ಕೊಕಟನೂರು ಯಲ್ಲಮ್ಮನ ಜಾತ್ರೆಯಲ್ಲಿ ಭಕ್ತರಿಗೆ ಚಾಕುವಿನಿಂದ ಇರಿದು ದರೋಡೆ

Public TV
1 Min Read
ckd jatre

ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರು ಯಲ್ಲಮ್ಮನ ಜಾತ್ರೆಯಲ್ಲಿ ಭಕ್ತರಿಗೆ ಚಾಕುವಿನಿಂದ ಇರಿದು ದರೋಡೆ ಮಾಡಲಾಗಿದೆ.

ckd jatre 3

ಉತ್ತರ ಕರ್ನಾಟಕ-ದಕ್ಷಿಣ ಮಹಾರಾಷ್ಟ್ರ ರಾಜ್ಯದ ಲಕ್ಷಾಂತರ ಭಕ್ತರು ಭಾಗವಹಿಸುವ ಜಾತ್ರೆಯಲ್ಲಿ ಗುರುವಾರ ತಡರಾತ್ರಿ ಈ ಘಟನೆ ನಡೆದಿದೆ. ಮಹಾರಾಷ್ಟ್ರದ ಕೊಲ್ಹಾಪುರ ನಿವಾಸಿಗಳಾದ ಸತೀಶ ಪಾಟೀಲ ಹಾಗೂ ಪ್ರವೀಣ ಸ್ವಾಮಿ ಬಹಿರ್ದೆಸೆಗೆ ಹೋದ ವೇಳೆ ಚಾಕುವಿನಿಂದ ಇರಿದಿದ್ದಾರೆ.

ckd jatre

20ಕ್ಕೂ ಹೆಚ್ಚು ದರೋಡೆಕೋರರ ತಂಡ ಈ ಕೃತ್ಯವೆಸಗಿದ್ದು, ಕೊರಳಲ್ಲಿನ ಚಿನ್ನದ ಸರ, ಕೈಯಲ್ಲಿನ ರಿಂಗ್, ಮೊಬೈಲ್, ನಗದು ಹಣ ದೋಚಿ ಪರಾರಿಯಾಗಿದೆ.

ckd jatre 4

ಅಥಣಿ ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಯಿಂದ ಭಕ್ತರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

 ckd jatre 1 1

ckd jatre 2

Share This Article
Leave a Comment

Leave a Reply

Your email address will not be published. Required fields are marked *