ಡಿಎಂಕೆ ಅಧ್ಯಕ್ಷ ಕರುಣಾನಿಧಿ ಆಸ್ಪತ್ರೆಗೆ ದಾಖಲು

Public TV
0 Min Read
karunanidhi

 

ಚೆನ್ನೈ: ತಮಿಳುನಾಡಿನ ವಿರೋಧ ಪಕ್ಷ ದ್ರಾವಿಡ ಮುನೇತ್ರ ಕಳಗಂ(ಡಿಎಂಕೆ) ಅಧ್ಯಕ್ಷ ಎಂ. ಕರುಣಾನಿಧಿ ಎಂಡೋಸ್ಕೋಪಿಕ್ ಪ್ರಕ್ರಿಯೆಗಾಗಿ ಬುಧವಾರದಂದು ಇಲ್ಲಿನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕರುಣಾನಿಧಿ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಯ್ತು ಎಂದು ವರದಿಯಾಗಿದೆ. ದೀರ್ಘ ಕಾಲದಿಂದ ಕರುಣಾನಿಧಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ.

(ಪಕ್ರ್ಯೂಟೇನಿಯಸ್ ಎಂಡೋಸ್ಕೋಪಿಕ್ ಗ್ಯಾಸ್ಟ್ರೋನೊಮಿ) ಪಿಇಜಿ ಟ್ಯೂಬ್ ಬದಲಾವಣೆಗಾಗಿ ಕರುಣಾನಿಧಿಯವರನ್ನ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದೆ. ಇಂದು ಅವರನ್ನು ಡಿಸ್ಚಾರ್ಜ್  ಮಾಡಲಾಗುತ್ತದೆ ಎಂದು ಕಾವೇರಿ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಎಸ್ ಅರವಿಂದನ್ ಹೇಳಿಕೆ ನೀಡಿದ್ದಾರೆ.

kavery hospital

Share This Article
Leave a Comment

Leave a Reply

Your email address will not be published. Required fields are marked *