುತ್ತೇವೆ. ಯಾಕಂದ್ರೆ, ಗಲಾಭೆ ಹುಟ್ಟಾಕಲು ಅಲ್ಲ, ದೇಶ ಉಳಿಯಲು. ಸತ್ಯ ಒಪ್ಪಿಕೊಳ್ಳಲಿ ಇಲ್ಲ ಈಗಲೇ ಮತಾಂತರ ಆಗೋರಿದ್ರೆ ಆಗಲಿ, ನಾವು ನೇರವಾಗಿ ಎದುರಿಸುತ್ತೇವೆ. ಹಿಂದೂ ಹೆಸರಲ್ಲಿ ಹಿಂದೂ ಧರ್ಮಕ್ಕೆ ದ್ರೋಹ ಮಾಡೋದು ಬೇಡ ಎಂದು ತಿಳಿಸಿದರು. ಇದನ್ನೂ ಓದಿ: ಕುಂಕುಮ ಇಟ್ಟವರು ಯಾರು ಬಾಂಬ್ ಹಾಕಿಲ್ಲ, ಬಾಂಬ್ ಹಾಕೋರು ಟೋಪಿ ಹಾಕಿದವರು: ಸಿ.ಟಿ ರವಿ

Share This Article
Leave a Comment

Leave a Reply

Your email address will not be published. Required fields are marked *