ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮುಯ್ಯಿಗೆ ಮುಯ್ಯಿ, ಆರೋಪಕ್ಕೆ ಪ್ರತ್ಯಾರೋಪ ಶುರುವಾಗಿದೆ. ಇಂಧನ ಇಲಾಖೆಯಲ್ಲಿನ 447 ಕೋಟಿ ಅಕ್ರಮದ ದಾಖಲೆಗಳನ್ನು ಮೊನ್ನೆ ಬಿಜೆಪಿ ಬಹಿರಂಗಗೊಳಿಸುತ್ತಿದ್ದಂತೆ ಇದೀಗ ಶೋಭಾ ಕರಂದ್ಲಾಜೆ ಇಂಧನ ಸಚಿವೆಯಾಗಿದ್ದಾಗ ವಿದ್ಯುತ್ ಖರೀದಿಸಿದ್ದ ದಾಖಲೆಗಳನ್ನು ಕಾಂಗ್ರೆಸ್ ಕೆದಕಿದೆ.
2010ರಲ್ಲಿ 1500 ಮೆಗಾವ್ಯಾಟ್ ವಿದ್ಯುತ್ ಖರೀದಿ ವೇಳೆ 28 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂಬುದು ಕಾಂಗ್ರೆಸ್ ಆರೋಪವಾಗಿದೆ. ಇದಕ್ಕಾಗಿ ಖಾಸಗಿ ಕಂಪನಿಯೊಂದರಿಂದ ಶೋಭಾ ಕರಂದ್ಲಾಜೆ ಚೆಕ್ ರೂಪದಲ್ಲಿ 40 ಕೋಟಿ ರೂ. ಕಿಕ್ ಬ್ಯಾಕ್ ಪಡೆದಿರುವ ಬಗ್ಗೆ ಪ್ರಸ್ತಾಪಿಸಿ, ಕಲ್ಲಿದ್ದಲ್ಲು ಅಕ್ರಮ ಆರೋಪಕ್ಕೆ ಸೇಡು ತೀರಿಸಿಕೊಳ್ಳಲು ಕಾಂಗ್ರೆಸ್ ತಂತ್ರ ರೂಪಿಸಿದೆ.
ಈ ತಿಂಗಳ 30ರಂದು ವಿದ್ಯುತ್ ಖರೀದಿ ಹಗರಣದ ಬಗ್ಗೆ ಸದನ ಸಮಿತಿ ಅಂತಿಮ ವರದಿ ಸಲ್ಲಿಸುತ್ತಿದ್ದು, ವಿದ್ಯುತ್ ಖರೀದಿಯಲ್ಲಿ ಆಗಿರುವ ಅಕ್ರಮವನ್ನು ಪ್ರಸ್ತಾಪಿಸಿ ಸೇಡು ತೀರಿಸಿಕೊಳ್ಳಲು ಬಲೆ ಎಣಿದಿದೆ. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಶುಕ್ರವಾರದಂದು ಭೇಟಿಯಾಗಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಚರ್ಚಿಸಿದ್ದಾರೆ ಎನ್ನಲಾಗಿದೆ.
* ಆರೋಪ 1: ಮೊದಲು ಪ್ರತಿ ಯೂನಿಟ್ಗೆ 3 ರೂಪಾಯಿ 05 ಪೈಸೆ ವಿದ್ಯುತ್ ಖರೀದಿ ಪ್ರಸ್ತಾವನೆ. ಬಳಿಕ ಪ್ರತಿ ಯೂನಿಟ್ಗೆ 6.30 ಪೈಸೆ ಕೊಟ್ಟು ವಿದ್ಯುತ್ ಖರೀದಿಸಿದ್ದೇಕೆ?
* ಆರೋಪ 2: ಆನ್ಲೈನ್ನಲ್ಲಿ ವಿದ್ಯುತ್ ಖರೀದಿಯಲ್ಲಿ ಅಕ್ರಮ ಪತ್ತೆ. ಒಂದೇ ದಿನ ಆನ್ಲೈನ್ನಲ್ಲಿ ವಿಭಿನ್ನ ದರದಲ್ಲಿ ವಿದ್ಯುತ್ ಖರೀದಿಸಿದ್ದೇಕೆ?
* ಆರೋಪ 3: ಬೇರೆ ರಾಜ್ಯಗಳಲ್ಲಿ ವಿದ್ಯುತ್ ದರ ಕಡಿಮೆ. ಕರ್ನಾಟಕ ದುಬಾರಿ ದರದಲ್ಲಿ ವಿದ್ಯುತ್ ಖರೀದಿಸಿದ್ದೇಕೆ?
ವರದಿಯಲ್ಲಿ ಮೂರು ಅಂಶಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಲು ಉದ್ದೇಶಿಸಲಾಗಿದೆ ಎಂದು ಹೇಳಲಾಗ್ತಿದೆ.
ರಸ್ತೆಯಲ್ಲಿ ಜೆಡಿಎಸ್ ರೆಬಲ್ ಶಾಸಕ ಜಮೀರ್ ಅಹ್ಮದ್ ಖಾನ್ ದರ್ಬಾರ್! https://t.co/I8o3rIea6B#Chamrajpet #JDS #ZameerAhmed #BikeRide #Bengaluru pic.twitter.com/TDNWEjNcGN
— PublicTV (@publictvnews) October 27, 2017
ಬಹುಕೋಟಿ ಲಾಟರಿ ಹಗರಣ- ಐಜಿಪಿ ಅಲೋಕ್ಕುಮಾರ್ಗೆ ಕ್ಲೀನ್ಚೀಟ್https://t.co/3wik4bRc5t#LotteryScam– #CleanChit #IGP #AlokKumar #CBI pic.twitter.com/a7f7fFth8p
— PublicTV (@publictvnews) October 28, 2017