ಬೆಂಗಳೂರು: ಜೆಡಿಎಸ್ ವರಿಷ್ಠ ದೇವೇಗೌಡರ ಒಂದು ಕಾಲದ ಶಿಷ್ಯ, ಜೆಡಿಎಸ್ ಬಂಡಾಯ ಶಾಸಕ ಹೆಚ್.ಸಿ ಬಾಲಕೃಷ್ಣ ಗುರುವಿಗೆ ತಿರುಮಂತ್ರ ಹಾಕಿದ್ದಾರೆ ಎಂಬ ಚರ್ಚೆ ಶುರುವಾಗಿದೆ.
ಕೇರಳಕ್ಕೆ ತೆರಳಿ ದೇವೇಗೌಡರ ವಿರುದ್ಧವೇ ಬಾಲಕೃಷ್ಣ ಶತ್ರು ಸಂಹಾರ ಯಾಗ ನಡೆಸಿದ್ದಾರೆ ಅಂತ ಗೊತ್ತಾಗಿದೆ. ತಮ್ಮ ವಿರುದ್ಧ ಮಾಗಡಿಯಲ್ಲಿ ಹೊಸ ಅಭ್ಯರ್ಥಿ ಹಾಕ್ತಿದ್ದಂತೆ ಬಾಲಕೃಷ್ಣ ಶತ್ರು ಸಂಹಾರ ಯಾಗ ನಡೆಸಿದ್ದಾರೆ ಎನ್ನಲಾಗಿದೆ.
ಕೇರಳದ ಕಣ್ಣೀರಿನ ಭಗವತಿ ಹಾಗು ರಾಜೇಶ್ವರಿ ದೇವಾಲಯದಲ್ಲಿ ಪೂಜೆ ಮತ್ತು ಯಾಗ ನಡೆಸಿದ್ದು ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಇದೇ ದೇಗುಲದಲ್ಲಿ ಜೆಡಿಎಸ್ನ ಹಲವು ನಾಯಕರು ಶತ್ರು ಸಂಹಾರ ಯಾಗ ನಡೆಸಿದ್ರು.