ನಾನು ಸಚಿವ ಸ್ಥಾನದ ಆಕಾಂಕ್ಷಿ: ತುಮಕೂರು ಸಂಸದ ಬಸವರಾಜು

Public TV
1 Min Read
g.s basavaraju

ನವದೆಹಲಿ: ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಆದರೆ ಮಂತ್ರಿ ಆಗೇ ಆಗುತ್ತೇನೆ ಎನ್ನುವ ಗ್ಯಾರಂಟಿ ಇಲ್ಲ ತುಮಕೂರು ನೂತನ ಸಂಸದ ಜಿ.ಎಸ್ ಬಸವರಾಜು ತಿಳಿಸಿದ್ದಾರೆ.

ಈ ಬಗ್ಗೆ ನವದೆಹಲಿಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಬಸವರಾಜು, ನಾನೊಬ್ಬ ಆಕಾಂಕ್ಷಿ ಅಲ್ಲ. ಆದರೆ ಆಕಾಂಕ್ಷಿ ಅಂದರೆ 100ಕ್ಕೆ 100 ಮಂತ್ರಿ ಆಗುತ್ತೇನೆ ಎಂದಲ್ಲ. ಸಚಿವ ಸ್ಥಾನ ಕೊಟ್ಟರೆ ನಾನು ಒಪ್ಪಿಕೊಳ್ಳುತ್ತೇನೆ ಎಂದರು.

G.S.Basavaraju

ನನ್ನನ್ನು ಮಂತ್ರಿ ಮಾಡೋದು ಅಂತಿಮವಾಗಿ ಪ್ರಧಾನಿ ನರೇಂದ್ರ ಮೋದಿ ನಿರ್ಧಾರಕ್ಕೆ ಬಿಟ್ಟಿದ್ದು. ನಾವು ಅವರ ನಿರ್ಧಾರದ ಬಗ್ಗೆ ಪ್ರಶ್ನಿಸಲು ಸಾಧ್ಯವಿಲ್ಲ. ಆದರೆ ಸಚಿವ ಸ್ಥಾನ ಕೊಡಬಹುದು ಇಲ್ಲದೆ ಇರಬಹುದು. ನನಗೆ ಇವರೆಗೂ ಹೈಕಮಾಂಡ್‍ನಿಂದ ಯಾವುದೇ ಕರೆ ಬಂದಿಲ್ಲ. ನಾನು ಅದರ ಬಗ್ಗೆ ಯೋಚನೆ ಕೂಡ ಮಾಡುತ್ತಿಲ್ಲ. ಜಾತಿ ಪ್ರದೇಶ ಆಧಾರದ ಮೇಲೆ ಸಚಿವ ಸ್ಥಾನ ಹಂಚಿಕೆ ಆಗಬಹುದು ಎಂದರು.

ಶಿಸ್ತು ಎಂಬುವುದು ಬಿಜೆಪಿ ಪಕ್ಷದಲ್ಲಿದೆ. ಶಿಸ್ತು ಇಲ್ಲದ ಕಾರಣ ಕಾಂಗ್ರೆಸ್‍ನಲ್ಲಿ ಸಚಿವ ಸ್ಥಾನಕ್ಕಾಗಿ ಕಿತ್ತಾಟ ನಡೆದಿದೆ. ಬಿಜೆಪಿಯಲ್ಲಿ ಎಲ್ಲರು ಮೆಚ್ಚಿಕೊಳ್ಳುವಂತೆ ಶಿಸ್ತುಬದ್ಧವಾಗಿ ಕೆಲಸ ಮಾಡುತ್ತಾರೆ. ಇಲ್ಲಿ ಯಾವುದೇ ಒತ್ತಡ ಇಲ್ಲದೆ ಅವರಿಗೆ ಹೇಗೆ ಬೇಕೋ ಹಾಗೆ ಕೆಲಸ ಮಾಡಬಹುದು. ಸೇವೆ ಮಾಡುವುದಕ್ಕೆ ಯಾವ ಸ್ಥಳವಾದರು ಏನು ಎಂದರು.

Share This Article
Leave a Comment

Leave a Reply

Your email address will not be published. Required fields are marked *