ಕಲಬುರಗಿ: ಬೆಳ್ಳಂಬೆಳಗ್ಗೆ ಪೊಲೀಸರ ಸೋಗಿನಲ್ಲಿ ಬಂದ ಖದೀಮ ನಗರದ ಪಂಜಾಬ್ ಬೂಟ್ ಹೌಸ್ ಬಳಿ ನಿಂತಿದ್ದ ವ್ಯಕ್ತಿಯೋರ್ವನನ್ನು ನಂಬಿಸಿ ಆತನ ಬಳಿ ಇದ್ದ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾನೆ.
ಸುರೇಶ್ ಮಂಠಾಳೆ ಎಂಬವರ ಬಳಿಯಿಂದ ಕಳ್ಳ ಚಿನ್ನಾಭರಣ ದೋಚಿದ್ದಾನೆ. ಬೆಳಗ್ಗೆ 7 ಗಂಟೆ ಸುಮಾರಿಗೆ ನಗರದ ರುದ್ರವಾಡಿಗೆ ತೆರಳಲು ಸುರೇಶ್, ಪಂಜಾಬ್ ಬೂಟ್ ಹೌಸ್ ಬಳಿ ಬಂದಿದ್ದರು. ಈ ವೇಳೆ ಪೊಲೀಸ್ ಇನ್ಸ್ ಪೆಕ್ಟರ್ ಸೋಗಿನಲ್ಲಿ ಬಂದ ಖದೀಮ ನಕಲಿ ಐಡಿ ಕಾರ್ಡ್ ತೋರಿಸಿ ತಾನು ಪೊಲೀಸ್ ಎಂದು ಸುರೇಶ್ ರನ್ನು ನಂಬಿಸಿದ್ದಾನೆ. ನಗರದಲ್ಲಿ ನಕ್ಸಲೈಟ್ ಹಾಗೂ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ ಮೈ ಮೇಲೆ ಚಿನ್ನಾಭರಣ ಧರಿಸಬೇಡಿ ಎಂದು ಸುರೇಶ್ ಬಳಿಯಿದ್ದ ಚಿನ್ನವನ್ನು ಪಡೆದನು. ಬಳಿಕ ಕರ್ಚಿಫ್ ಪಡೆದು ಚಿನ್ನವನ್ನು ಅದರಲ್ಲಿ ಹಾಕುವಂತೆ ಮಾಡಿ ಮೊಬೈಲ್ ವಾಪಸ್ ಇಟ್ಟುಕೊಟ್ಟು ಪರಾರಿಯಾಗಿದ್ದಾನೆ.
ನಕಲಿ ಪೊಲೀಸ್ ಅಲ್ಲಿಂದ ತೆರಳುತ್ತಿದ್ದಂತೆಯೇ ಕರ್ಚಿಫ್ ಬಿಚ್ಚಿ ನೋಡಿದಾಗ ಚಿನ್ನಾಭರಣ ಕಾಣದೆ ಸುರೇಶ್ ಕಂಗಾಲಾಗಿದ್ದಾರೆ. ಸುಮಾರು 20 ಗ್ರಾಂ ಚಿನ್ನಾಭರಣ ಕಳ್ಳತನವಾಗಿದೆ ಎಂದು ಸುರೇಶ್, ಪೊಲೀಸರಿಗೆ ದೂರು ನೀಡಿದ್ದಾರೆ.
ಸದ್ಯ ಘಟನೆ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್ಬುಕ್ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews