ತುಮಕೂರು: ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಅವರು ಇಂದು ಜಿಲ್ಲೆಯ ಸೀಬಿ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ಪರಮಶ್ವರ್ ಅವರು ತಾವು ಹೊತ್ತುಕೊಂಡಿದ್ದ ಹರಕೆ ತೀರಿಸಲೆಂದು ದೇವಾಸ್ಥಾನಕ್ಕೆ ಹೋಗಿದ್ದರು. ಡಿಸಿಎಂ ಬೇಟಿ ನೀಡುತ್ತಿದ್ದಂತೆಯೇ ಅವರ ಬೆಂಬಲಿಗರು ಹೂ ಹಾರಗಳನ್ನು ಹಾಕಿ ಸ್ವಾಗತಿಸಿಕೊಂಡಿದ್ದಾರೆ. ಬಳಿಕ ಅವರು ದೇವಸ್ಥಾನದ ಒಳಗೆ ಪ್ರವೇಶಿಸುತ್ತಿದ್ದಂತೆ ಸ್ವತಃ ತಾವೇ ದೇವಮಾನವರಾಗಿದ್ದಾರೆ. ದೇವಸ್ಥಾನಕ್ಕೆ ಬಂದ ಮಹಿಳಾ ಮಣಿಗಳು ಹಾಗೂ ಕಾರ್ಯಕರ್ತರು ದೇವರಿಗೆ ಕೈ ಮುಗಿಯೋದನ್ನು ಬಿಟ್ಟು ಪರಮೇಶ್ವರ್ ಕಾಲಿಗೆ ಎರಗಿದ್ದಾರೆ.
ಒಬ್ಬರಾದ ಮೇಲೆ ಒಬ್ಬರು ಸರತಿ ಸಾಲಿನಲ್ಲಿ ನಿಂತು ಪರಂ ಕಾಲಿಗೆ ಬಿದ್ದಿದ್ದಾರೆ. ಇಷ್ಟಾದರೂ ತುಟಿಕ್ ಪಿಟಿಕ್ ಅನ್ನದ ಡಿಸಿಎಂ ಕಾಲಿಗೆ ನಮಸ್ಕರಿಸುತ್ತಿರುವುದನ್ನು ನಿರಾಕರಿಸಿಲ್ಲ. ಎಲ್ಲರೂ ಕಾಲಿಗೆ ಬೀಳುವವರೆಗೂ ಸಾವಧಾನವಾಗಿ ನಿಂತುಕೊಂಡಿದ್ದರು. ಪ್ರಗತಿಪರರು ಅಂದುಕೊಳ್ಳುವ ಜಿ.ಪರಮೇಶ್ವರ್ ಈ ನಡೆಗೆ ತೀವ್ರ ಖಂಡನೆ ವ್ಯಕ್ತವಾಗಿದೆ.