ಕಾನೂನು ಮುಂದೆ ಯಾರೂ ದೊಡ್ಡವರಲ್ಲ: ದರ್ಶನ್‌ ಪ್ರಕರಣದ ಬಗ್ಗೆ ಧ್ರುವ ಸರ್ಜಾ ಫಸ್ಟ್ ರಿಯಾಕ್ಷನ್

Public TV
1 Min Read
darshan 4

ರೇಣುಕಾಸ್ವಾಮಿ ಕೊಲೆ (Renukaswamy Murder Case) ವಿಚಾರವಾಗಿ ಜೈಲು ಪಾಲಾಗಿರುವ ದರ್ಶನ್ (Darshan) ಬಗ್ಗೆ ಹಲವು ನಟ, ನಟಿಯರು ಪ್ರತಿಕ್ರಿಯೆ ನೀಡಿದ್ದರು. ಶಿವಣ್ಣ, ಸುದೀಪ್‌, ರಮ್ಯಾ, ಧನ್ವೀರ್‌ ಗೌಡ ಸೇರಿದಂತೆ ಅನೇಕರು ತುಟಿ ಬಿಚ್ಚಿದ್ದರು. ಈಗ ಮೊದಲ ಬಾರಿಗೆ ದರ್ಶನ್ ಪ್ರಕರಣದ ಕುರಿತು ಧ್ರುವ ಸರ್ಜಾ (Dhruva Sarja) ಮಾತನಾಡಿದ್ದಾರೆ. ಕಾನೂನಿಗಿಂತ ಯಾರು ದೊಡ್ಡವರಲ್ಲ ಎಂದಿದ್ದಾರೆ.

DARSHAN 5

ಕೇಸ್ ಕೋರ್ಟ್‌ನಲ್ಲಿದೆ. ಕಾನೂನು ಮುಂದೆ ಯಾರೂ ದೊಡ್ಡವರಲ್ಲ ಎಂದಿದ್ದಾರೆ. ನೋಡೋಣ ಈ ಕೇಸ್ ಮುಂದೆ ಏನಾಗುತ್ತೆ ಅಂತ ಎಂದು ಧ್ರುವ ಸರ್ಜಾ ಪಬ್ಲಿಕ್‌ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಪ್ರಭಾಸ್ ಹೊಸ ಚಿತ್ರಕ್ಕೆ ನಾಯಕಿಯಾದ ಪಾಕಿಸ್ತಾನಿ ನಟಿ

ಅಂದಹಾಗೆ, ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಮತ್ತು ‘ಕೆಡಿ’ ಸಿನಿಮಾಗಳು ರಿಲೀಸ್ ರೆಡಿಯಿದೆ. ಮಾರ್ಟಿನ್ ಸಿನಿಮಾ ಅಕ್ಟೋಬರ್ 11ರಂದು ರಿಲೀಸ್ ಆಗಲಿದೆ.

Share This Article