ಮಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ (Dharmasthala Case) ಸಂಬಂಧಿಸಿದಂತೆ ಬೆಳ್ತಂಗಡಿ ಕೋರ್ಟ್ಗೆ ಗುರುವಾರ ಎಸ್ಐಟಿ (SIT) ತನಿಖಾ ವರದಿ ಸಲ್ಲಿಕೆ ಮಾಡಿದೆ.
ತನಿಖಾಧಿಕಾರಿ ಜಿತೇಂದ್ರ ದಯಾಮಾ ನೇತೃತ್ವದಲ್ಲಿ ಒಟ್ಟು 3,923 ಪುಟಗಳ ತನಿಖಾ ವರದಿಯನ್ನು ಕೋರ್ಟ್ಗೆ ಸಲ್ಲಿಸಲಾಗಿದೆ. 5 ತಿಂಗಳ ಬಳಿಕ ತನಿಖಾ ವರದಿ ಸಲ್ಲಿಕೆ ಮಾಡಲಾಗಿದೆ.
ತನಿಖಾ ವರದಿಯು ಉತ್ಖನನ, ಪ್ರತ್ಯಕ್ಷದರ್ಶಿಗಳ ಸಾಕ್ಷಿಯನ್ನು ಒಳಗೊಂಡಿದೆ.
ಪ್ರಕರಣದ ಈವರೆಗೂ ನಡೆದತಂಹ ತನಿಖಾ ವರದಿ ಸಲ್ಲಿಕೆ ಮಾಡಿದ್ದಾರೆ. ಚಿನ್ನಯ್ಯ ಬಂಧನದ ಬಳಿಕ 90 ದಿನದಲ್ಲಿ ವರದಿ ಸಲ್ಲಿಕೆ ಮಾಡಬೇಕೆಂಬ ನಿಯಮವಿದೆ. ಆ ಹಿನ್ನೆಲೆಯಲ್ಲಿ ಇಂದು ಎಸ್ಐಟಿ ಅವರು ತನಿಖಾ ವರದಿ ಸಲ್ಲಿಸಿದ್ದಾರೆ.
ಸಂಪೂರ್ಣ ತನಿಖೆ ಮಾಡಲು ಎಸ್ಐಟಿಗೆ ಆಗಲಿಲ್ಲ. ಚಿನ್ನಯ್ಯ ತೋರಿಸಿದ ಜಾಗಗಳಲ್ಲಿ ಕುರುಹು ಸಿಗಲಿಲ್ಲ. ಹೀಗಾಗಿ, ಷಡ್ಯಂತ್ರ ನಡೆದಿರಬಹುದೆಂದು ಬಂಧಿಸಿ ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಆತ ಹೇಳಿದ ಹೇಳಿಕೆಗಳನ್ನ ಸಂಗ್ರಹಿಸಿ ಎಸ್ಐಟಿ ತನಿಖಾ ವರದಿ ಸಲ್ಲಿಸಿದ್ದಾರೆ.


