ಗದಗ: ಜೀವಂತ ನಾಗರ ಹಾವನ್ನು ಕೊರಳಿಗೆ ಸುತ್ತಿಕೊಂಡು ವ್ಯಕ್ತಿಯೊಬ್ಬರು ರೋಣ ತಾಲೂಕು ಅಧಿಕಾರಿಗಳ ಕಚೇರಿಯನ್ನು ಪ್ರವೇಶಿಸಿ ಪ್ರತಿಭಟಿಸಿದ್ದಾರೆ.
ಮಕ್ತುಮಸಾಬ್ ರಾಜೇಖಾನ್ (65) ನಿಂದ ವಿಭಿನ್ನ ಪ್ರತಿಭಟನೆ ನಡೆಸಿದ ವ್ಯಕ್ತಿ. ರಾಜೇಖಾನ್ ಅವರಿಗೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಮನೆಯಿಂದ ಅವರನ್ನು ಹೊರ ಹಾಕಿದ್ದಾರೆ. ಅದ್ದರಿಂದ ಅಂಗವಿಕಲರಾದ ಕಾರಣ ಸರ್ಕಾರದಿಂದ ಬರುವ ಸಹಾಯದ ಹಣವನ್ನು ಪಡೆಯಲು ಕಳೆದ ಆರು ತಿಂಗಳ ಹಿಂದೆ ಅರ್ಜಿ ಸಲ್ಲಿಸಿ ಅಧಿಕಾರಿಗಳ ಹಿಂದೆ ಸುತ್ತುತ್ತಿದ್ದಾರೆ.
ಸದ್ಯ ರಾಜೇಖಾನ್ ಮನೆಯ ಬಳಿಯ ಪ್ರತ್ಯೇಕ ಕೊಣೆಯೊಂದರಲ್ಲಿ ವಾಸವಿದ್ದು, ಯಾವುದೇ ಕೆಲಸ ಮಾಡಿ ಹಣ ಸಂಪಾದನೆ ಮಾಡಲು ಆಗದೇ ಊಟಕ್ಕಾಗಿ ಸಮಸ್ಯೆ ಎದುರಿಸುತ್ತಾರೆ. ಈ ಕುರಿತು ಅಧಿಕಾರಿಗಳ ಬಳಿ ತಮ್ಮ ಸಮಸ್ಯೆ ಹೇಳಿಕೊಂಡು ಪರಿಹಾರಕ್ಕಾಗಿ ವಿನಂತಿ ಮಾಡಿದ್ದಾರೆ. ಆದರೆ ಅಧಿಕಾರಿಗಳು ನಿರ್ಲಕ್ಷವಹಿಸಿ ಮಾತನಾಡಿದ್ದು ಇದರಿಂದ ಬೇಸತ್ತ ರಾಜೇಖಾನ್ ಇಂದು ಜೀವಂತ ಹಾವು ಕೊರಳಿಗೆ ಸುತ್ತಿಕೊಂಡು ನೇರ ತಹಶೀಲ್ದಾರ್ ಹಾಗೂ ಉಪಖಜಾನೆ ಅಧಿಕಾರಿಗಳ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿದ್ದಾರೆ.