ಮದ್ಯ ನಿಷೇಧಿಸಿ ಎಂದವರ ವಿರುದ್ಧ ಕಿಡಿಕಾರಿದ ಶೆಟ್ಟರ್

Public TV
1 Min Read
Jagadish Shetter

ಧಾರವಾಡ: ಲಾಕ್‍ಡೌನ್ ಮುಂಚೆಯೇ ಮದ್ಯ ಮಾರಾಟ ಇತ್ತಲ್ಲ, ಆಗ ಯಾಕೆ ಮದ್ಯ ನಿಷೇಧದ ಬಗ್ಗೆ ಚರ್ಚೆ ಆಗಲಿಲ್ಲ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಮದ್ಯ ನಿಷೇಧ ಮಾಡುವುದರ ವಿರುದ್ಧ ಕಿಡಿಕಾಡಿದ್ದಾರೆ.

ಮದ್ಯ ಮಾರಾಟ ನಿಷೇಧಕ್ಕೆ ಬಿಜೆಪಿ ಶಾಸಕ ಬೆಲ್ಲದ ಆಗ್ರಹ ವಿಚಾರವಾಗಿ ಧಾರವಾಡದಲ್ಲಿ ಮಾತನಾಡಿದ ಅವರು, ವೈಯಕ್ತಿಕ ಅಭಿಪ್ರಾಯಗಳಿಗೆ ನಾನು ಪ್ರತಿಕ್ರಿಯೆ ಕೊಡಲ್ಲ ಎಂದು ಹೇಳಿದರು. ಸರ್ಕಾರ ನಡೆಸುವುದು ಬೇರೆ, ಅಭಿಪ್ರಾಯ ಹೇಳುವುದು ಬೇರೆ. ಎಲ್ಲೆಲ್ಲಿ ಅಭಿಪ್ರಾಯ ಹೇಳಬೇಕು ಅಲ್ಲಿ ಹೇಳುತ್ತೇವೆ. ವೈಯಕ್ತಿಕವಾಗಿ ಜನರೇ ಮದ್ಯ ಬೇಡ ಎನ್ನಬೇಕು ಎಂದು ಹೇಳಿದರು.

Arvind Bellada

ಜನ ಸಹಕಾರ ಕೊಟ್ಟಾಗ ಮಾತ್ರ ಲಾಕ್‍ಡೌನ್ ಯಶಸ್ಸು ಆಗುತ್ತದೆ. ಹಾಗೆಯೇ ಜನ ಮದ್ಯಪಾನ ಮಾಡುವುದಿಲ್ಲ ಎಂದು ನಿರ್ಣಯ ತಗೊಳ್ಳಲಿ. ಸಾವಿರ ಜನ ತಗೊಳ್ಳಿ, ಲಕ್ಷ ಜನ ಸ್ವಯಂ ನಿರ್ಧಾರ ತೆಗದುಕೊಳ್ಳಲಿ. ಎಲ್ಲವನ್ನು ಸರ್ಕಾರವೇ ಮಾಡಬೇಕಾ? ಕುಡುಕರಿಗೆ ಮಠಕ್ಕೆ ಪ್ರವೇಶ ಇಲ್ಲ ಎಂದು ಮಠಾಧೀಶರು ಹೇಳಲಿ. ಸ್ವಾಮೀಜಿಗಳು, ಧರ್ಮಗುರುಗಳು, ಪ್ರಾರ್ಥನಾ ಮಂದಿರಗಳು ನಿರ್ಧಾರ ತೆಗೆದುಕೊಳ್ಳಲಿ ಎಂದರು.

Liquor Shops 2 copy

ಈ ಪ್ರಾರ್ಥನಾ ಮಂದಿರಕ್ಕೆ ಕುಡುಕರ ಬರಬೇಡಿ ಎಂದು ಧರ್ಮಗುರುಗಳೇ ಹೇಳಲಿ. ಇಲ್ಲಿ ಕುಡುಕರಿಗೆ ಪ್ರವೇಶ ಇಲ್ಲ ಎಂದು ನಿರ್ಧಾರ ಮಾಡಿ ಬಿಡಲಿ ಎಂದರು. ಬಿಹಾರ, ಗುಜರಾತ್‍ನಲ್ಲಿ ಮದ್ಯ ಮಾರಾಟ ನಿಷೇಧ ವಿಚಾರವಾಗಿ ಮಾತನಾಡಿದ ಅವರು, ಒಂದು ಸಲ ಬಿಹಾರ ಗುಜರಾತ್ ಹೋಗಿ ನೋಡಿ ಬನ್ನಿ, ಅಲ್ಲಿ ಏನ್ ನಡೆಯುತ್ತದೆ ಎಂದು ಇಲ್ಲಿ ಡಿಬೇಟ್ ಮಾಡೋದಲ್ಲ ಎಂದು ಗುಜರಾತ್‍ನಲ್ಲಿ ಮದ್ಯ ಮಾರಾಟ ಇದೆ ಎಂದು ಪರೋಕ್ಷವಾಗಿ ಒಪ್ಪಿಕೊಂಡರು.

Share This Article
Leave a Comment

Leave a Reply

Your email address will not be published. Required fields are marked *