Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Chikkaballapur

ಚುನಾವಣಾ ಎಫೆಕ್ಟ್, ಅಧಿಕಾರಿಗಳ ನಿರ್ಲಕ್ಷ್ಯ- ರಾಜ್ಯಕ್ಕೆ ಹಾಲು ನೀಡುವ ರೈತರಲ್ಲಿ ಕಣ್ಣೀರು!

Public TV
Last updated: June 3, 2018 4:44 pm
Public TV
Share
4 Min Read
CKB COW 1
SHARE

ಚಿಕ್ಕಬಳ್ಳಾಪುರ: ಹೈನೋದ್ಯಮವೇ ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಯ ರೈತರ ಪ್ರಮುಖ ಜೀವನಾಧಾರ. ಜಿಲ್ಲೆಯಲ್ಲಿ ನೀರಿಗೆ ಬರ ಇದ್ದರೂ ಹಾಲಿಗೆ ಮಾತ್ರ ಎಂದೂ ಬರ ಇಲ್ಲ. ಹಾಲಿನ ಹೊಳೆಯನ್ನೇ ಹರಿಸುವ ರೈತರಿಗೆ ಮಿಶ್ರ ತಳಿ ಸೀಮೆ ಹಸುಗಳೇ ಬದುಕಿನ ಆಧಾರಕ್ಕೆ ಆರ್ಥಿಕ ಮೂಲ. ಆದರೆ ಈಗ ಕ್ಷೀರಸಾಗರದ ಮೂಲ ಚಿಕ್ಕಬಳ್ಳಾಪುರ ಜಿಲ್ಲೆಯ ಹೈನು ಗಾರಿಕೆಯ ರೈತರಿಗೆ ದೊಡ್ಡ ಹೊಡೆತ ಬಿದ್ದಿದೆ.

ಹೌದು. ಜಿಲ್ಲೆಯಾದ್ಯಂತ ಮಹಾಮಾರಿ ಕಾಲುಬಾಯಿ ಜ್ವರಕ್ಕೆ ನೂರಾರು ಜಾನುವಾರುಗಳ ಮರಣ ಮೃದಂಗ ಮುಂದುವರೆದಿದೆ. ತಾಲೂಕಿನ ತಿಪ್ಪೇನಹಳ್ಳಿ ಗ್ರಾಮದ ರೈತ ನಾರಾಯಣಸ್ವಾಮಿ ಎಂಬವರಿಗೆ ಸೇರಿದ ಸುಮಾರು 80 ಸಾವಿರ ರೂ. ಮೌಲ್ಯದ ಹಸು ಕಾಲುಬಾಯಿಜ್ವರಕ್ಕೆ ಬಲಿಯಾಗಿದೆ. ಅಲ್ಲದೇ ಉಳಿದ ಮೂರು ಹಸುಗಳು ಕೂಡ ಕಾಲು ಬಾಯಿ ಜ್ವರಕ್ಕೆ ತುತ್ತಾಗಿ ಸಾವು ಬದುಕಿನ ನಡುವೆ ನರಳಾಡುತ್ತಿವೆ. ಅಂದ ಹಾಗೆ ಕಳೆದ 15 ದಿನಗಳಿಂದ ತಿಪ್ಪೇನಹಳ್ಳಿ ಗ್ರಾಮವೊಂದರಲ್ಲಿ 15ಕ್ಕೂ ಹೆಚ್ಚು ಸೀಮೆ ಹಸುಗಳು ಈ ಕಾಲುಬಾಯಿಜ್ವರಕ್ಕೆ ಬಲಿಯಾಗಿವೆ.

ಏನಿದು ಕಾಲುಬಾಯಿ ಜ್ವರ..?
ಇಂಗ್ಲಿಷ್ ನಲ್ಲಿ ಫೂಟ್ ಅಂಡ್ ಮೌತ್ ಡಿಸೀಸ್ ಎನ್ನವ ಈ ಕಾಯಿಲೆ ಸಾಂಕ್ರಾಮಿಕವಾಗಿ ಹರಡುವ ವರ್ಗಕ್ಕೆ ಸೇರಿದೆ. ಗಾಳಿಯಿಂದ ಹರಡುವ ಈ ಕಾಯಿಲೆ ಒಮ್ಮೆ ಕಾಣಿಸಿಕೊಂಡರೆ ನಿಯಂತ್ರಣಕ್ಕೆ ತುರುವುದ ಬಹುಕಷ್ಟದ ಕೆಲಸ. ನಿಯಂತ್ರಣಕ್ಕೆ ತರುವ ವೇಳೆಗೆ ಸಾಂಕ್ರಾಮಿಕ ರೋಗಕ್ಕೆ ನೂರಾರು ಹಸುಗಳು ಬಲಿಯಾಗಿರುತ್ತದೆ. ಗಾಳಿಯ ಮೂಲಕ ಅತಿ ವೇಗವಾಗಿ ಹರಡುವುದರಿಂದ ಅಕ್ಕ-ಪಕ್ಕದ ರಾಸುಗಳಿಗೆ ಬಹುಬೇಗ ಈ ಸೋಂಕು ತಗುಲುತ್ತದೆ.

ಸಾಮಾನ್ಯವಾಗಿ ಗೊರಸು ಇರುವಂತಹ ರಾಸುಗಳಿಗೆ ತಗುಲುವ ಈ ಸೋಂಕು, ಜಾನುವಾರುಗಳ ಕಾಲು, ಬಾಯಿ, ನಾಲಿಗೆ ಕೆಚ್ಚಲು ಸೇರಿದಂತೆ ದೇಹದ ಬಹುತೇಕ ಅಂಗಾಂಗಗಳ ಮೇಲೆ ಗಾಯಗಳಿಗೆ ಕಾರಣವಾಗುತ್ತವೆ. ಬಾಯಿ ಹುಣ್ಣಾಗಿ ಕನಿಷ್ಠ ಮೇವು ಕೂಡ ತಿನ್ನಲಾಗದಂತಹ ದುಸ್ಥಿತಿಗೆ ತಲುಪುವುತ್ತವೆ. ಅಲ್ಲದೇ ಗಾಯಗೊಂಡ ಜಾಗದಲ್ಲಿ ಹುಣ್ಣು ಹೆಚ್ಚಾಗಿ ನಿಶ್ಯಕ್ತಿಯಿಂದ ಬಾಯಿಯಲ್ಲಿ ಜೊಲ್ಲು ಸುರಿಸುತ್ತಾ ಕೊನೆಗೆ ಸಾವನ್ನಪ್ಪುತ್ತವೆ. ಕಳೆದ 2013-14 ರಲ್ಲೂ ಕೂಡ ಜಿಲ್ಲೆಯಲ್ಲಿ ನೂರಾರು ಹಸುಗಳು ಸಾವನ್ನಪ್ಪಿದ್ದವು. ಮಳಮಾಚನಹಳ್ಳಿ ಗ್ರಾಮವೊಂದರಲ್ಲೇ 45 ಹಸುಗಳು ಸಾವನ್ನಪ್ಪಿದ್ದವು.

CKB COW 4

ಚುನಾವಣಾ ಸೈಡ್ ಎಫೆಕ್ಟ್.!
ಈ ಬಾರಿ ಇದೆಕ್ಕೆಲ್ಲಾ ಪ್ರಮುಖ ಕಾರಣ, ಚುನಾವಣಾ ಸೈಡ್ ಎಫೆಕ್ಟ್. ಅಂದ ಹಾಗೆ ಪ್ರತಿ ವರ್ಷ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಎರಡು ಬಾರಿ ಜಿಲ್ಲೆಯ ಎಲ್ಲಾ ಜಾನುವಾರಗಳಿಗೆ ಮುಂಜಾಗ್ರತಾ ಕ್ರಮವಾಗಿ ಕಾಲುಬಾಯಿಜ್ವರ ನಿಯಂತ್ರಣ ಲಸಿಕೆ ಹಾಕಲಾಗುತ್ತದೆ. ಆದರೆ ಈ ಬಾರಿ ಚುನಾವಣಾ ಕರ್ತವ್ಯದಲ್ಲಿ ಬ್ಯುಸಿಯಾಗಿದ್ದ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಲಸಿಕೆಯನ್ನ ಹಾಕಿಲ್ಲ ಎನ್ನಲಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಕಾಲುಬಾಯಿಜ್ವರ ವ್ಯಾಪಕವಾಗಿ ಹರಡಿದೆ. ಈಗಾಗಲೇ ಜಿಲ್ಲೆಯ ಹಲವೆಡೆ ಕಾಲುಬಾಯಿ ಜ್ವರ ಸಾಕಷ್ಟು ಉಲ್ಭಣಗೊಂಡಿದ್ದು, ನೂರಾರು ರಾಸುಗಳು ಬಲಿಯಾಗಿವೆ. ಇನ್ನೂ ಗಾಳಿಯಲ್ಲಿ ಹರಡುವ ಈ ಖಾಯಿಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಇದುವರೆಗೂ ಇಲಾಖೆಯ ಅಧಿಕಾರಿಗಳು ಲಸಿಕೆ ಹಾಕಲು ಮುಂದಾಗಿಲ್ಲ.

ಸಂಕಷ್ಟದಲ್ಲಿ ರೈತ:
ಹೈನುಗಾರಿಕೆಯೇ ಜೀವನಾಧಾರ, ಹಸುಗಳಿಂದಲೇ ಉತ್ಪಾದನೆಯಾಗುವ ಹಾಲಿನಿಂದ ಬರುವ ಆದಾಯವೇ ಜಿಲ್ಲೆಯ ಬಹುತೇಕ ಕುಟುಂಬಗಳ ಸಂಸಾರದ ನೌಕೆಗೆ ಆರ್ಥಿಕ ಮೂಲ. ಒಂದು ಸೀಮೆಹಸುವಿಗೆ 60 ಸಾವಿರದಿಂದ ರೂ. ನಿಂದ 1 ಲಕ್ಷ ರೂ. ಕೊಟ್ಟು ಖರೀದಿ ಮಾಡಲಾಗುತ್ತದೆ. ಆದರೆ ಪ್ರತಿ ವರ್ಷವೂ ಬಿಟ್ಟು ಬಿಡದೆ ಕಾಣಿಸಿಕೊಳ್ಳುತ್ತಿರುವ ಈ ಕಾಲು ಬಾಯಿ ಜ್ವರದಿಂದ ಪ್ರತಿ ವರ್ಷವೂ ನೂರಾರು ಸೀಮೆ ಹಸುಗಳು ಬಲಿಯಾಗುತ್ತಿವೆ.

