ಬೆಂಗಳೂರು-ಮಂಗಳೂರು ಹೈವೇಯಲ್ಲಿ ಕಾಡಾನೆ ಪ್ರತ್ಯಕ್ಷ

Public TV
1 Min Read
hassana elephant

ಹಾಸನ: ಗ್ರಾಮದಲ್ಲಿ ಭಯ ಉಂಟು ಮಾಡುತ್ತಿರುವ ಕಾಡಾನೆಗಳು ಈಗ ರಾಷ್ಟ್ರೀಯ ಹೆದ್ದಾರಿಗೂ ಎಂಟ್ರಿ ಕೊಡಲು ಆರಂಭಿಸಿವೆ. ಸಕಲೇಶಪುರ ತಾಲ್ಲೂಕಿನ ಕೊಲ್ಲಹಳ್ಳಿ ಗ್ರಾಮದಲ್ಲಿ ಹೈವೇಯನ್ನು ಒಂಟಿ ಸಲಗ ದಾಟಿದೆ.

ಬೆಂಗಳೂರು-ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ‌ 75ರಲ್ಲಿ ಆನೆ ನೋಡಿ ಸವಾರರು ವಾಹನವನ್ನು ನಿಲ್ಲಿಸಿದ್ದಾರೆ. ಎರಡು ಬದಿ ಸಂಚಾರ ಸ್ಥಗಿತಗೊಳಿಸಿ ಕಾಡಾನೆ ದಾಟಲು ಅವಕಾಶ ಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ: ಯುಪಿಐ ಪಾವತಿಗಳಿಗೆ ಯಾವುದೇ ಶುಲ್ಕ ವಿಧಿಸಲ್ಲ: ಕೇಂದ್ರ ಸರ್ಕಾರ

ಇನ್ನೊಂದೆಡೆ ಸಕಲೇಶಪುರ ಪಟ್ಟಣದ ಸಮೀಪವೇ ಕಾಡಾನೆ ಬಂದಿದೆ. ಭತ್ತದ ಗದ್ದೆಯಲ್ಲಿ ಓಡಾಡಿ ಬೆಳೆಯನ್ನು ನಾಶ ಮಾಡಿದೆ. ಕಾಡಾನೆ ನೋಡಿ ಗ್ರಾಮಸ್ಥರು ಭಯಗೊಂಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *