ಬೆಂಗಳೂರು: ಮುಂದಿನ ಜನ್ಮದಲ್ಲಿಯೂ ಅಂತಹ ತಮ್ಮ ನನಗೆ ಬೇಡ ಎಂದು ಹೇಳುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಅವರಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಟಾಂಗ್ ನೀಡಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಡಿಕೆಶಿ, ಅಣ್ಣ ಹೇಳ್ತಿರಬೇಕು, ತಮ್ಮ ಕೇಳ್ತಿರಬೇಕು ಎಂದಿದ್ದರು. ಇಂದು ಈ ಕುರಿತು ಹೆಚ್ಡಿಕೆಯನ್ನು ಮಾಧ್ಯಮದವರು ಕೇಳಿದಾಗ, ಈ ಜನ್ಮದಲ್ಲಿಯಂತೂ ತಮ್ಮ ಆಗೋಕೆ ಸಾಧ್ಯವಿಲ್ಲ. ಮುಂದಿನ ಜನ್ಮದಲ್ಲೂ ಅಂತಹ ತಮ್ಮ ಬೇಡ ಎಂದು ಹೇಳಿದರು. ಇದನ್ನೂ ಓದಿ: ಧಾರವಾಡ ಜಿಲ್ಲೆಯಲ್ಲಿಯೂ ಅಧಿಕಾರಿಗಳ ವರ್ಗಾವಣೆ ಹರಾಜು ಪ್ರಕ್ರಿಯೆ ನಡೆದಿದೆ: ಪ್ರಹ್ಲಾದ್ ಜೋಶಿ ಬಾಂಬ್
ಡಿಕೆಶಿ ಹೇಳಿದ್ದೇನು..?: ಹೆಚ್ಡಿಕೆ-ಡಿಕೆಶಿ ಮಧ್ಯೆ `ಸಿಂಗಾಪುರ ಸ್ಕೆಚ್’ ಫೈಟ್ ಜೋರಾಗಿದೆ. ನಮಗಿಂತ ಜಾಸ್ತಿ ಅವರೇ ಶಾಸ್ತ್ರ ಕೇಳುತ್ತಾರೆ ಅಂದಿದ್ದ ಕುಮಾರಸ್ವಾಮಿಗೆ ಡಿಕೆಶಿ ಕೌಂಟರ್ ಕೊಟ್ಟಿದ್ದಾರೆ. ಪಾಪ ಮಾತಾಡಲಿ ಬಿಡಿ. ಅವರದ್ದೇ ಆದ ಅನುಭವ ಇದೆಯಲ್ವಾ. ಅಣ್ಣ ಹೇಳಿದ್ದಾರೆ, ತಮ್ಮ ಕೇಳುತ್ತಿರಬೇಕು ಅಂತ ಡಿಕೆಶಿ ವ್ಯಂಗ್ಯವಾಡಿದ್ದರು.
Web Stories