ಒಂದೆಡೆ ಪ್ರೀತಿಯಿಂದ ಸಾಕಿದ ಹಸು ಕಳೆದುಕೊಂಡ ದುಃಖ, ಮತ್ತೊಂದೆಡೆ ಕುಟುಂಬದ ಆರ್ಥಿಕ ಮೂಲವನ್ನೇ ಕಳೆದುಕೊಂಡಿರುವ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಆರ್ಥಿಕ ನಷ್ಟದಿಂದ ಹಸುಗಳನ್ನ ಸಾಕುವ ಮನೆಯ ಮಹಿಳೆಯರ ಹಾಗೂ ರೈತರ ಕಣ್ಣಲ್ಲಿ ನೀರು ತರಿಸುವಂತೆ ಮಾಡಿದೆ. ಅಲ್ಲದೇ ಜ್ವರದಿಂದ ಸಾವನ್ನಪ್ಪಿದ ಹಸುವನ್ನು ಹಾಗೇ ಬಿಸಾಡುವ ಹಾಗಿಲ್ಲ, ಜೆಸಿಬಿ ಮೂಲಕ ದೊಡ್ಡ ದೊಡ್ಡ ಗುಂಡಿಗಳನ್ನು ಮಾಡಿ ಮಣ್ಣಲ್ಲಿ ಹೂತು ಹಾಕಬೇಕು. ಇಲ್ಲವಾದಲ್ಲಿ ಕಾಯಿಲೆ ಹರಡುವ ವೇಗ ಮತ್ತೆ ಹೆಚ್ಚಾಳವಾಗುತ್ತದೆ. ಸಂಕಷ್ಟದಲ್ಲಿರುವ ರೈತ ಜೆಸಿಬಿಗೆ ಹಣ ಹೊಂದಿಸುವುದು ಕಷ್ಟ ಸಾಧ್ಯವಾಗುತ್ತದೆ. ಇನ್ನೂ ರೋಗ ಪೀಡಿತ ಹಸುವಿನ ಹಾಲನ್ನ ಸಹ ಹಾಲು ಉತ್ಪಾದಕರ ಸಂಘಗಳು ಖರೀದಿಸುವುದಿಲ್ಲ. ಇಷ್ಟೆಲ್ಲಾ ನೋವುನುಂಗಿಕೊಳ್ಳುವ ರೈತರು ಅಧಿಕಾರಿ ವರ್ಗ, ಸರ್ಕಾರಕ್ಕೆ ಹಿಡಿಶಾಪ ಹಾಕಿ ದೇವರ ಮೊರೆ ಹೋಗುತ್ತಿದ್ದಾರೆ.

COW DEATH 14

ದೇವರ ಮೊರೆ.!
ಪ್ರತಿ ವರ್ಷವೂ ಬರುವ ಈ ಕಾಲು ಬಾಯಿ ಜ್ವರವನ್ನು ಹಳ್ಳಿಯ ಜನ ಗಾಳಿಯಮ್ಮ ಅಂತಲೇ ಕರೆಯುತ್ತಾರೆ. ದೇವರ ವಕ್ರದೃಷ್ಠಿ ನಮ್ಮ ಊರಿನ ಮೇಲೆ ಬಿದ್ದಿದೆ. ಹಾಗಾಗಿಯೇ ಗ್ರಾಮದ ಜಾನುವಾರುಗಳು ಸಾವನ್ನಪ್ಪುತ್ತಿವೆ ಎಂಬ ತಪ್ಪು ಕಲ್ಪನೆ ಹಾಗೂ ಮೂಢನಂಬಿಕೆ ಜನರಲ್ಲಿದೆ. ಹೀಗಾಗಿ ಗಾಳಿಯಮ್ಮ ಬಂದಿದೆ ಅಂತ ಪ್ರತಿ ಗ್ರಾಮದಲ್ಲೂ ಈ ಕಾಯಿಲೆ ಕಾಣಿಸಿಕೊಂಡಾಗ ಗ್ರಾಮದೇವತೆಗಳ ಮೆರವಣಿಗೆ ಮಾಡಿ ಜಾನುವಾರುಗಳನ್ನ ಉಳಿಸಿಕೊಡುವಂತೆ ದೇವರಲ್ಲಿ ಬೇಡಿಕೊಳ್ಳುವುದು ಸಾಮಾನ್ಯವಾಗಿದೆ.

