– ಹೊರ ರಾಜ್ಯದಿಂದ ಬಂದವರ ಹಾವಳಿ ಹೆಚ್ಚಾಗಿದೆ ಎಂದ ಚಾಲಕ
– ಕೂಡಲೇ ಆಕೆಯನ್ನ ಅರೆಸ್ಟ್ ಮಾಡಬೇಕು ಎಂದು ಒತ್ತಾಯ
ಬೆಂಗಳೂರು: ಆಟೋ ಚಾಲಕನಿಗೆ (Auto Driver) ಹಿಂದಿಯಲ್ಲಿ ಆವಾಜ್ ಹಾಕಿ ಚಪ್ಪಲಿಯಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ತಪ್ಪು ಇಲ್ಲದಿದ್ದರೂ ನನ್ನ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾದ ಆಟೋ ಚಾಲಕ ಲೋಕೇಶ್ ಹೇಳಿದ್ದಾರೆ.
ಈ ಕುರಿತು ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ನನ್ನ ಪಾಡಿಗೆ ನಾನು ರೈಟ್ ಸೈಡಿಗೆ ಆಟೋ ಚಲಾಯಿಸಿದೆ. ಯಾರೋ ಕೂಗಾಡೋದು ಕೇಳಿಸಿತು. ಹಿಂದೆ ತಿರುಗಿ ನೋಡಿದೆ. ಮಹಿಳೆಯೊಬ್ಬರು ಕೈ ತೋರಿಸಿ ಬೈಯುತ್ತಿದ್ದರು. ಆಟೋ ಸೈಡಿಗೆ ಹಾಕಿದ ಕೂಡಲೇ ಬಂದು ಹಿಂದಿಯಲ್ಲಿ ಕೆಟ್ಟದಾಗಿ ಬೈಯ್ಯಲು ಶುರು ಮಾಡಿದರು. ಕೂಡಲೇ ನಾನು ಮೊಬೈಲ್ ಅಲ್ಲಿ ರೆಕಾರ್ಡ್ ಮಾಡಲು ಶುರು ಮಾಡಿದೆ. ನೀವು ನನ್ನ ಯಾಕೆ ಬೈತೀರಿ? ನಾನೇನು ಮಾಡಿದೆ ಎಂದೆ. ಆಟೋ ನನ್ನ ಕಾಲಿಗೆ ಟಚ್ ಮಾಡಿದೆ, ನನ್ನ ಕಾಲ ಮೇಲೆ ಚಕ್ರ ಹತ್ತಿಸಿದ್ಯಾ ಎಂದರು. ಇಲ್ಲ ಎಂದು ಹೇಳಿದ ಕೂಡಲೇ ಚಪ್ಪಲಿಯಲ್ಲಿ ಹೊಡೆಯಲು ಶುರು ಮಾಡಿದರು. ಇಷ್ಟೆಲ್ಲಾ ಆಗುತ್ತಿದ್ದರೂ ಆಕೆಯ ಜೊತೆಗೆ ಇದ್ದ ಗಂಡ ವೀಡೀಯೊ ಮಾಡುತ್ತಿದ್ದ ಎಂದರು. ಇದನ್ನೂ ಓದಿ: ಬೆಂಗಳೂರು | ಆಟೋ ಚಾಲಕನಿಗೆ ಹಿಂದಿಯಲ್ಲಿ ಯುವತಿಯ ಆವಾಜ್ – ಚಪ್ಪಲಿಯಲ್ಲಿ ಹಲ್ಲೆ ನಡೆಸಿ ಕ್ರೌರ್ಯ
ಸುತ್ತಲು ಇದ್ದ ವಾಹನ ಸವಾರರು ಮಾತಲ್ಲಿ ಬಗೆಹರಿಸಿ ಎಂದು ಹೇಳಿದರೂ ಕೇಳಲಿಲ್ಲ. ಏಕಾಏಕಿ ಚಪ್ಪಲಿಯಿಂದ ಮುಖ, ಎದೆ, ಮೈ ಮೇಲೆ ಹೊಡೆದರು. ಪೊಲೀಸ್ ಸ್ಟೇಷನ್ಗೆ ಹೋಗೋಣ ಎಂದು ಯುವತಿ ಹೇಳಿದರು. ಸರಿ ಎಂದು ನಾನು ಸ್ಟೇಷನ್ ಬಳಿ ಬಂದೆ. ಆದರೇ ಆಕೆ ಮಾತ್ರ ಬಂದಿಲ್ಲ. ಈಗಾಗಲೇ ಮಹಿಳೆ ಮೇಲೆ ಎಫ್ಐಆರ್ ಆಗಿದೆ. ಚಪ್ಪಲಿಯಲ್ಲಿ ಹಲ್ಲೆ ಮಾಡಿದ ಆಕೆಯ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಪತ್ತೆ ಹಚ್ಚುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗಳೂರು ಹೊರವಲಯದಲ್ಲಿ ಚಿರತೆ ಪ್ರತ್ಯಕ್ಷ – ಬೋನ್ ಅಳವಡಿಸಿ ಪತ್ತೆ ಕಾರ್ಯಾಚರಣೆ
