ರಾಮನಗರ: ಇಡಿ ಅಧಿಕಾರಿಗಳ ತನಿಖೆ ಆಂತ್ಯವಾಗಿದ್ದು ಸುದೀರ್ಘವಾಗಿ ವಿಚಾರಣೆ ನಡೆದಿದ್ದಾರೆ. ಮುಂದೆಯೂ ಕೂಡಾ ಅವರಿಗೆ ಬೇಕಾದ ಮಾಹಿತಿ ಹಾಗೂ ವಿಚಾರಣೆಗೆ ಸಹಕರಿಸಲು ಸಿದ್ಧರಿದ್ದೇವೆ ಎಂದು ಸಂಸದ ಡಿಕೆ ಸುರೇಶ್ ತಮ್ಮ ತಾಯಿ ಗೌರಮ್ಮರ ಇಡಿ ವಿಚಾರಣೆ ಬಳಿಕ ತಿಳಿಸಿದ್ದಾರೆ.
ಕನಕಪುರ ತಾಲೂಕಿನ ಕೋಡಿಹಳ್ಳಿಯ ನಿವಾಸದಲ್ಲಿ ಇಂದು ಗೌರಮ್ಮರ ವಿಚಾರಣೆಯನ್ನು ಸುಮಾರು 8 ಗಂಟೆಗಳ ಕಾಲ ಇಡಿ ಅಧಿಕಾರಿಗಳು ನಡೆಸಿದರು. ವಿಚಾರಣೆ ಬಳಿಕ ಮಾತನಾಡಿದ ಡಿಕೆ ಸುರೇಶ್, ಮುಂದೆ ವಿಚಾರಣೆ ಅವಶ್ಯವಿದ್ದರೆ 85 ವರ್ಷವಾದ್ರೂ ನಮ್ಮ ತಾಯಿ ಕೂಡ ಸ್ಪಂದಿಸುವುದಾಗಿ ಹೇಳಿದ್ದಾರೆ. ನಮ್ಮ ತಾಯಿಗೆ ಜ್ವರ ಇತ್ತು. ಆದರೂ ತನಿಖೆಗೆ ಸಹಕರಿಸಿದ್ದಾರೆ. ನಾನು ಮತ್ತು ಅಣ್ಣ ಗೌರವಯುತ ಸ್ಥಾನದಲ್ಲಿದ್ದು, ಸಹಕರಿಸಲು ನಿರ್ಧರಿಸಿದ್ದೇವು. ಅಮ್ಮ ಕೂಡ ತಿಳಿಸಿದರು ಎಂದು ಹೇಳಿದರು.
ವಿಚಾರಣೆ ವೇಳೆ ಗಲಾಟೆ ನಡೆಯಬಹುದು ಎಂಬ ಹಿನ್ನೆಲೆಯಲ್ಲಿ ಸಾಕಷ್ಟು ಬಂದೋಬಸ್ತ್ ನೀಡಿದ್ದರು. ನಾವು ಕೂಡಾ ಕಾರ್ಯಕರ್ತರು ಮನೆಯ ಬಳಿ ಬರದಂತೆ ಮನವಿ ಮಾಡಿದ್ದೇವು. ನಮ್ಮ ಮನವಿಗೆ ಕಾರ್ಯಕರ್ತರು ಸಹಕರಿಸಿದ್ದಾರೆ. ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
ಅಧಿಕಾರಿಗಳು ಕೂಲಂಕುಷವಾಗಿ ವಿಚಾರಣೆ ನಡೆಸಿ ಹೋಗಿದ್ದಾರೆ. ಮತ್ತೆ ವಿಚಾರಣೆ ಬೇಕಾದರೆ ಎದರುಸಿಲು ಸಿದ್ಧರಿದ್ದು, ಅಧಿಕಾರಿಗಳು ಬರುವುದಾದರೆ ನಾವು ಸ್ವಾಗತಿಸ್ತೇವೆ. ಅವರು ಯಾವಾಗ ಬೇಕಾದರೂ ತನಿಖೆ ನಡೆಸಬಹುದು. ಕಾನೂನಿನ ಮುಂದೆ ಎಲ್ಲರೂ ಕೂಡಾ ತಲೆಬಾಗಲೇಬೇಕು ಎಂದರು.