ಬೆಂಗಳೂರು: ಮಾತಾ ಮಾಣಿಕೇಶ್ವರಿ ದೇವಸ್ಥಾನವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಮಾಡುವುದಾಗಿ ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ (HK Patil) ಘೋಷಣೆ ಮಾಡಿದರು.ಇದನ್ನೂ ಓದಿ: ಅಪಾಯವಿದೆ ಎಚ್ಚರಿಕೆ ಅಖಾಡದಲ್ಲೋರ್ವ ರಂಗಭೂಮಿ ಪ್ರತಿಭೆ!
Advertisement
ವಿಧಾನ ಪರಿಷತ್ ಕಲಾಪದಲ್ಲಿ ಕಾಂಗ್ರೆಸ್ನ (Congress) ತಿಪ್ಪಣ್ಣ ಕಮಕನೂರು ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಮಾತಾ ಮಾಣಿಕೇಶ್ವರಿಯ ಭಕ್ತ. ಮಾತಾ ಮಾಣಿಕೇಶ್ವರಿ ದೇವಾಲಯವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಮಾಡುತ್ತೇವೆ. ಇದಕ್ಕೆ ಬೇಕಾದ ಎಲ್ಲಾ ಪ್ರಕ್ರಿಯೆಯನ್ನು ಪ್ರವಾಸೋದ್ಯಮ ಇಲಾಖೆ ಮಾಡಲಿದೆ ಎಂದು ವಿವರಿಸಿದರು.
Advertisement
ಇದಕ್ಕೂ ಮುನ್ನ ಪ್ರಶ್ನಸಿದ್ದ ತಿಪ್ಪಣ್ಣ ಕಮಕನೂರು, ಮಾತಾ ಮಾಣಿಕೇಶ್ವರಿ ದೇವಸ್ಥಾನವನ್ನು ಪ್ರವಾಸಿ ತಾಣವಾಗಿದೆ, ಅದನ್ನು ಅಭಿವೃದ್ಧಿ ಮಾಡಬೇಕು. ಬಡವರ ದೇವಾಲಯ ಎಂದು ಅಭಿವೃದ್ಧಿ ಆಗಿಲ್ಲ. ದೇವಸ್ಥಾನಕ್ಕೆ ಎರಡು ಕೋಟಿ ರೂ. ಅನುದಾನ ನೀಡಬೇಕು ಎಂದು ಮನವಿ ಮಾಡಿದರು.ಇದನ್ನೂ ಓದಿ: ಹೈಕಮಾಂಡ್, ಶಾಸಕರ ಬೆಂಬಲ ಇರೋವರೆಗೂ ಸಿದ್ದರಾಮಯ್ಯರೇ ಸಿಎಂ: ಸಂಸದ ಸುನೀಲ್ ಬೋಸ್