ಉಡುಪಿ: ಶಾಸಕರ ಅಸಮಾಧಾನಕ್ಕೆ ಸಂಬಂಧಿಸಿದಂತೆ ಮಾಧ್ಯಮದವರ ಪ್ರಶ್ನೆಗೆ, ಕಂದಾಯ ಸಚಿವ ಆರ್ ವಿ ದೇಶಪಾಡೆ ನಮ್ಮ ಮನೆಯೊಳಗಿನ ಸಮಸ್ಯೆಯನ್ನು, ನಮ್ಮ ಮನೆಯ ಸದಸ್ಯರೇ ಸೇರಿ ಬಗೆಹರಿಸಿಕೊಳ್ಳುತ್ತೇವೆ. ನೀವು ತಲೆ ಕೆಡಿಸಿಕೊಳ್ಳಬೇಡಿ ಅಂತ ಮಾಧ್ಯಮಗಳಿಗೆ ಕೈಮುಗಿದು ಬೇಡಿಕೊಂಡಿದ್ದಾರೆ.
ಉಡುಪಿಯ ಉದ್ಯಾವರದಲ್ಲಿ ಮಳೆಹಾನಿಯಾದ ಸ್ಥಳಗಳಿಗೆ ದೇಶಪಾಂಡೆ ಮತ್ತು ಖಾದರ್ ಭೇಟಿ ನೀಡಿ, ಉದ್ಯಾವರ ಪಂಚಾಯತ್ ನಲ್ಲಿ ಪರಿಹಾರ ಮೊತ್ತ ವಿತರಿಸಿದರು. ಈ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದರು.
ಎಚ್.ಕೆ ಪಾಟೀಲ್, ಎಂ.ಬಿ ಪಾಟೀಲ್ ನಮ್ಮ ಕುಟುಂಬದ ಸದಸ್ಯರು. ರಾಜಕೀಯದಲ್ಲಿ ಭಿನ್ನಮತದಂತಹ ಸಮಸ್ಯೆಗಳು ಬರುವುದು ಸಾಮಾನ್ಯ. ರಾಜಕಾರಣ ಅಂದ ಮೇಲೆ ಇಂತದ್ದೆಲ್ಲವನ್ನು ಎದುರಿಸಬೇಕು. ಶಾಸಕರುಗಳು ಮಂತ್ರಿಸ್ಥಾನ ಅಪೇಕ್ಷೆ ಪಡುವುದು ತಪ್ಪಲ್ಲ. ಹಾಗಾಗಿ ಮನೆಯ ಸಮಸ್ಯೆಯನ್ನು ಮನೆಯೊಳಗೆ ಬಗೆಹರಿಸುತ್ತೇವೆ. ನೀವು ಮಾಧ್ಯಮಗಳು ಅನಾವಶ್ಯಕವಾಗಿ ತಲೆಕೆಡಿಸ್ಕೋಬೇಡಿ ಎಂದು ಕ್ಯಾಮರಾ ಮುಂದೆ ಕೈ ಮುಗಿದು ಬೇಡಿಕೊಡರು