ಕಳಪೆ ಗುಣಮಟ್ಟದ ಲಸಿಕೆ ಕಾರಣ?
ಹೌದು, ಅಂದ ಹಾಗೇ ರಾಜ್ಯದಲ್ಲಿ ಈಗಾಗಲೇ ಕಳೆದ 7 ವರ್ಷಗಳಿಂದ ಅಂದರೆ ವರ್ಷಕ್ಕೆ ಎರಡು ಬಾರಿಯಂತೆ 14 ನೇ ಸುತ್ತಿನ ಕಾಲುಬಾಯಿ ಜ್ವರ ನಿಯಂತ್ರಣ ಲಸಿಕೆ ಹಾಕಲಾಗುತ್ತಿದೆ. ಈ ಮೊದಲು ರಾಷ್ಟ್ರೀಯ ಹೈನು ಅಭಿವೃದ್ದಿ ಮಂಡಳಿಯ ಅತ್ಯುನ್ನತ ಗುಣಮಟ್ಟದ ಲಸಿಕೆಯನ್ನು ಸರ್ಕಾರ ಖರೀದ ಮಾಡಿ ಲಸಿಕೆ ಹಾಕಲಾಗುತ್ತಿತ್ತು. ಆದರೆ ಕಳೆದ 3 ವರ್ಷಗಳ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಮಾಲೂರು ಬಳಿಯ ಬಯೋವೆಟ್ ಎಂಬ ಖಾಸಗಿ ಸಂಸ್ಥೆಯ ಲಸಿಕೆಯನ್ನ ಖರೀದಿ ಮಾಡಿ ಹಾಕಲಾಗುತ್ತಿದೆ. ಆದರೆ ಈ ಬಯೋವೆಟ್ ಲಸಿಕೆಯನ್ನು ಉತ್ತರಪ್ರದೇಶ, ಪಂಜಾಬ್ ರಾಜ್ಯಗಳಲ್ಲಿ ತಿರಸ್ಕರಸಿ, ಸಂಸ್ಥೆಯನ್ನ ಬ್ಲಾಕ್ ಲಿಸ್ಟ್ ಗೆ ಸೇರಿಸಲಾಗಿದೆ ಎನ್ನಲಾಗಿದೆ. ಇಂತಹ ಸಂಸ್ಥೆಯ ಕಳಪೆ ಗುಣಮಟ್ಟದ ಲಸಿಕೆ ಹಾಕುತ್ತಿರುವುದರಿಂದ ಕಾಲುಬಾಯಿ ಜ್ವರ ನಿಯಂತ್ರಣಕ್ಕೆ ಸಾಧ್ಯವಾಗದಿರುವುದು ಕಾರಣ ಎಂಬುದು ಕೋಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್ ರ ಆರೋಪವಾಗಿದೆ.

ರೋಗ ನಿಯಂತ್ರಣ ಕ್ರಮಗಳು: ಸಮಯಕ್ಕೆ ತಕ್ಕಂತೆ ಕಾಲು ಬಾಯಿ ಜ್ವರ ನಿಯಂತ್ರಕ ಲಸಿಕೆ ಹಾಕಿಸುವುದು. ರೋಗ ಪೀಡಿತ ಹಸುಗಳಿಂದ ರೋಗ ಮುಕ್ತ ಹಸುಗಳನ್ನ ದೂರ ಇಡುವುದು. ರೋಗ ಹರಡದಂತೆ ಸತ್ತ ಹಸುಗಳನ್ನ ಮಣ್ಣಲ್ಲಿ ಹೂತು ಹಾಕುವುದು ಹಾಗೂ ರೋಗದ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡುವುದರಿಂದ ಕಾಲುಬಾಯಿ ಜ್ವರವನ್ನು ನಿಯಂತ್ರಣಕ್ಕೆ ತರಬಹುದು.

