ಚಿಕ್ಕಬಳ್ಳಾಪುರ: ಬಿಟ್ಕಾಯಿನ್ ಹಗರಣ ಆರೋಪ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನ ಕೇಳುವ ಜನ ಕಾಂಗ್ರೆಸ್ನವರನ್ನ ಕ್ಯಾಕರಿಸಿ ಉಗಿಯೋಕೆ ಪ್ರಾರಂಭ ಮಾಡುತ್ತಾರೆ ಎಂದು ಮಾಜಿ ಸಿಎಂ ಡಿ.ವಿ. ಸದಾನಂದಗೌಡದು ವಿರೋಧ ಪಕ್ಷವಾದ ಕಂಗ್ರೆಸ್ ವಿರುದ್ಧವಾಗಿ ಕಿಡಿಕಾರಿದ್ಧಾರೆ.
ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಟ್ಕಾಯಿನ್ ಹಗರಣ ವಿಚಾರವಾಗಿ ಮಾತನಾಡಿದ ಅವರು, ಸರ್ಕಾರ ಬೀಳುತ್ತೆ ಸಿಎಂ ಬದಲಾಗ್ತಾರೆ ಎಂಬುದು ಕಾಂಗ್ರೆಸ್ ನವರ ಹಗಲು ಗನಸು. ಕೆಲಸ ಇಲ್ಲದವರು ಕಾಂಗ್ರೆಸ್ ನವರಾಗಿದ್ದಾರೆ. ಮೊದಲಿನಿಂದಲೂ ಈ ತರ ಏನಾದರೂ ಹುಡುಕುವಂತಹ ಚಾಳಿ ಕಾಂಗ್ರೆಸ್ನವರಿಗಿದೆ ಎಂದು ವಾಗ್ದಳಿ ಮಾಡಿದ್ದಾರೆ.
ಕಾಂಗ್ರೆಸ್ನ ಆತಂರಿಕ ಕಚ್ಚಾಟ ಮುಚ್ಚಿ ಹಾಕಲು ಬಿಟ್ಕಾಯಿನ್ ವಿಚಾರ ಪ್ರಸ್ತಾಪ ಮಾಡುತ್ತಿದ್ದಾರೆ. ಡಿಕೆಶಿ-ಸಿದ್ದರಾಮಯ್ಯ ನಡುವಿನ ಆಂತರಿಕ ಕಚ್ಚಾಟ ಮುಚ್ಚಿ ಹಾಕುವ ಪ್ರಯತ್ನ ಮಾಡ್ತಿದ್ದಾರೆ. ಯುವ ಕಾಂಗ್ರೆಸ್ ಅಧ್ಯಕ್ಷರ ನಡುವಿನ ಪೈಪೋಟಿಯ ಭಿನ್ನಾಭಿಪ್ರಾಯ ಮುಚ್ಚಿ ಹಾಕುವ ಯತ್ನ ನಡೆಸುತ್ತಿದ್ದಾರೆ. ಬಿಟ್ಕಾಯಿನ್ ಹಗರಣದಲ್ಲಿ ಯಾವುದೇ ಹುರುಳಿಲ್ಲ. ಈಗಾಗಲೇ ತನಿಖೆಗೆ ಸಿಎಂ ಬಸವರಾಜ ಬೊಮ್ಮಾಯಿ ಆದೇಶ ನೀಡಿದ್ದಾರೆ. ಪ್ರಧಾನಮಂತ್ರಿಗಳು ಈ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಕಳ್ಳತನ ಮಾಡುವುದಕ್ಕೂ ಮುನ್ನ ದೇವರ ಪಾದ ಮುಟ್ಟಿ ನಮಸ್ಕರಿಸಿದ!- ವೀಡಿಯೋ ವೈರಲ್
ಇದರಲ್ಲಿ ಕಾಂಗ್ರೆಸ್ ನವರೇ ಶಾಮೀಲಾಗಿದ್ದಾರೆ ಎಂಬುದು ಅವರ ಫ್ರೆಂಡ್ ಶಿಪ್ ಇರೋ ಬಗ್ಗೆ ಹೊರಗೆ ಬಂದ ರಿಪೋರ್ಟ್ಗಳಿಂದ ಈಗಾಗಲೇ ಗೊತ್ತಾಗುತ್ತಿದೆ. ಡಿಕೆಶಿ ಸಿದ್ದರಾಮಯ್ಯ ಸುಳ್ಳು ಹೇಳಿಕೊಂಡು ಒಡಾಡುವುದೇ ಕೆಲಸವಾಗಿದೆ. ಯಾವುದೇ ಇಷ್ಯೂ ಇಲ್ಲದಾಗ ಇದೇ ಕೆಲಸ ಮಾಡೋದೆ ಅವರ ಕೆಲಸ ಅಂತ ಆಕ್ರೋಶವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ತಮಿಳು ಚಿತ್ರತಂಡದ ನಂತರ ಮತ್ತೆ ಸಕ್ಕರೆ ನಾಡಿನಲ್ಲಿ ತೆಲುಗು ಸಿನಿಮಾದವರಿಂದ ಅವಾಂತರ