ಊರಿಂದ ಹೊರಗಡೆ ಹೋಗುತ್ತಿರುವುದಾಗಿ ಮೆಸೇಜ್- ಸಂಬಂಧಿಯಿಂದ್ಲೇ ಕೊಲೆಯಾದ್ರಾ ಡಾಕ್ಟರ್?

Public TV
1 Min Read
HBL

ಹುಬ್ಬಳ್ಳಿ: ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ವೈದ್ಯರನ್ನ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ.

ಹುಬ್ಬಳ್ಳಿಯ ಶುಶ್ರೂತ ನರ್ಸಿಂಗ್ ಹೋಮ್ ನಿರ್ದೇಶಕರಾಗಿರೋ ಡಾ. ಬಾಬು ಹಂಡೇಕರ್, ಕಳೆದೆರಡು ದಿನಗಳಿಂದ ನಾಪತ್ತೆಯಾಗಿದ್ದಾರೆ. ಇದೀಗ ಕೊಟ್ಟ ಹಣ ಮರಳಿ ಕೇಳಿದ್ದಕ್ಕೆ ಸಂಬಂಧಿ ಯುವಕನೇ ಡಾ. ಬಾಬು ಹಂಡೇಕರ್ ಎಂಬವರನ್ನು ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ.

WhatsApp Image 2018 03 14 at 11.56.00 AM

ಡಾ. ಬಾಬು ಹಂಡೆಕರ್ ಅವರು ಎರಡು ದಿನಗಳ ಹಿಂದೆ ಊರಿಂದ ಹೊರಗಡೆ ಹೋಗುತ್ತಿರುವುದಾಗಿ ಸ್ನೇಹಿತರಿಗೆ ವಾಟ್ಸಪ್ ಸಂದೇಶ ಕಳುಹಿಸಿದ್ದು, ಬಳಿಕ ನಾಪತ್ತೆಯಾಗಿದ್ದಾರೆ. ಇದೀಗ ವೈದ್ಯರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಪೊಲೀಸರು ವೈದ್ಯರ ಸಂಬಂಧಿ ನವೀನ್ ಮುಲ್ಕಿಗೌಡರ್ ಹಾಗೂ ಸಹಚರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ವೈದ್ಯರನ್ನು ಕೊಲೆಗೈದಿರುವುದಾಗಿ ಬಾಯ್ಬಿಟ್ಟಿದ್ದಾರೆ ಅಂತ ಹೇಳಲಾಗುತ್ತಿದೆ.

ವಿದ್ಯಾನಗರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *