ನೀವು ಸ್ಥಳಕ್ಕೆ ಹೋಗೋದ್ರಿಂದ್ಲೇ ಪ್ರತಿಭಟನೆ ಹೆಚ್ಚಾಗ್ತಿದೆ- ಮಾಧ್ಯಮದ ವಿರುದ್ಧ ಕಾಗೋಡು ಗರಂ

Public TV
1 Min Read
diddalli

ಬೆಂಗಳೂರು: ಕಳೆದ ಹಲವು ಸಮಯಗಳಿಂದ ಮಡಿಕೇರಿಯ ದಿಡ್ಡಳ್ಳಿಯಲ್ಲಿ ನಡೆಯುತ್ತಿರೋ ಆದಿವಾಸಿಗಳ ಪ್ರತಿಭಟನೆಗೆ ಸಂಬಂಧಿಸಿದಂತೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮಾಧ್ಯಮಗಳ ವಿರುದ್ಧ ಗರಂ ಆಗಿದ್ದಾರೆ.

diddalli

ಇದು ಸ್ಥಳೀಯರನ್ನ ಒಕ್ಕಲೆಬ್ಬಿಸಿ ಮಾಡುತ್ತಿರೊ ಧರಣಿಯಾಗಿದ್ದು, ಮಾಧ್ಯಮಗಳ ಪ್ರಚಾರದಿಂದ ಈ ಧರಣಿ ಹೆಚ್ಚುತ್ತಿದೆ. ಮಾಧ್ಯಮಗಳು ಪ್ರತಿಭಟನಾ ಸ್ಥಳಕ್ಕೆ ಹೋಗುವುದರಿಂದಲೇ ಪ್ರತಿಭಟನೆ ಹೆಚ್ಚಾಗುತ್ತಿದೆ ಅಂತಾ ಕಿಡಿಕಾರಿದ್ದಾರೆ.

vlcsnap 2017 05 06 15h05m53s38

ಅರಣ್ಯ ಭೂಮಿ ಕೊಡಲು ಹತ್ತಾರು ಕಾನೂನು ಇದೆ. ಪ್ರಸ್ತಾವನೆ ಸಲ್ಲಿಸಿ, ಕೇಂದ್ರಕ್ಕೆ ಕಳುಹಿಸಬೇಕು. ಬೇರೆ ಭೂಮಿ ಕೊಡಲು ಒಮ್ಮೆ ಒಪ್ಪುತ್ತಾರೆ, ಒಮ್ಮೆ ಗಲಾಟೆ ಮಾಡ್ತಾರೆ. ವಾಸ್ತವಿಕತೆ ಧರಣಿ ಸರಿಯಿಲ್ಲ. ಜನಾಂದೋಲನ, ನಮ್ಮ ಭೂಮಿ ನಮ್ಮ ಹಕ್ಕು ಅಂತ ಸಮಸ್ಯೆ ಇಟ್ಡು ಧರಣಿ ಮಾಡುತ್ತಿಲ್ಲ. ಸುಮ್ಮನೆ ಗಲಾಟೆ ಮಾಡಿಸುತ್ತಿದ್ದಾರೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಅರೆಬೆತ್ತಲಾಗಿ ಮತ್ತೆ ಮರವೇರಿ ಪ್ರತಿಭಟನೆ ನಡೆಸಿದ ದಿಡ್ಡಳ್ಳಿ ನಿರಾಶ್ರಿತ ಮಹಿಳೆ!

vlcsnap 2017 05 06 15h06m38s219

ಕಂದಾಯ ಭೂಮಿ ಕೊಡುತ್ತೇವೆ ಎಂದರೆ ಒಮ್ಮೆ ಆಯ್ತು ಅಂತಾರೆ, ಬಳಿಕ ಬೇಡ ಎನ್ನುತ್ತಾರೆ. 500 ಮನೆ ಮಂಜೂರು ಮಾಡಿದ್ದೇವೆ. ನಿವೇಶನ ಸಿದ್ಧವಾಗಿದೆ ಆದರೆ ಜನರಿಗೆ ಪ್ರತಿಭಟನೆ ನಡೆಸಲು ಕೆಲವರು ಪ್ರೇರೇಪಣೆ ಮಾಡುತ್ತಿದ್ದಾರೆ ಅಂತಾ ಅರೋಪಿಸಿದರು.

vlcsnap 2017 05 06 15h06m24s92

vlcsnap 2017 05 06 15h07m06s212

vlcsnap 2017 05 06 15h09m45s59

Share This Article
Leave a Comment

Leave a Reply

Your email address will not be published. Required fields are marked *