– ಮುದ್ದುಕೃಷ್ಣ 

COW DEATH 8

TAGGED:chikkaballapurcowDepartment of Animal HusbandryeconomyfevergovernmentPublic TVಆರ್ಥಿಕತೆಚಿಕ್ಕಬಳ್ಳಾಪುರಜ್ವರಪಬ್ಲಿಕ್ ಟಿವಿಪಶುಸಂಗೋಪನ ಇಲಾಖೆಸರ್ಕಾರಹಸು
Share This Article
Facebook Whatsapp Whatsapp Telegram
Leave a Comment

Leave a Reply

Your email address will not be published. Required fields are marked *

Cinema News

Kamal Haasan and Rajanikanth
ತೆರೆಮೇಲೆ ಮತ್ತೆ ಒಂದಾದ ರಜನಿಕಾಂತ್-ಕಮಲ್ ಹಾಸನ್
Cinema Latest South cinema Top Stories
Urfi Javed
ಸಾಕಿದ ಬೆಕ್ಕಿನಿಂದ ಮುಖಕ್ಕೆ ಗಾಯ ಮಾಡ್ಕೊಂಡ ಉರ್ಫಿ
Cinema Latest Top Stories
Darshan Devil Idre Nemdiyag Erbeku
ಡೆವಿಲ್ ಪ್ರಚಾರಕ್ಕೆ ಪುನರ್ ಚಾಲನೆ!
Cinema Latest Sandalwood Top Stories
jogi prem
ಎಮ್ಮೆ ಕೊಡಿಸೋದಾಗಿ KD ನಿರ್ದೇಶಕನಿಗೆ ಲಕ್ಷ ಲಕ್ಷ ವಂಚನೆ – ಪ್ರೇಮ್ ಹೇಳಿದ್ದೇನು..?
Cinema Latest Sandalwood Top Stories
vijay raghavendra 2
ವಿಷ್ಣುವರ್ಧನ್ ಸ್ಮಾರಕ ನೆಲಸಮ: ವಿಜಯ್ ರಾಘವೇಂದ್ರ ಬೇಸರ
Cinema Latest Top Stories

You Might Also Like

Sujatha Bhat 2
Bengaluru City

ನನ್ನ ಮಗಳು ಅನನ್ಯಾ ಭಟ್ ಇದ್ದಿದ್ದು ಸತ್ಯ: ಸುಜಾತಾ ಭಟ್

Public TV
By Public TV
26 minutes ago
Devarajegowda gives complaint against congress leaders to eci
Hassan

ಮತದಾರರಿಗೆ ಹಣ ಹಂಚಿಕೆ ಆರೋಪ – ಕಾಂಗ್ರೆಸ್ ನಾಯಕರ ವಿರುದ್ಧ ಆಯೋಗಕ್ಕೆ ದೇವರಾಜೇಗೌಡ ದೂರು

Public TV
By Public TV
29 minutes ago
Eshwar Khandre
Bengaluru City

ಧರ್ಮಸ್ಥಳ ಅರಣ್ಯದಲ್ಲಿ ಶವ ಹೂತಿದ್ದರೆ ಕ್ರಮ: ಈಶ್ವರ ಖಂಡ್ರೆ

Public TV
By Public TV
52 minutes ago
Vidhana Soudha
Bengaluru City

ವಿಧಾನ ಪರಿಷತ್‌ನಲ್ಲಿ ಸಹಕಾರಿ ಬಿಲ್ ಸೋಲಿಸಿ ಸರ್ಕಾರಕ್ಕೆ ಮುಖಭಂಗ ಮಾಡಿದ ದೋಸ್ತಿಗಳು

Public TV
By Public TV
1 hour ago
CT Ravi and Santosh lad
Bengaluru City

ವಿಜಯನಗರ ಸಾಧನಾ ಸಮಾವೇಶಕ್ಕೆ 10 ಕೋಟಿ – ಲಾಡ್ V/S ಸಿ.ಟಿ.ರವಿ ವಾಕ್ಸಮರ

Public TV
By Public TV
1 hour ago
Ashwini Vaishnaw 1
Latest

ಆನ್‌ಲೈನ್‌ ಗೇಮಿಂಗ್‌ ಮಸೂದೆ ಪಾಸ್‌ – ಪ್ರಚಾರ ಮಾಡಿದ್ರೂ ಜೈಲು ಶಿಕ್ಷೆ ಫಿಕ್ಸ್‌!

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?