ಹಾಸನ: ಎಸ್ಟೇಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರ ಮೇಲೆ ಕಾಡಾನೆ (Elephant) ದಾಳಿ ನಡೆಸಿದ್ದು, ನಾಲ್ವರು ಗಾಯಗೊಂಡ ಘಟನೆ ಬೇಲೂರಿನ (Belur) ಬಿಕ್ಕೋಡು ಗ್ರಾಮದಲ್ಲಿ ನಡೆದಿದೆ.
ಕಾಡಾನೆಯಿಂದ ತಪ್ಪಿಸಿಕೊಳ್ಳುವಾಗ ನಾಲ್ವರು ಕಾರ್ಮಿಕರು ಬಿದ್ದು ಗಾಯವಾಗಿದೆ. ಗಾಯಾಳುಗಳನ್ನು ನೇತ್ರಾವತಿ, ಮಂಜಾಕ್ಷಿ, ಅಕ್ಕಮ್ಮ ಹಾಗೂ ಕಾತುರ್ ಎಂದು ಗುರುತಿಸಲಾಗಿದೆ. ಬಿಕ್ಕೋಡು ಎಸ್ಟೇಟ್ಗೆ ಕಾರ್ಮಿಕರು ಕೆಲಸಕ್ಕೆ ಬಂದಿದ್ದರು. ಈ ವೇಳೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ.
ಬೀಟಮ್ಮ ಗ್ಯಾಂಗ್ನಿಂದ ಬೇರ್ಪಟ್ಟಿರುವ ಆನೆ ದಾಳಿ ನಡೆಸಿದೆ. ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಕಾರ್ಮಿಕರು ಪಾರಾಗಿದ್ದಾರೆ. ಗಾಯಾಳುಗಳಿಗೆ ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾಡಾನೆ ಬಗ್ಗೆ ಮಾಹಿತಿ ನೀಡದ ಮೇಸ್ತ್ರಿ ವಿರುದ್ಧ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಡಾನೆ ಇನ್ನೂ ಎಸ್ಟೇಟ್ನಲ್ಲೇ ಬೀಡುಬಿಟ್ಟಿದ್ದು, ಆನೆಯನ್ನು ಕಾಡಿಗೆ ಅಟ್ಟುವಂತೆ ಆಗ್ರಹಿಸಿದ್ದಾರೆ.