ಸಿಎಂ ಜೊತೆ ನಾಟಿ, ಪ್ರಧಾನಿ ಜೊತೆ ಪ್ರಚಾರಕನಾದ ಗಣೇಶ: ಕಲಾವಿದನ ಕೈಯಲ್ಲಿ ಅರಳಿತು ವಿಶೇಷ ಮೂರ್ತಿಗಳು!

Public TV
1 Min Read
MYS GANAPATHi

ಮೈಸೂರು: ನಗರದ ಕುಂಬಾರಗೇರಿಯ ಕಲಾವಿದನ ಕೈ ಚಳಕದಲ್ಲಿ ಅರಳಿರುವ ಗಣೇಶನ ವಿಗ್ರಹಗಳು ಇದೀಗ ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿವೆ.

ಹೌದು, ಗಣೇಶ ಮೂರ್ತಿ ತಯಾರಕ ಡಿ.ರೇವಣ್ಣನವರ ಕೈಚಳಕದಲ್ಲಿ ಮೂಡಿರುವ ವಿಗ್ರಹಗಳು ಬಲು ವಿಶೇಷವಾಗಿದ್ದು, ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿವೆ. ವಿಶೇಷವಾಗಿ ಸಿಎಂ ಕುಮಾರಸ್ವಾಮಿ ಜೊತೆ ನಾಟಿ ಮಾಡುತ್ತಿರುವ ಗಣೇಶನ ವಿಗ್ರಹ. 2019ರ ಲೋಕಸಭಾ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಪರವಾಗಿ ಪ್ರಚಾರ ಮಾಡುತ್ತಿರುವ ಗಣೇಶನ ವಿಗ್ರಹಗಳು ಸಾಕಷ್ಟು ಗ್ರಾಹಕರನ್ನು ಆಕರ್ಷಿಸಿದ್ದು, ಗ್ರಾಹಕರು ವಿಭಿನ್ನವಾದ ಗಣೇಶನ ವಿಗ್ರಹಗಳನ್ನು ತೆಗೆದುಕೊಳ್ಳಲು ಮುಗಿಬಿದ್ದಿದ್ದಾರೆ.

vlcsnap 2018 09 13 09h41m37s597

ಇದಲ್ಲದೇ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿರುವ ಗಣೇಶಗಳು ಸಾಕಷ್ಟು ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಇದಲ್ಲದೇ ಪ್ರವಾಹದಿಂದ ನಲುಗಿದ್ದ ಕೊಡಗು ಜಿಲ್ಲೆಯ ಗುಡ್ಡ ಕುಸಿದ ಚಿತ್ರಣವನ್ನು ನಿರ್ಮಿಸಿದ್ದಾರೆ. ಪ್ರತಿ ವರ್ಷ ವಿಭಿನ್ನ ರೀತಿಯ ಗಣೇಶ ಮೂರ್ತಿಗಳನ್ನು ತಯಾರಿಸುವ ರೂಢಿ ಬೆಳೆಸಿಕೊಂಡಿರುವ ರೇವಣ್ಣನವರು, ಈ ಭಾರಿ ವಿಶೇಷವಾಗಿ ಸಿಎಂ ಕುಮಾರಸ್ವಾಮಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಪರ ನಿಂತ ಗಣೇಶ ವಿಗ್ರಹಗಳನ್ನು ತಯಾರಿಸಿ, ಗ್ರಾಹಕರನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

vlcsnap 2018 09 13 09h41m53s659

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *