– ರಾಹುಲ್ ಗಾಂಧಿ ವಿರುದ್ಧವೂ ಕಣಕ್ಕೆ
ನವದೆಹಲಿ: ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕನ್ನಡಿಗ ಡಾ. ಶಿವಾನಂದ್ ಸ್ವರ್ಧೆ ಮಾಡುತ್ತಿದ್ದಾರೆ. ಅಲ್ಲದೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧವೂ ಕಣಕ್ಕಿಳಿದಿದ್ದಾರೆ.
ಡಾ. ಶಿವನಾಂದ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮೂಲದ ವೈದ್ಯ ಹಾಗೂ ಪತ್ರಕರ್ತರಾಗಿದ್ದಾರೆ. ಇದೀಗ ಅವರು ವಾರಣಾಸಿಯಲ್ಲಿ ಮೋದಿ ಹಾಗೂ ಅಮೇಥಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಅಖಾಡಕ್ಕಿಳಿದಿದ್ದಾರೆ.
ತನ್ನ ಸ್ಪರ್ಧೆ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಿವಾನಂದ್, ರಾಜ್ಯ ಚುನಾವಣಾ ವೇಳೆ ರಾಜ್ಯದ ಎಲ್ಲ ಸಂಸದರು ಮೋದಿ ಮತ್ತು ರಾಹುಲ್ ಗಾಂಧಿ ಹೆಸರಿನಲ್ಲಿ ಮತ ಕೇಳುತ್ತಿದ್ದರು. ಸ್ಥಳೀಯ ಅಭ್ಯರ್ಥಿಗಳ ಅರ್ಹತೆ ಮೇಲೆ ಚುನಾವಣೆ ನಡೆಯಬೇಕಿತ್ತು. ಆದರೆ ರಾಷ್ಟ್ರೀಯ ನಾಯಕರ ಹೆಸರಿನಲ್ಲಿ ಸಂಸದರು ಪ್ರಚಾರ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ನಾಯಕರ ಹೆಸರಿನಲ್ಲಿ ಮತ ಹಾಕಿದ್ರೆ ನಾವು ನಮ್ಮೂರಿನ ಸಮಸ್ಯೆ ರಾಷ್ಟ್ರೀಯ ನಾಯಕರ ಮುಂದೆ ಹೇಳಲು ಸಾಧ್ಯವಿಲ್ಲ. ಚುನಾವಣೆ ಗೆದ್ದ ಮೇಲಂತೂ ನಮ್ಮ ಸಂಸದರು ಯಾವುದೇ ಕೆಲಸ ಮಾಡಲ್ಲ. ಹಾಗೂ ಪ್ರಮುಖ ಯೋಜನೆಗಳ ಬಗ್ಗೆ ರಾಷ್ಟ್ರೀಯ ನಾಯಕರ ಮುಂದೆ ತುಟಿ ಬಿಚ್ಚಿಯೂ ಮಾಯನಾಡುವುದಿಲ್ಲ. ಈ ವ್ಯವಸ್ಥೆಯನ್ನು ಬದಲಿಸಬೇಕು ಎನ್ನುವ ಉದ್ದೇಶದಿಂದ ಮೋದಿ ಮತ್ತು ರಾಹುಲ್ ಗಾಂಧಿ ವಿರುದ್ಧ ಇವರು ಸ್ವರ್ಧೆ ಮಾಡುತ್ತಿರುವುದಾಗಿ ತಿಳಿಸಿದರು.
ಇವರು ನಾಮಪತ್ರ ಸಲ್ಲಿಕೆ ಬಳಿಕ ಪ್ರಧಾನಿಗಳ ಗಮನಕ್ಕೆ ಈ ವಿಚಾರಕ್ಕೆ ಬಂದು ವ್ಯವಸ್ಥೆ ಬದಲಾದರೆ ಅದೇ ನನ್ನ ಗೆಲುವು ಎಂದು ಶಿವಾನಂದ್ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ವ್ಯವಸ್ಥೆ ವಿರುದ್ಧ ಬಂಡೆದ್ದು ಮೋದಿ ರಾಹುಲ್ ಗಾಂಧಿ ವಿರುದ್ಧ ಸ್ವರ್ಧೆ ಮಾಡಿರುವ ಶಿವನಂದ್ ಉದ್ದೇಶ ಈಡೇರುತ್ತಾ ಎಂಬುದನ್ನು ಕಾದು ನೋಡಬೇಕು.