ಶಿವಮೊಗ್ಗ: ಶಿವಮೊಗ್ಗದಲ್ಲಿ (Shivamogga) ಸಾವರ್ಕರ್ ಅವರ ಫ್ಲೆಕ್ಸ್ ಹರಿದಿದ್ದಕ್ಕೆ ಪಿಎಫ್ಐ ನಿಷೇಧ ಮಾಡುವಂತಹ ಸ್ಥಿತಿ ಬಂತು. ಇನ್ನು ಯಾರೂ ಅವರ ಫೋಟೋ ಹರಿಯುವ ಧೈರ್ಯ ಮಾಡುವುದಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (K.S. Eshwarappa) ತಿಳಿಸಿದರು.
ಶಿವಮೊಗ್ಗದಲ್ಲಿ (Shivamogga) ನಡೆದ ಸಾವರ್ಕರ್ (Savarkar) ಸಾಮ್ರಾಜ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾವರ್ಕರ್ ಅವರು ಅಂದು ಮಾಡಿದ ತ್ಯಾಗ, ಬಲಿದಾನ ಇಂದು ಸಮಾಜವನ್ನು ಜಾಗೃತಗೊಳಿಸಿದೆ. ಅಂದು ಸಾವರ್ಕರ್ ಅವರಿಗೆ ಹಿಂಸೆ ನೀಡಲಾಗಿತ್ತು. ಅವರಿಗಾಗಿ ಮಿಡಿಯುತ್ತಿದ್ದ ಸಾಕಷ್ಟು ಮಂದಿ ಕೈ, ಕೈ ಹಿಚುಕಿಕೊಳ್ಳುತ್ತಾ ಇದ್ದರು. ಇದೀಗ ಜೈಕಾರ ಹಾಕಲಾಗುತ್ತಿದೆ ಎಂದರು.
ಸ್ವಾತಂತ್ರ್ಯ ಹೋರಾಟಗಾರರ ಕಿಚ್ಚು ಇಂದು ದೇಶದಲ್ಲಿ ಜಾಗೃತಿ ಉಂಟು ಮಾಡಿದೆ. ಕಾಶಿ, ಮಥುರಾ, ಬದ್ರಿಯಂತಹ ಶ್ರದ್ದಾ ಕೇಂದ್ರಗಳ ಮೌಲ್ಯವನ್ನು ನರೇಂದ್ರ ಮೋದಿ (Narendra Modi) ಅವರು ಹೆಚ್ಚು ಮಾಡುತ್ತಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಯಾರೊಬ್ಬರೂ ದೇಶ ಭಕ್ತರ ತಂಟೆಗೆ ಹೋಗುವುದಿಲ್ಲ. ದೇಶ ದ್ರೋಹಿಗಳನ್ನು ಬಿಡುವುದಿಲ್ಲ ಎಂಬ ಸಂದೇಶ ಸಾರಲಿ ಎಂದು ಹೇಳಿದರು.