ನನಗೆ ನ್ಯಾಯ ಸಿಗಬೇಕು, ಆಕೆಯ ವಿರುದ್ಧ ಕ್ರಮ ಆಗಬೇಕು. ಚಪ್ಪಲಿಯಲ್ಲಿ ಏಕಾಏಕಿ ಹಲ್ಲೆ ಮಾಡುತ್ತಾರೆ ಅಂದರೆ ಏನರ್ಥ? ನಾನು ಕೇಂದ್ರ ಸರ್ಕಾರದ ಉದ್ಯೋಗಿ ಅಂದರು. ಹೊರ ರಾಜ್ಯದಿಂದ ಬಂದವರ ಹಾವಳಿ ಹೆಚ್ಚಾಗಿದೆ. ಚಪ್ಪಲಿಯಲ್ಲಿ ಹೊಡೆದರೂ ಹೆಣ್ಣು ಎಂಬ ಕಾರಣಕ್ಕೆ ನಾನು ಸುಮ್ಮನಾದೆ. ಕೂಡಲೇ ಆಕೆಯನ್ನು ಅರೆಸ್ಟ್ ಮಾಡಬೇಕು. ಮುಂದೆ ಈ ರೀತಿ ಆಗದಂತೆ ಕ್ರಮ ಜರುಗಿಸಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: Miss World | ಥಾಯ್ಲೆಂಡ್ನ ಒಪಾಲ್ ಸುಚಾತಾಗೆ 72ನೇ ವಿಶ್ವ ಸುಂದರಿ ಕಿರೀಟ
ಇನ್ನು ಆಟೋ ಚಾಲಕನ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದನ್ನು ಆಟೋ ಚಾಲಕರು ಖಂಡಿಸಿದ್ದಾರೆ. ಚಪ್ಪಲಿಯಿಂದ ಹಲ್ಲೆ ವಿಚಾರ ತಿಳಿಯುತ್ತಿದ್ದಂತೆ ಠಾಣೆ ಬಳಿ ನೂರಾರು ಆಟೋ ಚಾಲಕರು ಸೇರಿದ್ದಾರೆ. ಎಫ್ಐಆರ್ ಆಗುವವರೆಗೆ ಠಾಣೆ ಮುಂದೆ ಆಟೋ ಚಾಲಕರು ಜಮಾಯಿಸಿದ್ದರು. ಕೂಡಲೇ ಚಪ್ಪಲಿಯಿಂದ ಹಲ್ಲೆ ಮಾಡಿದ ಮಹಿಳೆ ಬಂಧನ ಮಾಡಬೇಕು. ಆಟೋ ಚಾಲಕರ ಮೇಲೆ ಈ ರೀತಿ ಪರರಾಜ್ಯದವರ ಹಲ್ಲೆಗಳು ಹೆಚ್ಚಾಗುತ್ತಿವೆ. ಹಲ್ಲೆ ಮಾಡಿದರೆ ಯಾರೂ ಕೇಳಲ್ಲ ಎನ್ನುವಂತಾಗಿದೆ. ಎಲ್ಲಾ ಆಟೋ ಸಂಘಟನೆಗಳು ಒತ್ತಾಯ ಮಾಡುತ್ತಿದ್ದೇವೆ. ಕೂಡಲೇ ಆಕೆಯ ಬಂಧನ ಆಗಬೇಕು. ಹೊರರಾಜ್ಯದವರಿಗೆ ಕಡಿವಾಣ ಹಾಕಬೇಕು. ಆಟೋ ಚಾಲಕರ ತಪ್ಪಿದ್ದರೇ ಇಷ್ಟೊತ್ತಿಗೆ ಸೋಶಿಯಲ್ ಮೀಡಿಯಾದಲ್ಲಿ ಬೆಂಗಳೂರು ಸೇಫ್ ಅಲ್ಲ ಎಂದು ಟ್ರೆಂಡ್ ಮಾಡುತ್ತಿದ್ದರು. ಈಗ ಎಲ್ಲರೂ ಬಾಯಿ ಮುಚ್ಚಿಕೊಂಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಮಳೆ ಅಬ್ಬರ; 5 ತಿಂಗಳು ಬೆಂಗಳೂರು, ಮಂಗಳೂರು ರೈಲು ಸಂಚಾರ ಸ್ಥಗಿತ