ಬೆಂಗ್ಳೂರಿನಲ್ಲಿ ಮಧ್ಯರಾತ್ರಿ ಕುಡುಕರ ರಂಪಾಟ – ಆಟೋದಲ್ಲಿ ಬಂದು ಹಣ ನೀಡದೇ ಅವಾಜ್

Public TV
0 Min Read
kirik kudukaru

ಬೆಂಗಳೂರು: ಮಧ್ಯರಾತ್ರಿ ಕುಡುಕರು ರಂಪಾಟ ನಡೆಸಿದ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.

ಇಬ್ಬರು ಯುವಕರು ಆಟೋದಲ್ಲಿ ಮೆಜೆಸ್ಟಿಕ್‍ನಿಂದ ನರ್ಗತರ ಪೇಟೆಗೆ ಬರುತ್ತಾರೆ. ಈ ವೇಳೆ ನೂರು ರೂಪಾಯಿ ಆಟೋ ಚಾರ್ಜ್ ನೀಡದೆ ದರ್ಪ ತೋರಿದ್ದಾರೆ. ಆಟೋ ಬಾಡಿಗೆ ಕೇಳಿದ್ದಕ್ಕೆ, ನೀನೇ ಕೊಡು ಎಂದು ಗಲಾಟೆ ಮಾಡಿದ್ದಾರೆ.

kirik kudukaru 4

ಯುವಕರು ಮೊದಲು ಐವತ್ತು ಕೊಟ್ಟು, ಉಳಿದ 50 ಕೊಡು ಎಂದು ಕಿರಿಕ್ ಮಾಡುತ್ತಾರೆ. ಕುಡುಕರ ರಂಪಾಟದಿಂದ ಆಟೋ ಚಾಲಕ ಬೇಸತ್ತು ಹೋದರು. ಬಳಿಕ ಪೊಲೀಸರ ಸಹಾಯದಿಂದ ಚಾಲಕ ಕುಡುಕರಿಂದ ಆಟೋ ಬಾಡಿಗೆ ಪಡೆದಿದ್ದಾರೆ.

ಈ ಘಟನೆ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *