ಧಾರವಾಡ ವಿವಿ ವಿದ್ಯಾರ್ಥಿಗೆ ಬಂತು ಧಮ್ಕಿ ಲೆಟರ್

Public TV
1 Min Read
DWD LETTER

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಯೊಬ್ಬನಿಗೆ ಧಮ್ಕಿ ಹಾಕಿದ ಪತ್ರವೊಂದು ಬಂದಿದೆ.

ಕಳೆದ ಜುಲೈ 6 ರಂದು ಈ ಧಮ್ಕಿ ಹಾಕಿದ ಪತ್ರವೊಂದು ಭೂಗೋಳಶಾಸ್ತ್ರ ಸಂಶೋಧನಾ ವಿದ್ಯಾರ್ಥಿ ಮಂಜುನಾಥ ಹೋಗಲ ಅವರಿಗೆ ಬಂದಿದೆ.

ಸರಿಯಾಗಿ ಇದ್ದರೆ ಸರಿ, ಇಲ್ಲಾಂದ್ರೆ ನಿನ್ ಕಥೆ ಮುಗಿಯುತ್ತೆ ಎಂದು ಬರೆಯಲಾಗಿದೆ. ಅಷ್ಟೇ ಅಲ್ಲದೇ ನೀನೊಬ್ಬ ಅಯೋಗ್ಯ, ನಿನ್ನಂತವರು ಈ ವಿವಿಯಲ್ಲಿ ಇರುವುದು ದುರಂತ. ನೀನೊಬ್ಬ ಸಂಶೋಧನಾ ವಿದ್ಯಾರ್ಥಿ, ನಿನಗೆ ಎಸ್‍ಎಸ್‍ಎಲ್‍ಸಿ ಅರ್ಹತೆ ಕೂಡ ಇಲ್ಲ. ಕರ್ನಾಟಕ ವಿವಿಯಲ್ಲಿ ಇರಬೇಕಾದರೆ ಮುಚ್ಚಿಕೊಂಡು ಇರಬೇಕು ಎಂದು ಬರೆಯಲಾಗಿದೆ.

DWD LETTER 1

ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿ ಮಂಜುನಾಥ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನಾನು ಕರ್ನಾಟಕ ವಿವಿಯಲ್ಲಿ ಅಮಾಯಕರ ಬೆನ್ನಿಗೆ ನಿಂತು ಹೋರಾಟ ಮಾಡಿದ್ದಕ್ಕೆ ಈ ರೀತಿ ಮಾಡಲಾಗುತ್ತಿದೆ. ಆದರೆ ಇದಕ್ಕೆ ನಾನು ಜಗ್ಗಲ್ಲ ಎಂದು ಮಂಜುನಾಥ ಹೇಳಿದ್ದಾರೆ. ಸಂಶೋಧನಾ ವಿದ್ಯಾರ್ಥಿ ಆಗಿರುವ ಮಂಜುನಾಥ ಅವರು ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *