ಶ್ರೀಶೈಲಂನಲ್ಲಿ ರಾಜ್ಯದ ಭಕ್ತರಿಗೆ ಅನ್ಯಾಯ – ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಭಕ್ತರ ಪರದಾಟ

rcr srishaila 1

ರಾಯಚೂರು: ಶ್ರೀಶೈಲ ಭ್ರಮರಾಂಭ ಮಲ್ಲಿಕಾರ್ಜುನ ದೇವಸ್ಥಾನ ಎಂದರೆ ದೇಶದ ಮೂಲೆ ಮೂಲೆಯಲ್ಲೂ ಭಕ್ತರಿದ್ದಾರೆ. ಆದರೆ ಶ್ರೀಶೈಲದಲ್ಲಿ ಕರ್ನಾಟಕದ ಭಕ್ತರಿಗೆ ಮಾತ್ರ ಅನ್ಯಾಯವಾಗುತ್ತಿದೆ. ಹೀಗಾಗಿ ರಾಯಚೂರಿನ ನೂರಾರು ಭಕ್ತರು ಹೋರಾಟಕ್ಕೆ ಮುಂದಾಗಿದ್ದಾರೆ.

ಕರ್ನಾಟಕ ಸರ್ಕಾರ ಪರಭಾರೆಯಿರುವ 4 ಎಕರೆ 13 ಗುಂಟೆ ಜಾಗ ಈಗ ಆಂಧ್ರಪ್ರದೇಶ ಪಾಲಾಗುತ್ತಿದೆ. ವೀರೇಂದ್ರ ಪಾಟೀಲ್ ಮುಖ್ಯಮಂತ್ರಿ ಇದ್ದ ಅವಧಿಯಲ್ಲಿ ಕರ್ನಾಟಕ ಭಕ್ತರಿಗಾಗಿ 99 ವರ್ಷ ಕಾಲ ರಾಜ್ಯಕ್ಕೆ ನೀಡಿದ ಭೂಮಿ ರಾಜ್ಯ ಸರ್ಕಾದಿಂದಲೇ ನಿರ್ಲಕ್ಷ್ಯಕ್ಕೊಳಗಾಗಿದೆ. ಹೀಗಾಗಿ ಶ್ರೀಶೈಲಂ ಆಡಳಿತ ಮಂಡಳಿ ಕರ್ನಾಟಕಕ್ಕೆ ಮಾಹಿತಿಯನ್ನು ನೀಡದೆ ಕಟ್ಟಡ ನಿರ್ಮಿಸಿಕೊಳ್ಳುತ್ತಿದ್ದಾರೆ.

rcr srishaila

ಶ್ರೀಶೈಲಂನಲ್ಲಿರುವ ಕರ್ನಾಟಕ ಛತ್ರ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿದ್ದು, ಭಕ್ತರಿಗೆ ಯಾವುದೇ ವ್ಯವಸ್ಥೆ ಇಲ್ಲದಂತಾಗಿದೆ. ರಾಜ್ಯದಿಂದ ತೆರಳುವ ಸಾವಿರಾರು ಭಕ್ತರು ವಸತಿ ವ್ಯವಸ್ಥೆ ಇಲ್ಲದೆ ಶ್ರೀಶೈಲಂನಲ್ಲಿ ಪರದಾಡುತ್ತಿದ್ದಾರೆ. ಹೀಗಾಗಿ ರಾಯಚೂರಿನ ಭಕ್ತರು ಶ್ರೀಶೈಲಂನಲ್ಲಿ ಇಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ರಾಜ್ಯಕ್ಕೆ ನೀಡಿದ ಜಾಗವನ್ನು ಅಭಿವೃದ್ಧಿಪಡಿಸಿ ರಾಜ್ಯದ ಭಕ್ತರಿಗೆ ಸೌಲಭ್ಯ ಕಲ್ಪಿಸಿಕೊಡಲು ಆಗ್ರಹಿಸಿದ್ದಾರೆ.

Comments

Leave a Reply

Your email address will not be published. Required fields are marked *