3 ಲಕ್ಷಕ್ಕೂ ಅಧಿಕ ಗಿಡಗಳನ್ನು ನೆಟ್ಟಿದ್ದ ಪಬ್ಲಿಕ್ ಹೀರೋ ಲಕ್ಷ್ಮಣ್ ಇನ್ನಿಲ್ಲ

0 Min Read

ಬೆಂಗಳೂರು: ಶಿಕ್ಷಕ, ರಂಗಕರ್ಮಿ ಪರಿಸರವಾದಿಯಾಗಿ ಗುರಿತಿಸಿಕೊಂಡಿದ್ದ ಪಬ್ಲಿಕ್ ಹೀರೋ ಲಕ್ಷ್ಮಣ್ ವಿಧಿವಶರಾಗಿದ್ದಾರೆ.

ಬ್ರೇನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿದ್ದ ಲಕ್ಷ್ಮಣ್, ಮಂಗಳವಾರ ರಾತ್ರಿ ಉತ್ತರಹಳ್ಳಿಯ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೂರು ಲಕ್ಷಕ್ಕೂ ಅಧಿಕ ಗಿಡಗಳನ್ನು ನೆಡುವ ಮೂಲಕ ಲಕ್ಷ್ಮಣ್, ಪಬ್ಲಿಕ್ ಹೀರೋ ಕೂಡ ಆಗಿದ್ದರು.

ಲಕ್ಷ್ಮಣ್ ಅವರು 2013 ರಲ್ಲಿ ಉತ್ತಮ ಶಿಕ್ಷಕ ಎಂದು ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದರು. 2015ರಲ್ಲಿ ರಾಜ್ಯ ಸರ್ಕಾರದ ಪರಿಸರ ಪ್ರಶಸ್ತಿ ಸಹ ಇವರಿಗೆ ಲಭಿಸಿತ್ತು. ಪರಿಸರಕ್ಕೆ ಸಂಬಂಧಿಸಿದ ಸಾಕ್ಷ್ಯ ಚಿತ್ರ, ನಾಟಕ ಅಲ್ಲದೇ ಮಕ್ಕಳ ಸಿನಿಮಾ ಕೂಡ ನಿರ್ದೇಶನ ಮಾಡಿದ್ದರು.

https://www.youtube.com/watch?v=b_gomj5VZ8k

Share This Article
Leave a Comment

Leave a Reply

Your email address will not be published. Required fields are marked *