ಚಾಮರಾಜನಗರ: ಕಾಡಾನೆಯೊಂದು ಪ್ರಯಾಣಿಕರನ್ನು ಅಟ್ಟಿಸಿಕೊಂಡು ಬಂದಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಮೂಲೆಹೊಳೆ ಬಳಿ ನಡೆದಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 212ರ ಗುಂಡ್ಲುಪೇಟೆ ಕೇರಳ ನಡುವಿನ ರಸ್ತೆಯ ಮೂಲೆಹೊಳೆ ಬಳಿ ಶುಕ್ರವಾರ ಸಂಜೆ ಕಾಡಾನೆಯೊಂದು ರಸ್ತೆ ಬದಿಯಲ್ಲಿ ನಿಂತಿತ್ತು. ಕೇರಳ ಹಾಗೂ ಗುಂಡ್ಲುಪೇಟೆ ಕಡೆ ವಾಹನಗಳು ಸಂಚರಿಸುತ್ತಿದ್ದವು.
ಈ ವೇಳೆ ಸಿಟ್ಟಿಗೆದ್ದ ಕಾಡಾನೆ ಪ್ರಯಾಣಿಕರನ್ನು ಸ್ವಲ್ಪ ದೂರದವರೆಗೆ ಓಡಿಸಿಕೊಂಡು ಬಂದಿದೆ. ಕಾಡಾನೆ ಬೆನ್ನಟ್ಟಿದ್ದರಿಂದ ಬೆದರಿದ ಪ್ರಯಾಣಿಕರು ಕೆಲಕಾಲ ಭಯಭೀತರಾಗಿದ್ದರು. ಕೆಲವು ಪ್ರಯಾಣಿಕರು ಜೀವ ಭಯದಿಂದ ತಮ್ಮ ವಾಹನವನ್ನು ಹಿಂತಿರುಗಿಸಿ ವಾಪಾಸ್ಸಾದರು. ಕಾಡಾನೆ ಸ್ವಲ್ಪ ಸಮಯದ ನಂತರ ಕಾಡಿನತ್ತ ಹೆಜ್ಜೆ ಹಾಕಿದ್ದರಿಂದ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ಸದ್ಯ ಆನೆ ಅಟ್ಟಿಸಿಕೊಂಡು ಬರುತ್ತಿರುವ ವಿಡಿಯೋವನ್ನು ಪ್ರಯಾಣಿಕರೊಬ್ಬರು ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ.
https://www.youtube.com/watch?v=4S_g2KO6ods&feature=youtu.be
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv