ಗುಡಿಸಲು ಮುಕ್ತ ರಾಜ್ಯದ ಕನಸಿಗೆ ಬ್ರೇಕ್

Public TV
1 Min Read
Rural Home Ashraya Mane

ಬೆಂಗಳೂರು: ಗುಡಿಸಲು ಮುಕ್ತ ರಾಜ್ಯದ ಕನಸಿಗೆ ಸ್ವತಃ ರಾಜ್ಯ ಸರ್ಕಾರದೇ ಬ್ರೇಕ್ ಹಾಕಿದೆ. ಸಿದ್ದರಾಮಯ್ಯನವರ ಸರ್ಕಾರವಿದ್ದಾಗ ವಸತಿ ಇಲಾಖೆಯಿಂದ ವಸತಿ ರಹಿತರಿಗೆ 16,38,564 ಮನೆ ನಿರ್ಮಿಸಲಾಗಿತ್ತು. ಸಾಮಾನ್ಯ ವಸತಿ ರಹಿತರಿಗೆ 1.20 ಲಕ್ಷ, ಪರಿಶಿಷ್ಟರಿಗೆ 1.70 ಲಕ್ಷ ಹಣದಲ್ಲಿ ಮನೆ ನಿರ್ಮಾಣ ಯೋಜನೆ ಇದಾಗಿದೆ.

ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಳೆದ 6 ತಿಂಗಳಿನಲ್ಲಿ ಒಂದೇ ಒಂದು ಮನೆ ಮಂಜೂರು ಮಾಡಿಲ್ಲ. ಮಂಜೂರಾಗಿದ್ದ ಮನೆಗಳಿಗೆ ಅನುದಾನವನ್ನು ತಡೆಹಿಡಿಯಲಾಗಿದೆ. ಕುಮಾರಸ್ವಾಮಿ ಸರ್ಕಾರದ ಕೊನೆಯ 2 ತಿಂಗಳು ಸೇರಿದಂತೆ ಕಳೆದ 8 ತಿಂಗಳಿಂದ ಯೋಜನೆಯ ಅನುದಾನ ನಿಲ್ಲಿಸಲಾಗಿದೆ.

Rural Home Ashraya Mane 1

2 ವರ್ಷದ ಹಿಂದೆ ಒಟ್ಟು 13,97,115 ಮನೆಗಳಿಗೆ ಅನುಮತಿ ನೀಡಲಾಗಿತ್ತು. ಒಟ್ಟು 1,36,741 ಮನೆ ಬ್ಲಾಕ್ ಮಾಡಲಾಗಿದೆ. ಒಟ್ಟು 3.59919 ಮನೆಗಳು ಪ್ರೊಗ್ರೆಸ್ ಇವೆ. 3,60,412 ಮನೆಗಳಿಗೆ ಅವಕಾಶ ನಿರಾಕರಿಸಲಾಗಿದೆ. ಹೀಗೆ ಕಳೆದ 8 ತಿಂಗಳಿನಿಂದ ಬಡವರ ಪಾಲಿನ ವಸತಿ ಯೋಜನೆಗೆ ಹಣವೇ ಬಿಡುಗಡೆ ಮಾಡದೇ ಲಕ್ಷಾಂತರ ಜನರ ಕನಸಿನ ಗುಡಿಸಲು ಮುಕ್ತ ಯೋಜನೆ ಜಾರಿಯಾಗದೆ ಅರ್ಧಕ್ಕೆ ನಿಂತಿದೆ.

Share This Article
Leave a Comment

Leave a Reply

Your email address will not be published. Required fields are marked *