Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕಣ್ಣು ಮುಚ್ಚಿದ ಮೇಲೆ ನಮ್ಮ ಪಲ್ಲಕ್ಕಿ ಯಾರು ಹೊರುತ್ತಾರೆ ಗೊತ್ತಿಲ್ಲ: ಮುನಿರತ್ನ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಕಣ್ಣು ಮುಚ್ಚಿದ ಮೇಲೆ ನಮ್ಮ ಪಲ್ಲಕ್ಕಿ ಯಾರು ಹೊರುತ್ತಾರೆ ಗೊತ್ತಿಲ್ಲ: ಮುನಿರತ್ನ

Bengaluru City

ಕಣ್ಣು ಮುಚ್ಚಿದ ಮೇಲೆ ನಮ್ಮ ಪಲ್ಲಕ್ಕಿ ಯಾರು ಹೊರುತ್ತಾರೆ ಗೊತ್ತಿಲ್ಲ: ಮುನಿರತ್ನ

Public TV
Last updated: July 29, 2019 11:21 am
Public TV
Share
2 Min Read
muniratna
SHARE

ಬೆಂಗಳೂರು: ನಾವು ಕಣ್ಣು ಮುಚ್ಚಿದ ಮೇಲೆ ನಮ್ಮ ಪಲ್ಲಕ್ಕಿ ಯಾರು ಹೊರುತ್ತಾರೆ ಎಂಬುದು ಗೊತ್ತಿಲ್ಲ, ಈಗ ಕಣ್ಣು ತೆರೆದಿದ್ದೇವೆ. ಹಾಗಾಗಿ ಕ್ಷೇತ್ರದ ಅಭಿವೃದ್ಧಿಯನ್ನು ಕೇಳಿದ್ದೇನೆ ಎಂದು ಅನರ್ಹ ಶಾಸಕ ಮುನಿರತ್ನ ಅವರು ತಿಳಿಸಿದ್ದಾರೆ.

ಮುಂಬೈಯಿಂದ ಬಂದ ಬಳಿಕ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾವು ಈ ಬಗ್ಗೆ ಏನೂ ಮಾತನಾಡುವುದಿಲ್ಲ. ಈಗ ನ್ಯಾಯಯುತವಾಗಿ ಹೋರಾಟ ಮಾಡುತ್ತೇವೆ. ಈಗಾಗಲೇ ಇದಕ್ಕೆ ಸಂಬಂಧಪಟ್ಟಂತೆ ದಾಖಲೆಯನ್ನು ಪಡೆದು ಸ್ಪೀಕರ್ ಕಚೇರಿಯಿಂದ ಸುಪ್ರೀಂ ಕೋರ್ಟಿಗೆ ಹೋಗುವುದಾಗಿ ತಿಳಿಸಿದರು.

speaker Ramesh Kumar letter

ಅಲ್ಲದೆ ಸ್ಪೀಕರ್ ಅವರ ಈ ಪ್ರಕಿಯೆ ನಮಗೆ ಮೊದಲೇ ಗೊತ್ತಿತ್ತು. ನಾನು ಇದನ್ನು ಪಿತೂರಿ ಎಂದು ಹೇಳುವುದಿಲ್ಲ. ಈಗ ಎಲ್ಲ ಮುಗಿದಿದೆ. ನಾವೇನಿದ್ದರೂ ನ್ಯಾಯಯುತವಾಗಿ ಹೋರಾಟ ಮಾಡುತ್ತೇವೆ. ಈಗಾಗಲೇ ಕೆಲವು ಶಾಸಕರು ಸುಪ್ರೀಂ ಕೋರ್ಟಿಗೆ ತೆರಳಿದ್ದಾರೆ. ನಾವು ತಪ್ಪು ಮಾಡಿದ್ದೇವೆ ಎಂದು ನಮಗೆ ಅನಿಸುತ್ತಿಲ್ಲ. ಏಕೆಂದರೆ ಶಾಸಕ ಎಂದು ಅನಿಸಿಕೊಂಡ ಮೇಲೆ ಅವರು ಕ್ಷೇತ್ರಕ್ಕೆ ನ್ಯಾಯ ಒದಗಿಸುವುದು ಪ್ರತಿಯೊಬ್ಬ ಅವರ ಕರ್ತವ್ಯ ಎಂದರು.

supreme court

ನಾನು ಅಭಿವೃದ್ಧಿ ಕೇಳಿದ್ದೇನೆ ಹೊರತು ನನ್ನ ಕುಟುಂಬಕ್ಕೆ ಅಥವಾ ನನ್ನ ಲಾಭಕ್ಕೆ ನಾನು ಬೇಡಿಕೆ ಇಟ್ಟಿಲ್ಲ. ನನಗಿದ್ದ ಒಂದು ಕನಸು ತುಮಕೂರು ರಸ್ತೆ ರಾಜ್‍ಕುಮಾರ್ ಅವರ ಸಮಾಧಿಯ ಮುಂದೆ ರಿಂಗ್ ರೋಡ್‍ನಲ್ಲಿ ಮೆಟ್ರೋ ಬರಬೇಕು ಎಂದು ಕೇಳಿದ್ದೆ. ನಾನು ಹೆಚ್ಚೇನು ಕೇಳಲಿಲ್ಲ. ಈಗ ಬೆಂಗಳೂರು ಕೇವಲ ಐಟಿಬಿಟಿಯಲ್ಲಿ ಅಭಿವೃದ್ಧಿ ಆಗುತ್ತಿದೆ. ಬೆಂಗಳೂರು ಪಶ್ಚಿಮದ ಕಡೆ ಮಧ್ಯಮ ವರ್ಗ, ಬಡ ಕುಟುಂಬ ಹೆಚ್ಚು ಇದೆ. ನಾವು ಕಣ್ಣು ಮುಚ್ಚಿದ ಮೇಲೆ ನಮ್ಮ ಪಲ್ಲಕ್ಕಿ ಯಾರು ಹೊರುತ್ತಾರೆ ಎಂಬುದು ಗೊತ್ತಿಲ್ಲ, ಈಗ ಕಣ್ಣು ತೆರೆದಿದ್ದೇವೆ. ಹಾಗಾಗಿ ಕ್ಷೇತ್ರದ ಅಭಿವೃದ್ಧಿಯನ್ನು ಕೇಳಿದ್ದೇನೆ ಎಂದರು.

REVANNA

ಅಭಿವೃದ್ಧಿಗೆ ಸಹಕರಿಸಿ, ಗೊರಗೊಂಟೆಪಾಳ್ಯ ಜಂಕ್ಷನ್‍ಗೆ ಸಂಬಂಧಪಟ್ಟಂತೆ ರೇವಣ್ಣ ಅವರಿಗೆ ಸುಮಾರು ಪತ್ರ ಬರೆದು ಬೇಡಿಕೆ ಇಟ್ಟಿದ್ದೇನೆ. ಸಿಗ್ನಲ್ ಫ್ರೀ ಕಾರಿಡಾರ್ ಮಾಡಿಕೊಡಿ, ಎಲಿವೆಟೆಡ್ ಕಾರಿಡಾರ್ ನಮ್ಮ ಕ್ಷೇತ್ರಕ್ಕೆ ಅವಶ್ಯಕತೆ ಇದೆ. 24 ಸಾವಿರ ಕೋಟಿ ಬೆಂಗಳೂರಿಗೆ ಖರ್ಚು ಮಾಡ್ತೀರಾ. ದಯವಿಟ್ಟು ನಮ್ಮ ಮಾತು ಕೇಳಿ ಎಂದು ಕೇಳಿಕೊಂಡೆ. ಆದರೆ ಅವರು ನಮ್ಮ ಮಾತು ಕೇಳಲಿಲ್ಲ. ಸಮ್ಮಿಶ್ರ ಸರ್ಕಾರ ಎಂದರೆ ಎರಡು ಮನಸ್ಸು ಒಂದಾದ ಮೇಲೆ ಮಕ್ಕಳು ಚೆನ್ನಾಗಿರುತ್ತಾರೆ. ಎರಡು ಮನಸ್ಸು ಒಂದಾಗಿಲ್ಲ ಎಂದರೆ ಪ್ರತಿ ದಿನ ಜಗಳ, ಮುಸುಕಿನ ಗುದ್ದಾಟ ನಡೆಯುತ್ತದೆ ಎಂದು ತಿಳಿಸಿದರು.

RAMALINGAREDDY

ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ಕೊಡದೇ ಇರುವುದರಿಂದ ಬೆಂಗಳೂರಿನ ಶಾಸಕರಿಗೆ ಮನಸ್ತಾಪ ಬಂದಿದೆ. ರಾಮಲಿಂಗಾರೆಡ್ಡಿ ಅವರು ಹಿರಿಯರು, 7 ಬಾರಿ ಶಾಸಕರಾಗಿದ್ದರು ಸಹ ಅವರಿಗೆ ಸಚಿವ ಸ್ಥಾನ ಕೊಡದೇ ಇದದ್ದು ನಮಗೆ ಬೇಸರವಾಗಿತ್ತು. ಅವರು ಬೆಂಗಳೂರಿನ ಅಭಿವೃದ್ಧಿಗೆ ಬಗ್ಗೆ ಹೆಚ್ಚು ಕೆಲಸ ಮಾಡಿದ್ದರು. ಬೆಂಗಳೂರು ಶಾಸಕರ ಸಮಸ್ಯೆ ಕೇಳುವವರು ಇಲ್ಲದಂತಾದ ಪರಿಸ್ಥಿತಿ ನಮಗೆ ಬಂದಿತ್ತು. ಇಡೀ ರಾಜ್ಯದಲ್ಲಿ ಬೆಂಗಳೂರಿಗೆ ಆದಾಯ ಬರುತ್ತದೆ. ಬೆಂಗಳೂರು ಅಭಿವೃದ್ಧಿ ಮಾಡಲು ಅವರಿಗೇನು ಕಷ್ಟ. ಕೆಲಸ ಮಾಡಬೇಕು ಎಂದು ನಾವು ಬಂದಿದ್ದೇವೆ. ಕೆಲಸ ಆಗಿಲ್ಲ ಎಂದು ಈಗ ಹೊರ ನಡೆದಿದ್ದೇವೆ. ಕ್ಷೇತ್ರದ ಜನ ಈ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದು ಪ್ರತಿಕ್ರಿಯಿಸಿದರು.

BJP SULLAI 1

ನಾವು ಯಾವುದೋ ಆಪರೇಷನ್ ಕಮಲಕ್ಕೊ ಅಥವಾ ಹಣದ ಆಮೀಷಕ್ಕೆ ಒಳಗಾಗಿಲ್ಲ. ನಾವು ಯಾವುದೇ ಕಾರಣಕ್ಕೂ ಈ ಪಾಪದ ಕೆಲಸಕ್ಕೆ ಕೈ ಹಾಕಲ್ಲ. ನಮಗೆ ಇದು ಬೇಕಾಗಿಲ್ಲ. ನಮ್ಮ ಕ್ಷೇತ್ರಕ್ಕೆ ಯಾರು ಅಭಿವೃದ್ಧಿ ಮಾಡುತ್ತಾರೋ ಅವರ ಹಿಂದೆ ಹೋಗುತ್ತೇವೆ ಎಂದು ಮುನಿರತ್ನ ಅವರು ಪ್ರತಿಕ್ರಿಯಿಸಿದ್ದಾರೆ.

