ಜಗಳ ಬಿಡಿಸಲು ಹೋದ ಪೇದೆಗೆ ಹೊಡೆದ ಕುಡುಕರು

Public TV
1 Min Read
BLG Police

– ಕುಡುಕರಿಗೆ ಬಿತ್ತು ಸಾರ್ವಜನಿಕರಿಂದ ಗೂಸಾ

ಬೆಳಗಾವಿ: ಜಗಳ ಬಿಡಿಸಲು ಹೋಗಿದ್ದ ಪೇದೆಗೆ ಇಬ್ಬರು ಕುಡುಕರು ಹೊಡೆದ ಘಟನೆ ಜಿಲ್ಲೆಯ ಕಿತ್ತೂರು ಪಟ್ಟಣದ ಪೊಲೀಸ್ ಠಾಣೆ ಮುಂಭಾಗದಲ್ಲಿಯೇ ನಡೆದಿದೆ.

ಪೇದೆಯ ಮೇಲೆ ಹಲ್ಲೆ ಮಾಡಿದ ಕುಡುಕರು ಕಿತ್ತೂರು ತಾಲೂಕಿನ ಗುಡಿ ಕೊಟಬಾಗಿ ಗ್ರಾಮದವರು ಎನ್ನಲಾಗಿದೆ. ಕಿತ್ತೂರು ಠಾಣೆಯ ಎಲ್.ಎಚ್.ನಾಯ್ಕರ್ ಹಲ್ಲೆಗೊಳಗಾದ ಪೇದೆ.

BLG Police A

ಮದ್ಯ ಸೇವಿಸಿದ್ದ ಇಬ್ಬರು ಯುವಕರು ಪೊಲೀಸ್ ಠಾಣೆಯ ಮುಂದೆ ಪರಸ್ಪರ ಜಗಳವಾಡುತ್ತಿದ್ದರು. ಇದನ್ನು ನೋಡಿದ ಪೇದೆ ಎಲ್.ಎಚ್.ನಾಯ್ಕರ್ ಅವರು ಜಗಳ ಬಿಡಿಸಲು ಹೋಗಿದ್ದರು. ಆದರೆ ಇಬ್ಬರು ಸೇರಿ ಪೇದೆಗೆ ಹೊಡೆದಿದ್ದಾರೆ. ಇದೇ ವೇಳೆ ಸ್ಥಳದಲ್ಲಿದ್ದ ಸಾರ್ವಜನರಿಕರು ಯುವಕರಿಗೆ ಹಿಗ್ಗಾಮುಗ್ಗಾ ಥಳಿಸಿ ಬುದ್ಧಿ ಕಲಿಸಿದ್ದಾರೆ. ಬಳಿಕ ಅವರನ್ನು ಪೊಲೀಸ್ ಠಾಣೆಗೆ ತಂದು ಬಿಟ್ಟಿದ್ದಾರೆ.

ಕಿತ್ತೂರು ಪೋಲಿಸ್ ಠಾಣೆಯ ಸಿಬ್ಬಂದಿ ಮದುವೆಗೆ ತೆರಳಿದ್ದರಿಂದ ಕೇವಲ ಇಬ್ಬರು ಮಾತ್ರ ಇದ್ದರು. ಹೀಗಾಗಿ ಕುಡುಕರು ಅವಾಂತರ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *