-ನಾನ್ ನಿಮ್ಮಪ್ಪನ ಕಾಲದಿಂದಲೂ ಕೆಲಸ ಮಾಡಿರೋದು – ನರಗಸಭೆ ಅಧ್ಯಕ್ಷ ಕಿಡಿ
ಚಿಕ್ಕಬಳ್ಳಾಪುರ: ದೊಡ್ಡಬಳ್ಳಾಪುರದಲ್ಲಿ ಜೆಡಿಎಸ್ ಮುಖಂಡ, ನಗರಭೆ ಅಧ್ಯಕ್ಷ ಪ್ರಭುದೇವ್ ಹಾಗೂ ಸಚಿವ ಕೃಷ್ಣಬೈರೇಗೌಡ ನಡುವೆ ಜಟಾಪಟಿ ನಡೆಯಿತು.
ದೊಡ್ಡಬಳ್ಳಾಪುರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದಿದ್ದ ಕಾರ್ಯಕ್ರಮಕ್ಕೆ ಆಗಮಿಸಿ ಸಚಿವರು ಮರಳುತ್ತಿದ್ದಾಗ ಗದ್ದಲವಾಗಿದೆ. ಈ ವೇಳೆ ಸಚಿವರನ್ನು ಫ್ರಭುದೇವ್ ಅವರು ತಳ್ಳಿದ್ದಾರೆ. ಇದರಿಂದ ಕೋಪಕೊಂಡ ಸಚಿವರು ಕಣ್ಣು ಮಿಟುಕಿಸದೇ ಸಿಟ್ಟಿನಿಂದ ನೋಡಿದ್ದಾರೆ.
ಸಚಿವರ ನಡೆಯಿಂದ ಬೇಸಗೊಂಡ ಪ್ರಭುವರು ಹಿಂದಿನಿಂದ ಯಾರೋ ದೂಡಿದರು, ಹೀಗಾಗಿ ನಿಮ್ಮನ್ನ ತಳ್ಳಿದೆ ಎಂದು ತಿಳಿಸಿದ್ದಾರೆ. ಏಯ್ ನಡೆಯಯ್ಯ ಎಂದು ಸಚಿವರು ಏಕವಚನದಲ್ಲಿ ಮಾತನಾಡಿದ್ದಕ್ಕೆ ಕೋಪಗೊಂಡ ನಗರಸಭೆ ಅಧ್ಯಕ್ಷ, ನಾನ್ ನಿಮ್ಮಪ್ಪನ ಕಾಲದಿಂದಲೂ ಕೆಲಸ ಮಾಡಿರೋದು ಎಂದು ಕಿಡಿಕಾರಿದರು.
ಇಬ್ಬರು ನಾಯಕರು ಸಮಾಧಾನ ಪಡಿಸಲು ಪೊಲೀಸರು ಹಾಗೂ ಸ್ಥಳದಲ್ಲಿ ಸೇರಿದ್ದ ಅನೇಕರು ಹರಸಾಹಸ ಪಡಬೇಕಾಯಿತು. ಸಚಿವರ ತೆರಳಿದ ಮೇಲೂ ಪ್ರಭುದೇವ್ ಅಸಮಾಧಾನ ಹೊರಹಾಕಿದರು. ಪ್ರಭುದೇವ್ ಅವರು ನಗರ ಸಭೆ ಅಧ್ಯಕ್ಷರಷ್ಟೇ ಅಲ್ಲದೆ ಕನ್ನಡ ಪರ ಹೋರಾಟಗಾರ ಎಂದು ಗುರುತಿಸಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv