ಬೆಂಗಳೂರು: ಈಗಾಗಲೇ ಒಬ್ಬರ ಮೇಲೊಬ್ಬರು ಅತೃಪ್ತ ಶಾಸಕರು ಮೈತ್ರಿಗೆ ಕೈ ಕೊಟ್ಟು ಮುಂಬೈ ಸೇರಿದ್ದಾರೆ. ಹೀಗಾಗಿ ಇನ್ನೊಮ್ಮೆ ಅವರೆಲ್ಲರ ಮನವೊಲಿಕೆಗೆ ಘಟಾನುಘಟಿ ನಾಯಕರೇ ಕಣಕ್ಕಿಳಿದಿದ್ದು, ಇಂದು ಮುಂಬೈಗೆ ತೆರಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಅತೃಪ್ತರ ಮನವೊಲಿಕೆಗೆ ಮೈತ್ರಿ ಸರ್ಕಾರದ ಪ್ರಬಲ ನಾಯಕರಾದ ಕಾಂಗ್ರೆಸ್ಸಿನ ಮಲ್ಲಿಕಾರ್ಜುನ ಖರ್ಗೆ, ಗುಲಾಂನಬಿ ಆಜಾದ್ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಅವರು ಮುಂಬೈಗೆ ತೆರಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಂಗಳೂರಿನ ಹೆಚ್ಎಎಲ್ನಿಂದ ಖಾಸಗಿ ವಿಮಾನದ ಮೂಲಕ ಮೂವರು ನಾಯಕರು ಮುಂಬೈಗೆ ತೆರಳುವ ಸಾಧ್ಯತೆಗಳಿವೆ.
ಹೆಚ್ಎಎಲ್ ವಿಮಾನ ನಿಲ್ದಾಣದಿಂದ ಮುಂಬೈಗೆ ಖಾಸಗಿ ವಿಮಾನದಲ್ಲಿ ನಾಯಕರು ತೆರಳಲಿದ್ದಾರೆ. ಮುಂಬೈನಲ್ಲಿರುವ ಅತೃಪ್ತರನ್ನ ಸೆಳೆಯಲು ಕೊನೆ ಹಂತದಲ್ಲಿ ಪ್ರಯತ್ನ ನಡೆಸಲು ಖುದ್ದು ಹಿರಿಯ ನಾಯಕರೇ ಈ ಹೈಡ್ರಾಮಕ್ಕೆ ತೆರೆ ಎಳೆಯಲು ಅಖಾಡಕ್ಕಿಳಿದ್ದಿದ್ದಾರೆ.