ಹನುಮ ಮಾಲೆ ವಿಜೃಂಭಣೆಯಿಂದ ವಿಸರ್ಜನೆ

Public TV
1 Min Read
KPL Hanuma Jayanti A copy

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ನಡೆದ ಹನುಮ ಮಾಲಾಧಾರಿ ವಿಸರ್ಜನೆ ಹೊಸ ಆರಂಭಕ್ಕೆ ಮುನ್ನುಡಿ ಬರೆದಿದೆ.

ಹನುಮ ಜಯಂತಿ ಹಿನ್ನೆಲೆಯಲ್ಲಿ ವ್ರತ ಮುಗಿಸಿದ ಸಾವಿರಾರು ಮಾಲಾಧಾರಿಗಳು ಆಂಜನಾದ್ರಿ ಪರ್ವತಕ್ಕೆ ಆಗಮಿಸಿ ಹನುಮ ಮಾಲೆ ವಿಸರ್ಜನೆ ಮಾಡಿದರು. ಇದಕ್ಕೂ ಮೊದಲು ಗಂಗಾವತಿ ನಗರದಲ್ಲಿ ಹನುಮ ಮಾಲಾಧಾರಿಗಳಿಂದ ಸಂಕೀರ್ಥ ಯಾತ್ರೆ ನಡೆಯಿತು. ಸಂಕೀರ್ಥ ಯಾತ್ರೆಗೆ ಮೆರಗು ಎನ್ನುವಂತೆ ಗಂಗಾವತಿ ನಗರದ ಸಿಬಿಎಸ್ ವೃತ್ತದಲ್ಲಿ ಮುಸ್ಲಿಂ ಸಮುದಯದವರು ಮಸೀದಿಯ ಮುಂದೆಯೇ ಹಣ್ಣು ವಿತರಿಸುವ ಮೂಲಕ ಭಕ್ತರನ್ನು ಸ್ವಾಗತಿಸಿಕೊಂಡರು. ಈ ಮೂಲಕ ಗಂಗಾವತಿ ಸೌಹರ್ದತೆಗೆ ಹೆಸರುವಾಸಿ ಎನ್ನುವುದನ್ನು ಸಾಬೀತು ಮಾಡಿದರು.

KPL Hanuma Jayanti 1 copy

ವಿಶ್ವ ಹಿಂದೂ ಪರಿಷತ್, ಭಜರಂಗದಳ ನೇತೃತ್ವದಲ್ಲಿ 7 ವರ್ಷಗಳಿಂದ ಇಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಎರಡು ವರ್ಷದ ಹಿಂದೆ ಗಂಗಾವತಿಯಲ್ಲಿ ಹನುಮಮಾಲಾಧಾರಿಗಳ ಶೋಭಾಯಾತ್ರೆ ವೇಳೆ ಗಲಭೆಯಾಗಿತ್ತು. ಇದರಿಂಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸಂಕೀರ್ಥ ಯಾತ್ರೆಗೆ ಹಾಗೂ ಮೆರವಣಿಗೆಗೆ ಸೂಕ್ತ ವ್ಯವಸ್ಥೆ ಮಾಡಿಕೊಂಡಿತ್ತು. ಆಂಜನಾದ್ರಿ ಬೆಟ್ಟದಲ್ಲಿ ಪವಮಾನ ಹೋಮ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಇದೇ ವೆಳೆ 575 ಮೆಟ್ಟಿಲುಗಳನ್ನು ಹತ್ತಿ ಬಂದ ಭಕ್ತರು ಹನುಮನ ದರ್ಶನ ಪಡೆದು ಪುನೀತರಾದರು. ಸುಮಾರು 7 ವರ್ಷಗಳಿಂದ ಹನುಮಮಾಲಾಧಾರಿಗಳು ವ್ರತವನ್ನು ಆಚರಿಸುತ್ತಾ ಬಂದಿದ್ದು, ರಾಜ್ಯದ ರಾಯಚೂರು, ಬಳ್ಳಾರಿ, ಗದಗ, ಬೆಳಗಾವಿ, ಧಾರವಾಡ, ಕಾರವಾರ, ಕಲಬುರ್ಗಿ, ಯಾದಗಿರಿ ಸೇರಿದಂತೆ 16 ಜಿಲ್ಲೆಗಳಿಂದ 20 ಸಾವಿರ ಮಾಲಾಧಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

Hanuma Jayanti A copy

ಹನುಮನ ಜನ್ಮ ಸ್ಥಳದಲ್ಲಿ ಹನುಮ ಮಾಲಾಧಾರಿಗಳು ಮಾಲೆಯನ್ನು ಶ್ರದ್ಧಾ -ಭಕ್ತಿಯಿಂದ ವಿಸರ್ಜನೆ ಮಾಡಿದರು. ಅಲ್ಲದೆ ಇನ್ಮುಂದೆ ಗಂಗಾವತಿಯಲ್ಲಿ ಗಲಭೆ ಆಗಲ್ಲ ಎನ್ನುವಂತೆ ಮುಸ್ಲಿಂ-ಹಿಂದೂ ಭಾಂದವರು ಈ ಬಾಂಧವ್ಯದ ಹಬ್ಬವನ್ನಾಗಿ ಆಚರಣೆ ಮಾಡಿದ್ದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

https://www.facebook.com/publictv/videos/668581300336125/

Share This Article
Leave a Comment

Leave a Reply

Your email address will not be published. Required fields are marked *