TAGGED:bengaluruMuniratnaPublic TVResignationrevannaspeakerSupreme Courtಪಬ್ಲಿಕ್ ಟಿವಿಬೆಂಗಳೂರುಮುನಿರತ್ನರಾಜೀನಾಮೆರೇವಣ್ಣಸುಪ್ರೀಂ ಕೋರ್ಟ್ಸ್ಪೀಕರ್
Share This Article
Facebook Whatsapp Whatsapp Telegram

Cinema news

The trailer of the movie Love Mocktail 3 released Darling Krishna Milana Nagaraj 1
ಬಿಡುಗಡೆಯಾಯ್ತು ಲವ್‌ಮಾಕ್ಟೇಲ್ 3 ಚಿತ್ರದ ಟ್ರೈಲರ್!
Cinema Latest Top Stories
Kamal Haasan Donald Trump
ನಿಮ್ಮ ಕೆಲಸ ಎಷ್ಟಿದೆ ಅದನ್ನಷ್ಟೇ ನೋಡಿಕೊಳ್ಳಿ – ಟ್ರಂಪ್‌ ವಿರುದ್ಧ ಕಮಲ್‌ ಹಾಸನ್‌ ಕಿಡಿ
Cinema Latest National South cinema Top Stories
Jr NTR
ಬೆಂಗ್ಳೂರಲ್ಲಿ ಜ್ಯೂ.ಎನ್‍ಟಿಆರ್ ನೋಡಲು ಮುಗಿಬಿದ್ದ ಫ್ಯಾನ್ಸ್ – ಪೊಲೀಸರಿಂದ ಲಾಠಿಚಾರ್ಜ್‌
Bengaluru City Cinema Latest Top Stories
Dhurandhar 2 Trailer
ದುರಂಧರ್ 2 ಟ್ರೈಲರ್‌ ರಿಲೀಸ್ – ರಿವೆಂಜ್ ಮೋಡ್‌ನಲ್ಲಿ ರಣವೀರ್ ಸಿಂಗ್
Bollywood Cinema Latest Top Stories

You Might Also Like

United Airlines flight
Bengaluru City

ಇರಾನ್-ಇಸ್ರೇಲ್ ಯುದ್ಧ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ 17 ವಿಮಾನಗಳ ಹಾರಾಟ ರದ್ದು

Public TV
By Public TV
50 seconds ago
LPG
Latest

LPG ಕೊರತೆಯಿಂದ ಮುಂಬೈನ ಶೇ.20ರಷ್ಟು ಹೋಟೆಲ್, ರೆಸ್ಟೋರೆಂಟ್‌ಗಳು ಬಂದ್

Public TV
By Public TV
11 minutes ago
fire accident at cable factory in chikkaballapur
Chikkaballapur

ದೊಡ್ಡಬಳ್ಳಾಪುರ | ಕೇಬಲ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ – 15 ಗಂಟೆ ಕಳೆದ್ರೂ ಆರದ ಬೆಂಕಿ

Public TV
By Public TV
16 minutes ago
Arunachal Forest Fire
Latest

ಅರುಣಾಚಲ ಪ್ರದೇಶದಲ್ಲಿ ಕಾಡ್ಗಿಚ್ಚು – ಬೆಂಕಿ ನಂದಿಸಲು ಹೆಲಿಕಾಪ್ಟರ್‌ನಿಂದ 66,000 ಲೀಟರ್ ನೀರು ಚೆಲ್ಲಿದ ವಾಯುಪಡೆ

Public TV
By Public TV
47 minutes ago
IRGC
Latest

ಯುದ್ಧ ನಿಲ್ಲಿಸೋ ನಿರ್ಧಾರ ಅಮೆರಿಕದ್ದಲ್ಲ, ನಮ್ಮದು – ದಾಳಿ ಮುಂದುವರಿದ್ರೆ 1 ಲೀಟರ್‌ ತೈಲವೂ ಸಿಗಲ್ಲ: ಇರಾನ್‌

Public TV
By Public TV
2 hours ago
donald trump
Latest

ನಾವು ಈಗಾಗಲೇ ಗೆದ್ದಿದ್ದೇವೆ, ಯುದ್ಧ ಶೀಘ್ರದಲ್ಲೇ ಕೊನೆಗೊಳ್ಳಬಹುದು: ಟ್ರಂಪ್‌

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?