ಸುಬ್ರಮಣ್ಯ ಸ್ವಾಮಿ ದೇವಸ್ಥಾನಕ್ಕೆ ಐಫೋನ್ ಅರ್ಪಿಸಿದ ಭಕ್ತ

Public TV
1 Min Read
Iphone

ವಿಜಯವಾಡ: ಭಕ್ತರೊಬ್ಬರು ದೇವರ ಹುಂಡಿಗೆ ಐಫೋನ್ 6ಎಸ್ ಫೋನ್ ಹಾಕಿರೋ ಘಟನೆ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ವಿಜಯವಾಡದಲ್ಲಿ ನಡೆದಿದೆ.

ವಿಜಯವಾಡದ ಮೊಪಿಡೆವಿ ದೇವಾಲಯದ ಸಿಬ್ಬಂದಿಗಳು ಹುಂಡಿಯಲ್ಲಿನ ಕಾಣಿಕೆಯನ್ನು ನೋಡುತ್ತಿರುವಾಗ ಒಬ್ಬ ಭಕ್ತನು ತನ್ನ ಐಫೋನ್ ಹುಂಡಿಗೆ ಹಾಕಿರುವುದು ಶನಿವಾರ ಬೆಳಕಿಗೆ ಬಂದಿದೆ.

ಆ ಭಕ್ತ ಇತ್ತೀಚೆಗೆ ಸ್ಮಾರ್ಟ್ ಫೋನ್ ವ್ಯವಹಾರವನ್ನು ಪ್ರಾರಂಭಿಸಿರಬಹುದು ಮತ್ತು ದೇವರನ್ನು ತೃಪ್ತಿಪಡಿಸಲು ಹುಂಡಿಯಲ್ಲಿ ಐಫೋನ್ ಹಾಕಿರಬಹುದೆಂದು ಸುಬ್ರಮಣ್ಯ ಸ್ವಾಮಿ ದೇವಾಲಯದ ಸಿಬ್ಬಂದಿಗಳು ಊಹಿಸಿದ್ದಾರೆ.

ಇದೇ ಮೊದಲ ಬಾರಿಗೆ ಭಕ್ತರೊಬ್ಬರು ಹುಂಡಿಗೆ ಸ್ಮಾರ್ಟ್ ಫೋನ್ ಹಾಕಿದ್ದು, ಈ ಬಗ್ಗೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಶರದಾ ಕುಮಾರ್ ಅವರಿಗೆ ಸಿಬ್ಬಂದಿಗಳು ವಿಷಯ ತಿಳಿಸಿದ್ದಾರೆ.

ದೇವಾಲಯದ ಸಮಿತಿಯು ಈ ಉಡುಗೊರೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪತ್ರ ಬರೆಯಲು ನಿರ್ಧರಿಸಿದೆ. ಎಂಡೋಮೆಂಟ್ ಇಲಾಖೆಯಿಂದ ಸೂಚಿಸಿದ ಪ್ರಕಾರ, ಯಾವುದೇ ವಿದ್ಯುತ್ ಸಾಧನ ಅಥವಾ ಸ್ಮಾರ್ಟ್ ಫೋನ್ ಗಳನ್ನು ಹುಂಡಿಗೆ ಹಾಕಿದರೆ ಅವುಗಳನ್ನು ಮಣ್ಣಿನಲ್ಲಿ ಹೂತುಹಾಕಲಾಗುತ್ತದೆ ಎಂದು ದೇವಸ್ಥಾನದ ಸೂಪರಿಂಟೆಂಡೆಂಟ್ ಎ.ಮಧುಸೂಧನ್ ಹೇಳಿದ್ದಾರೆ.

ಈ ದೇವಸ್ಥಾನ ವಿಜಯವಾಡದಿಂದ 65 ಕಿ.ಮೀ ದೂರದಲ್ಲಿದೆ. ಇಲ್ಲಿಗೆ ಭಕ್ತಾದಿಗಳು ಬರಲು ಕಾಲುದಾರಿಯು ಸಹ ಇದೆ. ಈ ದೇವಾಲಯದಲ್ಲಿ ಸರ್ಪ ದೋಷ ನಿವಾರಣೆ, ಕೇತು ದೋಷ ಪೂಜೆ ಮತ್ತು ಅನಪತ್ಯ ದೋಷಕ್ಕೆ ಸಂಬಂಧಿಸಿದ ಪೂಜೆಗಳನ್ನು ಇಲ್ಲಿ ಮಾಡುತ್ತಾರೆ. ಹೀಗಾಗಿ ಈ ದೇವಾಲಯಕ್ಕೆ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಬರುತ್ತಾರೆ. ಭಕ್ತರು ದೃಷ್ಟಿ ಮತ್ತು ಚರ್ಮಕ್ಕೆ ಸಂಬಂಧಿಸಿದ ದೋಷಗಳನ್ನು ಗುಣಪಡಿಸುವಂತೆ ಇಲ್ಲಿ ಪ್ರಾರ್ಥನೆ ಮಾಡುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *