ನಟಸಾರ್ವಭೌಮ ಡಾ.ರಾಜ್‍ಕುಮಾರ್ ಪುತ್ಥಳಿ ಕದ್ದ ಕಳ್ಳರು!

Public TV
0 Min Read
rajakumar

ಬೆಂಗಳೂರು: ನಗರದ ಲುಂಬಿನಿ ಗಾರ್ಡನ್‍ನಲ್ಲಿ ನಟಸಾರ್ವಭೌಮ ಡಾ. ರಾಜ್‍ಕುಮಾರ್ ಪುತ್ಥಳಿ ಕದ್ದ ಘಟನೆ ನಡೆದಿದೆ.

ಡಾ. ರಾಜ್ ಪುತ್ಥಳಿಯು ಲುಂಬಿನಿ ಗಾರ್ಡನ್‍ನಲ್ಲಿತ್ತು. ಕಳ್ಳರು 2 ದಿನಗಳ ಹಿಂದೆಯೇ ರಾಜ್‍ಕುಮಾರ್ ಕಂಚಿನ ಪ್ರತಿಮೆ ಕದ್ದುಕೊಂಡು ಹೋಗಿದ್ದರು. ಕೃತ್ಯದ ಬಗ್ಗೆ ಅರಣ್ಯಾಧಿಕಾರಿ ಯೋಗೇಶ್ ಎಂಬುವರಿಂದ ದೂರು ದಾಖಲಾಗಿದೆ. ಇದನ್ನೂ ಓದಿ: ನೀವು ನಮ್ಮನ್ನು ಅಗಲಿದ್ದೀರಿ ಅಂತ ನಂಬಲಾಗುತ್ತಿಲ್ಲ: ಧರ್ಮೇಂದ್ರ

Police Jeep

ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸದ್ಯ ಇಬ್ಬರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಕಳವು ಮಾಡಿದ್ದ ಪುತ್ಥಳಿಯನ್ನು ಕಳ್ಳರು ಗುಜರಿ ಅಂಗಡಿಗೆ ಹಾಕಿದ್ದರು.

Share This Article
Leave a Comment

Leave a Reply

Your email address will not be published. Required fields are marked *