ಕಾಮಾಕ್ಷಿ ಪಾಳ್ಯದಲ್ಲೊಂದು ವಿಚಿತ್ರ ಕೊಲೆ- ತಾನು ನಿಲ್ಲಿಸಿದ್ದ ಜಾಗದಲ್ಲಿ ಬಸ್ ನಿಲ್ಲಿಸಿದ್ದಕ್ಕೆ ಮರ್ಡರ್

Public TV
1 Min Read
KAMAKSHIPALYA MURDER

ಬೆಂಗಳೂರು: ತಾನು ಬಸ್ ನಿಲ್ಲಿಸಿದ ಜಾಗದಲ್ಲಿ ಬಸ್ (Bus) ನಿಲ್ಲಿಸಿದ್ದಕ್ಕೆ ಕೊಲೆಯೊಂದು ನಡೆದ ವಿಚಿತ್ರ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಜನವರಿ 13 ರಂದು ಸಾಗರ್ ಫ್ಲೈವುಡ್ ಬಳಿ ಅಪರಿಚಿತ ಶವ ಪತ್ತೆಯಾಗಿತ್ತು. ಈ ಬಗ್ಗೆ ಗುರುತು ಪತ್ತೆ ಕಾರ್ಯಕ್ಕಾಗಿ ಪೊಲೀಸರು ಸಿಸಿಟಿವಿ ಸೇರಿ ಇನ್ನಿತರ ಮಾರ್ಗದಲ್ಲಿ ತನಿಖೆ ನಡೆಸಿದ್ದರು. ತನಿಖೆ ನಡೆಸಿ ಅಪರಿಚಿತ ಶವ ವೆಂಕಟಸ್ವಾಮಿದ್ದಾಗಿದ್ದು ಎಂದು ತಿಳಿದುಬಂದಿದೆ.

KAMAKSHIPALYA MURDER 1

ಎಲುಬುಗಳು ಮುರಿದಿದ್ದರಿಂದ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿತ್ತು. ನಂತರ ತನಿಖೆ ವೇಳೆ ಪೊಲೀಸರು ಆರೋಪಿ ವೆಂಕಟೇಶ್ ಎಂಬಾತನನ್ನು ಪತ್ತೆ ಮಾಡಿದ್ದರು. ಇದನ್ನೂ ಓದಿ: ಆರತಿ ಕೊಲೆ ಕೇಸ್‌ – ಹತ್ಯೆಗೈದ ಆರೋಪಿಯ ಶವ ಕೆರೆಯಲ್ಲಿ ಪತ್ತೆ

kamakshipalya police station

ಕೊಲೆ ನಡೆದಿದ್ದು ಏಕೆ..?: ಜಿಟಿ ಇಂಡಸ್ಟ್ರಿಯಲ್ ಕಾಂಪ್ಲೆಕ್ಸ್ ಬಳಿ ಬಸ್ ನಿಲ್ಲಿಸಿ ಮೃತ ವೆಂಕಟಸ್ವಾಮಿ ಮಲಗಿದ್ದರು. ತಾನು ಬಸ್ ನಿಲ್ಲಿಸಿದ ಜಾಗದಲ್ಲಿ ಬಸ್ ನಿಲ್ಲಿಸಿದ್ದಾನೆಂದು ಹಂತಕ ವೆಂಕಟೇಶ್ ಕಿರಿಕ್ ತೆಗೆದಿದ್ದ. ಬಸ್ ಗಾಜನ್ನು ಕಲ್ಲಿನಲ್ಲಿ ಒಡೆದು ಹಾಕಿ ಕಿರಿಕ್ ಮಾಡಿದ್ದ. ನಂತರ ಬಸ್ ಒಳಗೆ ಬಂದು ವೆಂಕಟಸ್ವಾಮಿ ಜೊತೆ ಜಗಳವಾಡಿದ್ದ. ಕೊಲೆ ಮಾಡುವ ಉದ್ದೇಶದಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ. ಆ ಬಳಿಕ ಎದೆ ಭಾಗಕ್ಕೆ ಕಾಲಿನಲ್ಲಿ ಒದ್ದು ಕೊಂದು ಹಾಕಿದ್ದ. ಕೊಲೆ ಮಾಡಿ ಸುಂಕದಕಟ್ಟೆ ಬಳಿ ಮೃತದೇಹ ಎಸೆದು ಪರಾರಿಯಾಗಿದ್ದ.

ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ (Kamakshi Palya Police Station) ಯಲ್ಲಿ ದೂರು ದಾಖಲಾಗಿದೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *