‘ಹನುಮಾನ್’ (Hanuman Film) ಸಿನಿಮಾದ ಸಕ್ಸಸ್ ನಂತರ ಡೈರೆಕ್ಟರ್ ಪ್ರಶಾಂತ್ ವರ್ಮಾ ‘ರಾಕ್ಷಸ್’ (Rakshas Film) ಸಿನಿಮಾಗಾಗಿ ರಣ್ವೀರ್ ಸಿಂಗ್ (Ranveer Singh) ಜೊತೆ ಕೈಜೋಡಿಸಿದ್ದರು ಎಂದು ಹೇಳಲಾಗಿತ್ತು. ಕೆಲ ಮನಸ್ತಾಪಗಳಿಂದ ರಣವೀರ್ ಸಿಂಗ್ ‘ಹನುಮಾನ್’ ನಿರ್ದೇಶಕನ ಮುಂಬರುವ ಚಿತ್ರಕ್ಕೆ ಗುಡ್ ಬೈ ಹೇಳಿದ್ದಾರೆ ಎನ್ನುವ ಸುದ್ದಿಯೂ ಇತ್ತು. ಈಗ ರಣವೀರ್ ಗಾಗಿ ತಾವು ಸಿನಿಮಾ ಮಾಡುತ್ತಿಲ್ಲ ಎಂದು ಸ್ವತಃ ವರ್ಮಾ ಹೇಳಿದ್ದಾರೆ.
ಡೈರೆಕ್ಟರ್ ಪ್ರಶಾಂತ್ ವರ್ಮಾ ಮತ್ತು ರಣ್ವೀರ್ ಸಿಂಗ್ ನಡುವೆ ಕತೆ ಮತ್ತು ಮೇಕಿಂಗ್ ವಿಷಯವಾಗಿ ಭಿನ್ನಾಭಿಪ್ರಾಯಗಳು ಮೂಡಿದ ಕಾರಣದಿಂದ ರಣ್ವೀರ್ ಸಿಂಗ್ ಈ ಸಿನಿಮಾದಿಂದ ಹೊರನಡೆದಿದ್ದಾರೆ. ಇತ್ತೀಚೆಗೆ ರಣ್ವೀರ್ ಹೈದರಾಬಾದ್ಗೆ ಹೋಗಿ ಸಿನಿಮಾದ ಫೋಟೊಶೂಟ್ನಲ್ಲಿ ಸಹ ಭಾಗಿಯಾಗಿ ಬಂದಿದ್ದರು. ಆದರೆ ಅದಾದ ಬಳಿಕ ಇಬ್ಬರ ನಡುವೆ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ‘ಪದ್ಮಾವತ್’ ಹೀರೋ ಸಿನಿಮಾದಿಂದ ಹೊರಬಂದಿದ್ದಾರೆ
ರಣ್ವೀರ್ ಕೈಬಿಟ್ಟ ಪ್ರಾಜೆಕ್ಟ್ಗೆ ಇದೀಗ ಹೊಸ ನಟನ ಹುಡುಕಾಟದಲ್ಲಿದೆ ಚಿತ್ರತಂಡ. ‘ರಾಕ್ಷಸ್’ಗಾಗಿ ನಟರಾಕ್ಷಸನ ಹುಡುಕಾಟದಲ್ಲಿದೆ ಟೀಮ್. ಹಾಗಾದ್ರೆ ಯಾರು ಈ ಚಿತ್ರತಂಡವನ್ನು ಸೇರಿಕೊಳ್ತಾರೆ ಕಾದುನೋಡಬೇಕಿದೆ.
ಸದ್ಯ ಸಿಂಗಂ ಅಗೇನ್, ಡಾನ್ 3, ಡೈರೆಕ್ಟರ್ ಎಸ್. ಶಂಕರ್ ಜೊತೆ ‘ಅನ್ನಿಯನ್’ ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್ಗಳು ರಣ್ವೀರ್ ಸಿಂಗ್ ಕೈಯಲ್ಲಿವೆ.