ಎಂ.ಬಿ.ಪಾಟೀಲ್‍ಗೆ ಡಿಸಿಎಂ, ಸಚಿವ ಸ್ಥಾನ ನೀಡಬೇಡಿ-ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಭಿನ್ನಮತ

Public TV
1 Min Read
MB Patil

ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಇವತ್ತು ಕೂಡ ಅಸಮಾಧಾನಗೊಂಡಿದೆ. ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲರಿಗೆ ಯಾವುದೇ ಸ್ಥಾನ ನೀಡಬಾರದು ಅಂತ ಲಿಂಗಾಯತ ಶಾಸಕರಾದ ಇಂಡಿಯ ಯಶವಂತರಾಯಗೌಡ ಪಾಟೀಲ್ ಹಾಗೂ ಬಸವನಬಾಗೇವಾಡಿಯ ಶಿವಾನಂದ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್ ಹಿರಿಯ ಶಾಸಕರಾದ ಶಾಮನೂರು ಶಿವಶಂಕರಪ್ಪ, ಆರ್.ವಿ. ದೇಶಪಾಂಡೆ ಹಾಗೂ ರಮೇಶ್ ಕುಮಾರ್ ಸ್ಪೀಕರ್ ಸ್ಥಾನಕ್ಕೆ ಒಪ್ಪಿಕೊಳ್ಳದಿದ್ದರಿಂದ, ಜೆಡಿಎಸ್‍ಗೇನೆ ಸ್ಪೀಕರ್ ಸ್ಥಾನ ಬಿಟ್ಟು ಕೊಡುವಂತೆ ಸಲಹೆ ವ್ಯಕ್ತವಾಗಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.

Shivanand patil

ಗುರುವಾರ ವಿಶ್ವಾಸಮತ ಯಾಚನೆಯಾಗಲಿದ್ದು ಯಾವುದೇ ಕಾರಣಕ್ಕೂ ಆಸೆ ಅಮಿಷಕ್ಕೆ ಒಳಗಾಗದಂತೆ ಶಾಸಕರಿಗೆ ಮುಖಂಡರು ಕರೆ ನೀಡಿದ್ದಾರೆ. ಸಮ್ಮಿಶ್ರ ಸರ್ಕಾರ ರಚನೆಗೆ ಎಲ್ಲರೂ ಸಹಕಾರ ನೀಡುವಂತೆಯೂ ಸಭೆಯಲ್ಲಿ ಮುಖಂಡರು ಮನವಿ ಮಾಡಿದ್ದಾರೆ.

ಮಾಜಿ ಸಚಿವ ಪಾಟೀಲ್ ಮೇಲೇಕೆ ಸಿಟ್ಟು?
* ಲಿಂಗಾಯತ ಧರ್ಮದ ಹೆಸರಲ್ಲಿ ಸಮುದಾಯ ಒಡೆದ್ರು.
* ಇವತ್ತಿನ ಕಾಂಗ್ರೆಸ್ ಸ್ಥಿತಿಗೆ ಎಂ.ಬಿ. ಪಾಟೀಲೇ ನೇರ ಕಾರಣ!
* ಪ್ರತ್ಯೇಕ ಧರ್ಮಕ್ಕೆ ಸಹಕರಿಸದಿದ್ದಕ್ಕೆ ಬೇರೆ ಅಭ್ಯರ್ಥಿಗಳಿಗೆ ಸಹಕಾರ.
* ಹಣಕಾಸಿನ ನೆರವು ನೀಡಿ ಸೋಲಿಸಲು ಎಂ.ಬಿ. ಪಾಟೀಲ್ ಯತ್ನಿಸಿದ್ದಾರೆ.
* ಎಂ.ಬಿ. ಪಾಟೀಲ್‍ಗೆ ಡಿಸಿಎಂ ಇರಲಿ, ಸಚಿವ ಸ್ಥಾನ ನೀಡಬೇಡಿ.
* ಒಂದು ವೇಳೆ ನೀಡಿದರೆ ಲಿಂಗಾಯತ ಶಾಸಕರ ರಾಜೀನಾಮೆ.
* ಕಾಂಗ್ರೆಸ್ಸಿನಲ್ಲಿ 17 ಲಿಂಗಾಯತ ಶಾಸಕರು ಗೆದ್ದಿದ್ದಾರೆ.
* ಶಾಮನೂರು ಶಿವಶಂಕರಪ್ಪಗೆ ಆರೋಗ್ಯದ ಸಮಸ್ಯೆ.
* ಅವರನ್ನು ಬಿಟ್ಟು ಯಾರನ್ನಾದರೂ ಡಿಸಿಎಂ, ಸಚಿವ ಸ್ಥಾನ ನೀಡಿ.

ಈ ಮೇಲಿನ ಎಲ್ಲ ಅಂಶಗಳಿಂದ ಕಾಂಗ್ರೆಸ್‍ನಲ್ಲಿಯೇ ಭಿನ್ನಮತ ಕಾಣಿಸಿಕೊಂಡಿದೆ ಅಂತಾ ಹೇಳಲಾಗುತ್ತಿದೆ. ವಿಜಯಪುರ ಜಿಲ್ಲೆಯ ಇಂಡಿ ಮತ್ತು ಬಸವನ ಬಾಗೇವಾಡಿ ಶಾಸಕರಿಬ್ಬರನ್ನು ಸೋಲಿಸಲು ಎಂ.ಬಿ.ಪಾಟೀಲ್ ಷಡ್ಯಂತ್ರ ರಚಿಸಿದ್ರು ಎನ್ನಲಾಗಿದೆ. ಈ ಕಾರಣದಿಂದಲೇ ಶಿವಾನಂದ್ ಪಾಟೀಲ್ ಮತ್ತು ಯಶವಂತರಾಯ ಗೌಡ ಪಾಟೀಲ್ ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದ್ದಾರೆ ಎಂದು ಪಬ್ಲಿಕ್ ಟಿವಿ ಮೂಲಗಳು ತಿಳಿಸಿವೆ.

Share This Article
Leave a Comment

Leave a Reply

Your email address will not be published. Required fields are marked *