ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಕಾಡಿನಿಂದ ನಾಡಿಗೆ ಆಗಮಿಸಿದ ಒಂಟಿ ಸಲಗವೊಂದು ನಗರದೆಲ್ಲೆಡೆ ಓಡಾಡಿ ಜನರಲ್ಲಿ ಭಯಗೊಳಿಸಿತ್ತು.
ಶುಕ್ರವಾರ ಮುಂಜಾನೆ ಕಾಡಿನಿಂದ ನಾಡಿಗೆ ಬಂದ ಈ ಒಂಟಿ ಸಲಗ ನಗರದೆಲ್ಲೆಡೆ ಸುತ್ತಾಡಿದ್ದರೂ ಜನರಿಗೆ ಯಾವುದೇ ತೊಂದರೆ ನೀಡಲಿಲ್ಲ. ಸುದ್ದಿ ತಿಳಿದಕೂಡಲೇ ಹಳಿಯಾಳದ ಡಿಸಿಎಫ್ ರಮೇಶ್ ನೇತೃತ್ವದ ತಂಡ ಆನೆಯನ್ನು ಮೂರು ತಾಸುಗಳಿಗೂ ಅಧಿಕ ಸಮಯ ಕಾರ್ಯಾಚರಣೆ ನಡೆಸಿ ಮರಳಿ ಕಾಡಿಗೆ ಹೋಗುವಂತೆ ನೋಡಿಕೊಂಡಿದ್ದಾರೆ.
ಈಗಾಗಲೇ ಹಳಿಯಾಳದಿಂದ ದಾಂಡೇಲಿ ಕಾಡಿಗೆ ಆನೆ ನಿರ್ಗಮಿಸಿದ್ದು ನಗರದ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.