ಬೆಂಗಳೂರು: ರಾಜ್ಯದಲ್ಲಿ ಮತ್ತೆ ಐಟಿ ಆಟ ಶುರುವಾಗುವಂತಿದೆ. ಗುಜರಾತ್ ಕೈ ಶಾಸಕರಿಗೆ ರೇಸಾರ್ಟ್ನಲ್ಲಿ ಸೌಕರ್ಯ ಕಲ್ಪಿಸಿರುವ ಕಾಂಗ್ರೆಸ್ ನಾಯಕರಿಗೆ ಐಟಿ ಬಿಸಿ ತಟ್ಟೋ ಸಾಧ್ಯತೆ ಇದೆ.
ಪ್ರಮುಖವಾಗಿ ಗುಜರಾತ್ ಕೈ ಶಾಸಕರನ್ನು ಸೇಫ್ ಗಾರ್ಡ್ ಮಾಡ್ತಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮತ್ತವರ ಸಹೋದರ ಕಮ್ ಸಂಸದ ಡಿಕೆ ಸುರೇಶ್ ಮೇಲೆ ಆದಾಯ ತೆರಿಗೆ ಇಲಾಖೆ ಕಣ್ಣು ಬಿದ್ದಿದೆ. ಗುಜರಾತ್ ಕೈ ಶಾಸಕರ ರೆಸಾರ್ಟ್ ಖರ್ಚು ವೆಚ್ಚದ ವಿವರಗಳನ್ನ ಮೊನ್ನೆ ಡಿಕೆ ಶಿವಕುಮಾರ್ ಬಯಲು ಮಾಡಿದ್ದರು. ಇದನ್ನೇ ನೆಪ ಮಾಡಿಕೊಂಡು ರೇಡ್ ಮಾಡಲು ಐಟಿ ಇಲಾಖೆ ಸಜ್ಜಾಗುತ್ತಿದೆ.
ಅಲ್ಲದೇ, ಗೋವಿಂದರಾಜು ಡೈರಿಯಲ್ಲಿ ಸಿಕ್ಕ ಎಂಬಿಪಿ, ಕೆಜೆಜೆ, ಆರ್ವಿಡಿ, ಡಿಕೆಎಸ್, ಹೆಚ್ಸಿಎಂ ಇನಿಷಿಯಲ್ಗಳ ಜಾಡು ಹಿಡಿದು ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೂ ಮುನ್ನವೇ ಐಟಿ ರೇಡ್ ನಡೆಯುತ್ತೆ ಎನ್ನಲಾಗುತ್ತಿದೆ.
ಅತ್ತ ಸತತ 5ನೇ ದಿನವೂ ರೆಸಾರ್ಟ್ನಲ್ಲಿ ಗುಜರಾತ್ ಕಾಂಗ್ರೆಸ್ ಶಾಸಕರು ಆರಾಮಾಗಿ ಇದ್ದಾರೆ.