ಬೆಂಗಳೂರು: ಮಧ್ಯರಾತ್ರಿ ಕುಡುಕರು ರಂಪಾಟ ನಡೆಸಿದ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.
ಇಬ್ಬರು ಯುವಕರು ಆಟೋದಲ್ಲಿ ಮೆಜೆಸ್ಟಿಕ್ನಿಂದ ನರ್ಗತರ ಪೇಟೆಗೆ ಬರುತ್ತಾರೆ. ಈ ವೇಳೆ ನೂರು ರೂಪಾಯಿ ಆಟೋ ಚಾರ್ಜ್ ನೀಡದೆ ದರ್ಪ ತೋರಿದ್ದಾರೆ. ಆಟೋ ಬಾಡಿಗೆ ಕೇಳಿದ್ದಕ್ಕೆ, ನೀನೇ ಕೊಡು ಎಂದು ಗಲಾಟೆ ಮಾಡಿದ್ದಾರೆ.
ಯುವಕರು ಮೊದಲು ಐವತ್ತು ಕೊಟ್ಟು, ಉಳಿದ 50 ಕೊಡು ಎಂದು ಕಿರಿಕ್ ಮಾಡುತ್ತಾರೆ. ಕುಡುಕರ ರಂಪಾಟದಿಂದ ಆಟೋ ಚಾಲಕ ಬೇಸತ್ತು ಹೋದರು. ಬಳಿಕ ಪೊಲೀಸರ ಸಹಾಯದಿಂದ ಚಾಲಕ ಕುಡುಕರಿಂದ ಆಟೋ ಬಾಡಿಗೆ ಪಡೆದಿದ್ದಾರೆ.
ಈ ಘಟನೆ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.