– ನ್ಯಾಯಕ್ಕಾಗಿ ಠಾಣೆ ಮೇಟ್ಟಿಲೇರಿದ ಚಿಲಿ ದೇಶದ ಮಹಿಳೆ
ಬೆಂಗಳೂರು: ಚಿಲಿ ದೇಶದ ಮಹಿಳೆಯೊಬ್ಬರು ಪತಿ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದಾನೆ ಎಂದು ಆತನ ವಿರುದ್ಧ ಪೊಲೀಸ್ ಠಾಣೆ ಮೇಟ್ಟಿಲೇರಿದ್ದಾಳೆ.
ಪತಿ ವಿಕ್ರಂಮಾಡ ವರದಕ್ಷಿಣೆ ನೀಡುವಂತೆ ನಿತ್ಯ ಕಿರುಕುಳ ನೀಡುತ್ತಿದ್ದಾನೆಂದು ಆರೋಪಿಸಿ ಮಹಿಳೆ ಬಸವನಗುಡಿ ಮಹಿಳಾ ಠಾಣೆಯಲ್ಲಿ ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದಡಿ ದೂರು ನೀಡಿದ್ದಾರೆ.
ಮಹಿಳೆ 2017 ಭರತ ನಾಟ್ಯ, ಕಥಕ್ಕಳಿ ಕಲಿಯಲು ದೂರದ ಚಿಲಿ ದೇಶದಿಂದ ಬೆಂಗಳೂರಿಗೆ ಬಂದಿದ್ದರು. ಭರತ ನಾಟ್ಯ ತರಬೇತಿಗೆ ಹೋಗುತ್ತಿರುವಾಗ ಹೈದರಾಬಾದ್ ಮೂಲದ ವಿಕ್ರಂಮಾಡ ಜೊತೆ ಪ್ರೀತಿಯಾಗಿದೆ. ಪ್ರೀತಿ ಮಾಡಿದ ಒಂದು ವರ್ಷದ ಒಳಗಡೆ ಇಬ್ಬರು ಪರಸ್ಪರ ಒಪ್ಪಿ ಹಿಂದೂ ಸಂಪ್ರದಾಯದಂತೆ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಮದುವೆ ಬಳಿಕ ನವ ದಂಪತಿ ಜೆ.ಪಿ. ನಗರದ ಪುಟ್ಟೇನಹಳ್ಳಿಯಲ್ಲಿ ವಾಸವಾಗಿದ್ದರು.
ನಾನು 2019ರಲ್ಲಿ ದಕ್ಷಿಣ ಅಮೇರಿಕದ ಚಿಲಿ ದೇಶಕ್ಕೆ ಅಂದರೆ ತವರು ಮನೆಗೆ ಹೋಗಿದ್ದೆ. ಚಿಲಿ ದೇಶದಿಂದ ಬಂದ ಬಳಿಕ ಗಂಡ ವಿಕ್ರಂಮಾಡ ವರದಕ್ಷಿಣೆ ಹಣ ತರುವಂತೆ ನಿತ್ಯ ಕಿರುಕುಳ ಕೊಡುತ್ತಾನೆ. ವರದಕ್ಷಿಣೆ ಹಣ ತರದಿದ್ದರೆ ನಾನು ಡಿವೋರ್ಸ್ ನೀಡುವುದಾಗಿ ಬೆದರಿಸುತ್ತಾನೆ. ಅಷ್ಟೇ ಅಲ್ಲದೇ ಪ್ರತಿ ನಿತ್ಯ ಕೆಲಸದಿಂದ ಮನೆಗೆ ಬಂದು ಫೋನ್ ಚಕ್ ಮಾಡಿ ಚಿತ್ರಹಿಂಸೆ ನೀಡುತ್ತಿದ್ದಾನೆಂದು ನೊಂದ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬಸವನಗುಡಿ ಮಹಿಳಾ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.